<p>ಇಂಡೊನೇಷ್ಯಾದ ಮಳೆಕಾಡುಗಳಿಗೆ ಬಿದ್ದ ಬೆಂಕಿಯಿಂದಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳು ನಲುಗಿವೆ. ಮಾಲಿನ್ಯಕಾರಕ ಹಸಿರುಮನೆ ಅನಿಲಗಳಿಂದಾಗಿ ಮಕ್ಕಳು ಉಸಿರಾಟ ಸಂಬಂಧಿ ತೊಂದರೆಗೆ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.</p>.<p>ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಿದ್ದು, ವನ್ಯಜೀವಿಗಳು ಸಾವಿಗೀಡಾಗಿವೆ. ಜನಸಾಮಾರಿಗೂ ಬಿಸಿ ತಟ್ಟಿದೆ. ಸಾವಿರಕ್ಕೂ ಹೆಚ್ಚು ಮಂದಿ ‘ವಾಟರ್ ಬಾಂಬಿಂಗ್’ ವಿಮಾನಗಳ ಮೂಲಕ ಬೆಂಕಿ ನಂದಿಸಿದ್ದಾರೆ.</p>.<p><strong>ಕಾರಣ<br />*</strong>2015–2019ರ ಅವಧಿಯಲ್ಲೇ ದಾಖಲೆಯ ಒಣ ಹವೆ ಆಗ್ನೇಯ ಏಷ್ಯಾವನ್ನು ಈ ವರ್ಷದ ಏಪ್ರಿಲ್–ಸೆಪ್ಟೆಂಬರ್ನಲ್ಲಿ ಆವರಿಸಿದೆ. ಬೆಂಕಿ ಉಲ್ಬಣಗೊಳ್ಳಲು ಇದೇ ಕಾರಣ ಎನ್ನಲಾಗಿದೆ.</p>.<p><strong>ಪರಿಣಾಮ</strong><br />*ಮುಖಗವಸುಗಳ ಮೊರೆ ಹೋದ ಸಾರ್ವಜನಿಕರು</p>.<p>*ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳ</p>.<p>*ದಟ್ಟ ಹೊಂಜಿನಿಂದಾಗಿ ಮಲೇಷ್ಯಾ ಮತ್ತು ಇಂಡೊನೇಷ್ಯಾದಲ್ಲಿ ಬಾಗಿಲು ಮುಚ್ಚಿದ ಶಾಲೆಗಳು. ವಿಮಾನ ಸಂಚಾರದಲ್ಲಿ ವ್ಯತ್ಯಯ.</p>.<p>*ಕೃಷಿ ಭೂಮಿಗಳಿಗೂ ಹರಡಿದ ಅಗ್ನಿಯ ಕೆನ್ನಾಲಿಗೆ. ನಗರಗಳು ಮತ್ತು ಕೃಷಿ ಭೂಮಿಯ ಮೇಲೆ ಆವರಿಸಿದ ಬೂದಿ</p>.<p><strong>ಸಂತ್ರಸ್ತ ದೇಶಗಳು</strong><br />ಇಂಡೊನೇಷ್ಯಾ, ಮಲೇಷ್ಯಾ, ಸಿಂಗಪುರ, ಫಿಲಿಪ್ಪೀನ್ಸ್ , ವಿಯೆಟ್ನಾಂ, ತಿಮೋರ್, ಥಾಯ್ಲೆಂಡ್, ಪಪುವಾ ನ್ಯೂಗಿನಿ</p>.<p><strong>ಬೆಂಕಿ ಎಲ್ಲೆಲ್ಲಿ?</strong><br />ಇಂಡೊನೇಷ್ಯಾದ ಸುಮಾತ್ರ ಮತ್ತು ಬೊರ್ನಿಯೊ ದ್ವೀಪಗಳ ಮಳೆಕಾಡುಗಳು</p>.<p>*<br />ರೋಗ ನಿರೋಧಕ ಶಕ್ತಿ ಬೆಳವಣಿಗೆ ಹೊಂದಿಲ್ಲದ ಮಕ್ಕಳು ವಾಯು ಮಾಲಿನ್ಯದ ತೊಂದರೆಗೆ ಒಳಗಾಗಿದ್ದಾರೆ. ಗರ್ಭಿಣಿಯರೂ ಮಾಲಿನ್ಯದ ಪರಿ ಣಾಮಕ್ಕೆ ತುತ್ತಾಗಿದ್ದು, ಅವಧಿ ಪೂರ್ವ ಮಕ್ಕಳ ಜನನ ಪ್ರಮಾಣ ಹೆಚ್ಚಿದೆ.