<p><strong>ಬೆಂಗಳೂರು</strong>: ಕೊರೊನಾ ಕಾರಣಕ್ಕೆ 14 ದಿನಗಳ ಮನೆ ಕ್ವಾರಂಟೈನ್ ಇರಬೇಕಾಗಿದ್ದ 2.25 ಲಕ್ಷ ಮಂದಿ ನಿಯಮ ಉಲ್ಲಂಘಿಸಿ, ಮನೆಯಿಂದ ಹೊರಗಡೆ ಬಂದಿದ್ದಾರೆ. ಅವರಲ್ಲಿ 1,645 ಮಂದಿ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ.</p>.<p>ಆರೋಗ್ಯ ಇಲಾಖೆ ರೂಪಿಸಿರುವ ನಿಯಮದ ಪ್ರಕಾರ ಸೋಂಕು ಶಂಕಿತರು, ರೋಗಿಗಳ ಸಂಪರ್ಕ ಹೊಂದಿರುವವರು, ವಿದೇಶದಿಂದ ಬಂದವರು, ಅನ್ಯ ರಾಜ್ಯಗಳಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದವರು, ಮನೆ ಆರೈಕೆಗೆ ಒಳಗಾದವರು ಹಾಗೂ ಗುಣಮುಖರಾಗಿ ಮನೆಗೆ ತೆರಳಿದವರು ಕಡ್ಡಾಯವಾಗಿ ಮನೆ ಕ್ವಾರಂಟೈನ್ಗೆ ಒಳಗಾಗಬೇಕು. ಅಪಾಯದ ವರ್ಗದಲ್ಲಿರುವವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಿ, ಮನೆ ಕ್ವಾರಂಟೈನ್ಗೆ ಸೂಚಿಸಲಾಗುತ್ತದೆ.</p>.<p>ಕೋವಿಡ್ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಕ್ವಾರಂಟೈನ್ ಅವಧಿಯಲ್ಲಿ ಮನೆಯಿಂದ ಹೊರಗಡೆ ಬರುವಂತಿಲ್ಲ. ಕುಟುಂಬದ ಸದಸ್ಯರಿಂದಲೂ ಅಂತರ ಕಾಯ್ದುಕೊಂಡು, ಪ್ರತ್ಯೇಕ ಕೊಠಡಿಯಲ್ಲಿ ವಾಸ ಮಾಡಬೇಕು. ಒಂದು ವೇಳೆ ಈ ಅವಧಿಯಲ್ಲಿ ಮನೆಯಿಂದ ಹೊರಬಂದಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ. ಇಷ್ಟಾಗಿಯೂಕೆಲವರು ನಿಯಮವನ್ನು ಗಾಳಿಗೆ ತೂರಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸಿದ್ದಾರೆ.</p>.<p><strong>ಬೆಂಗಳೂರಿನಲ್ಲಿ ಗರಿಷ್ಠ:</strong>ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರಸದ್ಯ ರಾಜ್ಯದಲ್ಲಿ 1.54 ಲಕ್ಷ ಮಂದಿ ಮನೆ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಇದರಲ್ಲಿ ಪ್ರತಿ ನಿತ್ಯ ಸಾವಿರಾರು ಮಂದಿ ನಿಯಮಗಳನ್ನು ಉಲ್ಲಂಘಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸುತ್ತಿದ್ದಾರೆ. ಪದೇ ಪದೇ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಕೆಲವರಿಗೆ ಎಚ್ಚರಿಕೆ ನೀಡಿ, ಸಾಂಸ್ಥಿಕ ಕ್ವಾರಂಟೈನ್ಗೆ ಕಳುಹಿಸಲಾಗಿದೆ. ಬೆಂಗಳೂರಿನಲ್ಲಿ 1.51 ಲಕ್ಷ ಮಂದಿ ನಿಯಮ ಉಲ್ಲಂಘಿಸಿದ್ದು, ಅದರಲ್ಲಿ 570 ಮಂದಿಯ ಮೇಲೆ ಎಫ್ಐಆರ್ ದಾಖಲಾಗಿದೆ. ಬೆಳಗಾವಿ (124), ಬೆಂಗಳೂರು ಗ್ರಾಮಾಂತರ (104), ಕಲಬುರ್ಗಿ (106), ವಿಜಯಪುರ (91), ರಾಯಚೂರು (73), ಬೀದರ್ (71) ಜಿಲ್ಲೆಯಲ್ಲಿಯೂ ಅಧಿಕ ಮಂದಿ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.