<p><strong>ನಾಗ್ಪುರ: </strong>ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಮನಸ್ ಆಗ್ರೋ ಇಂಡಸ್ಟ್ರೀಸ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ನಲ್ಲಿ ಶನಿವಾರ ಮಧ್ಯಾಹ್ನ ಬಾಯ್ಲರ್ ಸ್ಫೋಟಗೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮಧ್ಯಾಹ್ನ 2.15ರ ಸುಮಾರಿಗೆ ಬೇಲಾ ಗ್ರಾಮದಲ್ಲಿರುವ ಕಂಪನಿಯ ಜೈವಿಕ ಅನಿಲ ಘಟಕದ ಬಳಿ ಅವಘಡ ಸಂಭವಿಸಿದೆ.</p>.<p>ಮೃತರನ್ನು ವಾಡ್ಗಾಂವ್ ಗ್ರಾಮದ ನಿವಾಸಿಗಳಾದ ಮಂಗೇಶ್ ಪ್ರಭಾಕರ್ ನೌಕರ್ಕರ್ (21), ಲಿಲಾಧರ್ ವಾಮನ್ರಾವ್ ಶೆಂಡೆ (42), ವಾಸುದೇಡಿಯೋ ಲಾಡಿ (30), ಸಚಿನ್ ಪ್ರಕಾಶ್ ವಾಘಮರೆ (24) ಮತ್ತು ಪ್ರಫುಲ್ ಪಾಂಡುರಂಗ್ ಮೂನ್ (25) ಎಂದು ಗುರುತಿಸಲಾಗಿದೆ.</p>.<p>ಸಚಿನ್ ವಾಘಮರೆ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದರೆ, ಇತರರು ಸಹಾಯಕರಾಗಿದ್ದರು. ಎಲ್ಲಾ ಐವರು ಕಾರ್ಮಿಕರು ಭೀಕರವಾದ ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಘಟನಾ ಸ್ಥಳದಲ್ಲಿ ಸ್ಫೋಟದ ಬಳಿಕ ದಟ್ಟವಾದ ಹೊಗೆ ಆವರಿಸಿದೆ. ಸದ್ಯ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಓಲಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗ್ಪುರ: </strong>ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಮನಸ್ ಆಗ್ರೋ ಇಂಡಸ್ಟ್ರೀಸ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ನಲ್ಲಿ ಶನಿವಾರ ಮಧ್ಯಾಹ್ನ ಬಾಯ್ಲರ್ ಸ್ಫೋಟಗೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮಧ್ಯಾಹ್ನ 2.15ರ ಸುಮಾರಿಗೆ ಬೇಲಾ ಗ್ರಾಮದಲ್ಲಿರುವ ಕಂಪನಿಯ ಜೈವಿಕ ಅನಿಲ ಘಟಕದ ಬಳಿ ಅವಘಡ ಸಂಭವಿಸಿದೆ.</p>.<p>ಮೃತರನ್ನು ವಾಡ್ಗಾಂವ್ ಗ್ರಾಮದ ನಿವಾಸಿಗಳಾದ ಮಂಗೇಶ್ ಪ್ರಭಾಕರ್ ನೌಕರ್ಕರ್ (21), ಲಿಲಾಧರ್ ವಾಮನ್ರಾವ್ ಶೆಂಡೆ (42), ವಾಸುದೇಡಿಯೋ ಲಾಡಿ (30), ಸಚಿನ್ ಪ್ರಕಾಶ್ ವಾಘಮರೆ (24) ಮತ್ತು ಪ್ರಫುಲ್ ಪಾಂಡುರಂಗ್ ಮೂನ್ (25) ಎಂದು ಗುರುತಿಸಲಾಗಿದೆ.</p>.<p>ಸಚಿನ್ ವಾಘಮರೆ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದರೆ, ಇತರರು ಸಹಾಯಕರಾಗಿದ್ದರು. ಎಲ್ಲಾ ಐವರು ಕಾರ್ಮಿಕರು ಭೀಕರವಾದ ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಘಟನಾ ಸ್ಥಳದಲ್ಲಿ ಸ್ಫೋಟದ ಬಳಿಕ ದಟ್ಟವಾದ ಹೊಗೆ ಆವರಿಸಿದೆ. ಸದ್ಯ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಓಲಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>