<br /><em><strong>-ದೊಬೇರಾ ಕೊಮಿನಿ, ಇಂಡೊನೇಷ್ಯಾದ ಯುನಿಸೆಫ್ ಪ್ರತಿನಿಧಿ</strong></em></p>.<p><strong>ಅಂಕಿ ಅಂಶ</strong></p>.<p>1 ಕೋಟಿ:ಉಸಿರಾಟ ತೊಂದರೆಗೆ ಸಿಲುಕಿರುವ ಮಕ್ಕಳ ಸಂಖ್ಯೆ</p>.<p>360ಕೋಟಿ ಟನ್:ಒಂದು ತಿಂಗಳಲ್ಲಿ ಬಿಡುಗಡೆಯಾದ ಹಸಿರು ಮನೆ ಅನಿಲ</p>.<p>760 ಕೋಟಿ ಟನ್:2015ರಿಂದ ಬಿಡುಗಡೆಯಾದ ಹಸಿರು ಮನೆ ಅನಿಲ</p>.<p>1600:ಅಗ್ನಿಕೇಂದ್ರಗಳನ್ನು ಗುರುತಿಸಲಾಗಿದ್ದು, ನಂದಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ</p>.<p>37:ಬೆಂಕಿ ನಂದಿಸಲು ಬಳಸುತ್ತಿರುವ ಜಲಬಾಂಬ್ ವಿಮಾನಗಳು</p>.<p>3,108ಚ.ಕಿ.ಮೀ:ಬೆಂಕಿಯಿಂದ ನಾಶವಾದ ಅರಣ್ಯ ಭೂಮಿ</p>.<p><strong>ಆಧಾರ: ಎಎಫ್ಪಿ, ಪಿಟಿಐ, ಯುನಿಸೆಫ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಂಡೊನೇಷ್ಯಾದ ಮಳೆಕಾಡುಗಳಿಗೆ ಬಿದ್ದ ಬೆಂಕಿಯಿಂದಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳು ನಲುಗಿವೆ. ಮಾಲಿನ್ಯಕಾರಕ ಹಸಿರುಮನೆ ಅನಿಲಗಳಿಂದಾಗಿ ಮಕ್ಕಳು ಉಸಿರಾಟ ಸಂಬಂಧಿ ತೊಂದರೆಗೆ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.</p>.<p>ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಿದ್ದು, ವನ್ಯಜೀವಿಗಳು ಸಾವಿಗೀಡಾಗಿವೆ. ಜನಸಾಮಾರಿಗೂ ಬಿಸಿ ತಟ್ಟಿದೆ. ಸಾವಿರಕ್ಕೂ ಹೆಚ್ಚು ಮಂದಿ ‘ವಾಟರ್ ಬಾಂಬಿಂಗ್’ ವಿಮಾನಗಳ ಮೂಲಕ ಬೆಂಕಿ ನಂದಿಸಿದ್ದಾರೆ.</p>.<p><strong>ಕಾರಣ<br />*</strong>2015–2019ರ ಅವಧಿಯಲ್ಲೇ ದಾಖಲೆಯ ಒಣ ಹವೆ ಆಗ್ನೇಯ ಏಷ್ಯಾವನ್ನು ಈ ವರ್ಷದ ಏಪ್ರಿಲ್–ಸೆಪ್ಟೆಂಬರ್ನಲ್ಲಿ ಆವರಿಸಿದೆ. ಬೆಂಕಿ ಉಲ್ಬಣಗೊಳ್ಳಲು ಇದೇ ಕಾರಣ ಎನ್ನಲಾಗಿದೆ.</p>.<p><strong>ಪರಿಣಾಮ</strong><br />*ಮುಖಗವಸುಗಳ ಮೊರೆ ಹೋದ ಸಾರ್ವಜನಿಕರು</p>.