</p>.<p>‘ಮನೆ ಕ್ವಾರಂಟೈನ್ಗೆ ಒಳಗಾದವರ ಕೈಗಳಿಗೆ ಮುದ್ರೆಗಳನ್ನು ಹಾಕಲಾಗುತ್ತದೆ. ಅದೇ ರೀತಿ, ಮನೆಯ ಹೊರ ಗೋಡೆಯ ಮೇಲೆ ಭಿತ್ತಿ ಪತ್ರವನ್ನು ಅಂಟಿಸಲಾಗುತ್ತದೆ. ಅವರ ಚಲನವಲನದ ಮೇಲೆ ಅಕ್ಕಪಕ್ಕದ ನಿವಾಸಿಗಳು ನಿಗಾ ಇಡಬೇಕು. ಒಂದು ವೇಳೆ ಅವರು ಮನೆಯಿಂದ ಹೊರಗಡೆ ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p><strong>ಅಂಕಿ–ಅಂಶಗಳು<br />1,54,909:</strong>ಸದ್ಯ ಮನೆ ಕ್ವಾರಂಟೈನ್ನಲ್ಲಿ ಇರುವವರು<br /><strong>2,205:</strong>ಸಾಂಸ್ಥಿಕ ಕ್ವಾರಂಟೈನ್ಗೆ ಸ್ಥಳಾಂತರವಾದವರು<br /><strong>2,25,908:</strong>ಎಚ್ಚರಿಕೆ ನೀಡಿ ಮನೆಗೆ ಕಳುಹಿಸಲ್ಪಟ್ಟವರು</p>.<p><strong>ನಿಯಮ ಉಲ್ಲಂಘನೆ ಪ್ರಕರಣ ಅಧಿಕ ವರದಿಯಾದ ಜಿಲ್ಲೆಗಳು</strong></p>.<table border="1" cellpadding="1" cellspacing="1" style="width:500px;"> <tbody> <tr> <td><strong>ಜಿಲ್ಲೆ</strong></td> <td><strong>ನಿಯಮ ಉಲ್ಲಂಘನೆ</strong></td> <td><strong>ಎಫ್ಐಆರ್</strong></td> </tr> <tr> <td> <p>ಬೆಂಗಳೂರು</p> </td> <td>1,51,987</td> <td>570</td> </tr> <tr> <td> <p>ಕಲಬುರ್ಗಿ</p> </td> <td>8,002</td> <td>106</td> </tr> <tr> <td> <p>ಬಳ್ಳಾರಿ</p> </td> <td>7,537</td> <td>00</td> </tr> <tr> <td> <p>ರಾಯಚೂರು</p> </td> <td>7,478</td> <td>73</td> </tr> <tr> <td> <p>ಬೆಳಗಾವಿ</p> </td> <td>6,294</td> <td>124</td> </tr> <tr> <td> <p>ಮೈಸೂರು</p> </td> <td>5,602</td> <td>44</td> </tr> <tr> <td> <p>ಧಾರವಾಡ</p> </td> <td>5,081</td> <td>64</td> </tr> <tr> <td> <p>ಹಾಸನ</p> </td> <td>4,612</td> <td>16</td> </tr> <tr> <td> <p>ಗದಗ</p> </td> <td>4,066</td> <td>29</td> </tr> <tr> <td>ರಾಮನಗರ</td> <td>3,026</td> <td>08</td> </tr> </tbody></table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೊರೊನಾ ಕಾರಣಕ್ಕೆ 14 ದಿನಗಳ ಮನೆ ಕ್ವಾರಂಟೈನ್ ಇರಬೇಕಾಗಿದ್ದ 2.25 ಲಕ್ಷ ಮಂದಿ ನಿಯಮ ಉಲ್ಲಂಘಿಸಿ, ಮನೆಯಿಂದ ಹೊರಗಡೆ ಬಂದಿದ್ದಾರೆ. ಅವರಲ್ಲಿ 1,645 ಮಂದಿ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ.