ಗುಜರಾತ್ ಮೂಲದ ಸಂತೋಷ್ ಎಂಬುವವರ ಪುತ್ರಿ ಅನುಷ್ಕಾ, ಕಳೆದ ವರ್ಷದ ಜುಲೈ ತಿಂಗಳಲ್ಲಿ ಕಟ್ಟಡದ ಮೊದಲ ಮಹಡಿಯಿಂದ ಬಿದ್ದಿದ್ದಳು. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಆಕೆಗೆ ಗುಜರಾತ್ನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅದಾಗಿ ಸ್ವಲ್ಪ ಸಮಯದ ಬಳಿಕ ಆಕೆಯಲ್ಲಿ ಸೋಂಕು ಕಾಣಿಸಿದ್ದರಿಂದ ಚಿಕಿತ್ಸೆಗಾಗಿ ಕೊಚ್ಚಿಯ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ಗೆ (ಎಐಎಂಎಸ್) ದಾಖಲಿಸಲಾಯಿತು. ಆಕೆಗೆ ಇನ್ನೊಂದು ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು. ಆಕೆಯ ರಕ್ತವು ಅಪರೂಪದ ಗುಂಪಿಗೆ ಸೇರಿದ್ದು ಎಂಬುದು ವೈದ್ಯರ ಗಮನಕ್ಕೆ ಬಂದದ್ದು ಪ್ರಸಕ್ತ, ಆಕೆಯ ಶರೀರದಿಂದಲೇ ರಕ್ತವನ್ನು ತೆಗೆದಿಟ್ಟು, ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅದನ್ನೇ ಬಳಸಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.