ಎರಡು ದಿನಗಳ ಭೇಟಿಗಾಗಿ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರು ಲಡಾಖ್ಗೆ ತೆರಳಿದ್ದ ಸಂದರ್ಭದಲ್ಲಿನ ಅವರ ಭಾಷಣವನ್ನು ಹಂಚಿಕೊಂಡಿರುವ ರಾಹುಲ್, ಚೀನಾ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದೆ ಮತ್ತು ಸರ್ಕಾರವು ಚೇಂಬರ್ಲೈನ್ನಂತೆ ವರ್ತಿಸುತ್ತಿದೆ. ಇದು ಚೀನಾವನ್ನು ಮತ್ತಷ್ಟು ಧೈರ್ಯಗೊಳಿಸುತ್ತದೆ. ಸರ್ಕಾರದ ಪುಕ್ಕಲುತನದ ಕ್ರಮಗಳಿಂದಾಗಿ ಭಾರತವು 'ಭಾರಿ ಬೆಲೆ' ತೆರಲಿದೆ ಎಂದು ಕಿಡಿಕಾರಿದ್ದಾರೆ.