</p>.<p>ಆರೋಗ್ಯ ಇಲಾಖೆ ರೂಪಿಸಿರುವ ನಿಯಮದ ಪ್ರಕಾರ ಸೋಂಕು ಶಂಕಿತರು, ರೋಗಿಗಳ ಸಂಪರ್ಕ ಹೊಂದಿರುವವರು, ವಿದೇಶದಿಂದ ಬಂದವರು, ಅನ್ಯ ರಾಜ್ಯಗಳಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದವರು, ಮನೆ ಆರೈಕೆಗೆ ಒಳಗಾದವರು ಹಾಗೂ ಗುಣಮುಖರಾಗಿ ಮನೆಗೆ ತೆರಳಿದವರು ಕಡ್ಡಾಯವಾಗಿ ಮನೆ ಕ್ವಾರಂಟೈನ್ಗೆ ಒಳಗಾಗಬೇಕು. ಅಪಾಯದ ವರ್ಗದಲ್ಲಿರುವವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಿ, ಮನೆ ಕ್ವಾರಂಟೈನ್ಗೆ ಸೂಚಿಸಲಾಗುತ್ತದೆ.</p>.<p>ಕೋವಿಡ್ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಕ್ವಾರಂಟೈನ್ ಅವಧಿಯಲ್ಲಿ ಮನೆಯಿಂದ ಹೊರಗಡೆ ಬರುವಂತಿಲ್ಲ. ಕುಟುಂಬದ ಸದಸ್ಯರಿಂದಲೂ ಅಂತರ ಕಾಯ್ದುಕೊಂಡು, ಪ್ರತ್ಯೇಕ ಕೊಠಡಿಯಲ್ಲಿ ವಾಸ ಮಾಡಬೇಕು. ಒಂದು ವೇಳೆ ಈ ಅವಧಿಯಲ್ಲಿ ಮನೆಯಿಂದ ಹೊರಬಂದಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ. ಇಷ್ಟಾಗಿಯೂಕೆಲವರು ನಿಯಮವನ್ನು ಗಾಳಿಗೆ ತೂರಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸಿದ್ದಾರೆ.</p>.<p><strong>ಬೆಂಗಳೂರಿನಲ್ಲಿ ಗರಿಷ್ಠ:</strong>ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರಸದ್ಯ ರಾಜ್ಯದಲ್ಲಿ 1.54 ಲಕ್ಷ ಮಂದಿ ಮನೆ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಇದರಲ್ಲಿ ಪ್ರತಿ ನಿತ್ಯ ಸಾವಿರಾರು ಮಂದಿ ನಿಯಮಗಳನ್ನು ಉಲ್ಲಂಘಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸುತ್ತಿದ್ದಾರೆ. ಪದೇ ಪದೇ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಕೆಲವರಿಗೆ ಎಚ್ಚರಿಕೆ ನೀಡಿ, ಸಾಂಸ್ಥಿಕ ಕ್ವಾರಂಟೈನ್ಗೆ ಕಳುಹಿಸಲಾಗಿದೆ. ಬೆಂಗಳೂರಿನಲ್ಲಿ 1.51 ಲಕ್ಷ ಮಂದಿ ನಿಯಮ ಉಲ್ಲಂಘಿಸಿದ್ದು, ಅದರಲ್ಲಿ 570 ಮಂದಿಯ ಮೇಲೆ ಎಫ್ಐಆರ್ ದಾಖಲಾಗಿದೆ. ಬೆಳಗಾವಿ (124), ಬೆಂಗಳೂರು ಗ್ರಾಮಾಂತರ (104), ಕಲಬುರ್ಗಿ (106), ವಿಜಯಪುರ (91), ರಾಯಚೂರು (73), ಬೀದರ್ (71) ಜಿಲ್ಲೆಯಲ್ಲಿಯೂ ಅಧಿಕ ಮಂದಿ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.