<p>*ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳ</p>.<p>*ದಟ್ಟ ಹೊಂಜಿನಿಂದಾಗಿ ಮಲೇಷ್ಯಾ ಮತ್ತು ಇಂಡೊನೇಷ್ಯಾದಲ್ಲಿ ಬಾಗಿಲು ಮುಚ್ಚಿದ ಶಾಲೆಗಳು. ವಿಮಾನ ಸಂಚಾರದಲ್ಲಿ ವ್ಯತ್ಯಯ.</p>.<p>*ಕೃಷಿ ಭೂಮಿಗಳಿಗೂ ಹರಡಿದ ಅಗ್ನಿಯ ಕೆನ್ನಾಲಿಗೆ. ನಗರಗಳು ಮತ್ತು ಕೃಷಿ ಭೂಮಿಯ ಮೇಲೆ ಆವರಿಸಿದ ಬೂದಿ</p>.<p><strong>ಸಂತ್ರಸ್ತ ದೇಶಗಳು</strong><br />ಇಂಡೊನೇಷ್ಯಾ, ಮಲೇಷ್ಯಾ, ಸಿಂಗಪುರ, ಫಿಲಿಪ್ಪೀನ್ಸ್ , ವಿಯೆಟ್ನಾಂ, ತಿಮೋರ್, ಥಾಯ್ಲೆಂಡ್, ಪಪುವಾ ನ್ಯೂಗಿನಿ</p>.<p><strong>ಬೆಂಕಿ ಎಲ್ಲೆಲ್ಲಿ?</strong><br />ಇಂಡೊನೇಷ್ಯಾದ ಸುಮಾತ್ರ ಮತ್ತು ಬೊರ್ನಿಯೊ ದ್ವೀಪಗಳ ಮಳೆಕಾಡುಗಳು</p>.<p>*<br />ರೋಗ ನಿರೋಧಕ ಶಕ್ತಿ ಬೆಳವಣಿಗೆ ಹೊಂದಿಲ್ಲದ ಮಕ್ಕಳು ವಾಯು ಮಾಲಿನ್ಯದ ತೊಂದರೆಗೆ ಒಳಗಾಗಿದ್ದಾರೆ. ಗರ್ಭಿಣಿಯರೂ ಮಾಲಿನ್ಯದ ಪರಿ ಣಾಮಕ್ಕೆ ತುತ್ತಾಗಿದ್ದು, ಅವಧಿ ಪೂರ್ವ ಮಕ್ಕಳ ಜನನ ಪ್ರಮಾಣ ಹೆಚ್ಚಿದೆ.<br /><em><strong>-ದೊಬೇರಾ ಕೊಮಿನಿ, ಇಂಡೊನೇಷ್ಯಾದ ಯುನಿಸೆಫ್ ಪ್ರತಿನಿಧಿ</strong></em></p>.<p><strong>ಅಂಕಿ ಅಂಶ</strong></p>.<p>1 ಕೋಟಿ:ಉಸಿರಾಟ ತೊಂದರೆಗೆ ಸಿಲುಕಿರುವ ಮಕ್ಕಳ ಸಂಖ್ಯೆ</p>.<p>360ಕೋಟಿ ಟನ್:ಒಂದು ತಿಂಗಳಲ್ಲಿ ಬಿಡುಗಡೆಯಾದ ಹಸಿರು ಮನೆ ಅನಿಲ</p>.<p>760 ಕೋಟಿ ಟನ್:2015ರಿಂದ ಬಿಡುಗಡೆಯಾದ ಹಸಿರು ಮನೆ ಅನಿಲ</p>.<p>1600:ಅಗ್ನಿಕೇಂದ್ರಗಳನ್ನು ಗುರುತಿಸಲಾಗಿದ್ದು, ನಂದಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ</p>.<p>37:ಬೆಂಕಿ ನಂದಿಸಲು ಬಳಸುತ್ತಿರುವ ಜಲಬಾಂಬ್ ವಿಮಾನಗಳು</p>.<p>3,108ಚ.ಕಿ.ಮೀ:ಬೆಂಕಿಯಿಂದ ನಾಶವಾದ ಅರಣ್ಯ ಭೂಮಿ</p>.<p><strong>ಆಧಾರ: ಎಎಫ್ಪಿ, ಪಿಟಿಐ, ಯುನಿಸೆಫ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>