</p>.<p>‘ಮನೆ ಕ್ವಾರಂಟೈನ್ಗೆ ಒಳಗಾದವರ ಕೈಗಳಿಗೆ ಮುದ್ರೆಗಳನ್ನು ಹಾಕಲಾಗುತ್ತದೆ. ಅದೇ ರೀತಿ, ಮನೆಯ ಹೊರ ಗೋಡೆಯ ಮೇಲೆ ಭಿತ್ತಿ ಪತ್ರವನ್ನು ಅಂಟಿಸಲಾಗುತ್ತದೆ. ಅವರ ಚಲನವಲನದ ಮೇಲೆ ಅಕ್ಕಪಕ್ಕದ ನಿವಾಸಿಗಳು ನಿಗಾ ಇಡಬೇಕು. ಒಂದು ವೇಳೆ ಅವರು ಮನೆಯಿಂದ ಹೊರಗಡೆ ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p><strong>ಅಂಕಿ–ಅಂಶಗಳು<br />1,54,909:</strong>ಸದ್ಯ ಮನೆ ಕ್ವಾರಂಟೈನ್ನಲ್ಲಿ ಇರುವವರು<br /><strong>2,205:</strong>ಸಾಂಸ್ಥಿಕ ಕ್ವಾರಂಟೈನ್ಗೆ ಸ್ಥಳಾಂತರವಾದವರು<br /><strong>2,25,908:</strong>ಎಚ್ಚರಿಕೆ ನೀಡಿ ಮನೆಗೆ ಕಳುಹಿಸಲ್ಪಟ್ಟವರು</p>.<p><strong>ನಿಯಮ ಉಲ್ಲಂಘನೆ ಪ್ರಕರಣ ಅಧಿಕ ವರದಿಯಾದ ಜಿಲ್ಲೆಗಳು</strong></p>.<table border="1" cellpadding="1" cellspacing="1" style="width:500px;"> <tbody> <tr> <td><strong>ಜಿಲ್ಲೆ</strong></td> <td><strong>ನಿಯಮ ಉಲ್ಲಂಘನೆ</strong></td> <td><strong>ಎಫ್ಐಆರ್</strong></td> </tr> <tr> <td> <p>ಬೆಂಗಳೂರು</p> </td> <td>1,51,987</td> <td>570</td> </tr> <tr> <td> <p>ಕಲಬುರ್ಗಿ</p> </td> <td>8,002</td> <td>106</td> </tr> <tr> <td> <p>ಬಳ್ಳಾರಿ</p> </td> <td>7,537</td> <td>00</td> </tr> <tr> <td> <p>ರಾಯಚೂರು</p> </td> <td>7,478</td> <td>73</td> </tr> <tr> <td> <p>ಬೆಳಗಾವಿ</p> </td> <td>6,294</td> <td>124</td> </tr> <tr> <td> <p>ಮೈಸೂರು</p> </td> <td>5,602</td> <td>44</td> </tr> <tr> <td> <p>ಧಾರವಾಡ</p> </td> <td>5,081</td> <td>64</td> </tr> <tr> <td> <p>ಹಾಸನ</p> </td> <td>4,612</td> <td>16</td> </tr> <tr> <td> <p>ಗದಗ</p> </td> <td>4,066</td> <td>29</td> </tr> <tr> <td>ರಾಮನಗರ</td> <td>3,026</td> <td>08</td> </tr> </tbody></table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>