<p><strong>ಬೆಂಗಳೂರು:</strong> ರಾಷ್ಟ್ರಮಟ್ಟದಲ್ಲಿ ಕನ್ನಡದ ಹಿರಿಮೆ ಹೆಚ್ಚಿಸಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ಭಾರತೀಯ ಭಾಷಾ ಕೇಂದ್ರದ ಕನ್ನಡ ಅಧ್ಯಯನ ಪೀಠ ಸಹ ಇತಿಹಾಸದ ಪುಟಗಳನ್ನು ಸೇರುವ ಆತಂಕ ಎದುರಿಸುತ್ತಿದೆ.</p>.<p>ಜೆಎನ್ಯುನ ಕನ್ನಡ ಪೀಠಕ್ಕೆ ಕೂಡಲೇ ಪ್ರಾಧ್ಯಾಪಕರನ್ನು ನೇಮಕ ಮಾಡಬೇಕು, ಇಲ್ಲವೇಕೇಂದ್ರ ಧನಸಹಾಯ ಆಯೋಗಕ್ಕೆ (ಯುಜಿಸಿ) ಹಸ್ತಾಂತರಿಸಬೇಕು ಎಂಬ ಕೂಗು ಸಾಂಸ್ಕೃತಿಕ ವಲಯದಲ್ಲಿ ಮುನ್ನೆಲೆಗೆ ಬಂದಿದೆ.</p>.<p>ಜೆಎನ್ಯುನಲ್ಲಿ ದೇಶ–ವಿದೇಶದ ಸುಮಾರು 8 ಸಾವಿರ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. 2015ರಲ್ಲಿ ಅಲ್ಲಿ ಪ್ರಾರಂಭವಾದ ಕನ್ನಡ ಅಧ್ಯಯನ ಪೀಠವು ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ. ರಾಜ್ಯ ಸರ್ಕಾರ ನೀಡಿದ ₹ 5 ಕೋಟಿ ಅನುದಾನವನ್ನು ಪೀಠವು ಇಡುಗಂಟಾಗಿ ಇರಿಸಿದೆ. ಸದ್ಯ ಸೇವೆ ಸಲ್ಲಿಸುತ್ತಿರುವ ಏಕಮಾತ್ರ ಪ್ರಾಧ್ಯಾಪಕರಾಗಿರುವ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಆ.20ರಂದು ನಿವೃತ್ತರಾಗಲಿದ್ದಾರೆ. ಈ ಅವಧಿಯಲ್ಲಿ ಬೇರೆ ಪ್ರಾಧ್ಯಾಪಕರನ್ನು ವಿಶ್ವವಿದ್ಯಾಲಯ ನೇಮಕ ಮಾಡದಿದ್ದಲ್ಲಿ ಕನ್ನಡದ ಪೀಠಕ್ಕೆ ಬೀಗ ಬೀಳುವ ಸಾಧ್ಯತೆಯಿದೆ.</p>.<p>ಬಿಳಿಮಲೆ ಅವರು ಕಳೆದ ಡಿಸೆಂಬರ್ನಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ಬಗ್ಗೆ ಪತ್ರ ಬರೆದಿದ್ದರು. ಆದರೆ, ಈ ಬಗ್ಗೆ ಇಲಾಖೆ ಗಮನಹರಿಸದ ಪರಿಣಾಮ ಈಗ ಪೀಠವನ್ನು ಉಳಿಸಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ದೆಹಲಿ ವಿಶ್ವವಿದ್ಯಾಲಯ, ಬನಾರಸ್ ವಿಶ್ವವಿದ್ಯಾಲಯ ಸೇರಿದಂತೆ ವಿವಿಧೆಡೆ ಕನ್ನಡಪೀಠಕ್ಕೆ ಬೀಗ ಬಿದ್ದಿದೆ. ಅದೇ ಹಾದಿಯಲ್ಲಿ ಈ ಪೀಠವನ್ನೂ ಕಳೆದುಕೊಳ್ಳುತ್ತೇವೆಯೇ ಎಂಬ ಕಳವಳವನ್ನು ಸಾಹಿತಿ<br />ಗಳು ಹಾಗೂ ಕನ್ನಡ ಪರ ಹೋರಾಟಗಾರರು ವ್ಯಕ್ತಪಡಿಸಲಾರಂಭಿಸಿದ್ದಾರೆ.</p>.<p>ಈ ನಡುವೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರು ಜೂನ್ 25ರಂದು ಜೆಎನ್ಯು ಉಪಕುಲಪತಿ ಪ್ರೊ.ಜಗದೀಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಪ್ರಾಧ್ಯಾಪಕರ ನೇಮಕಕ್ಕೆ ಮನವಿ ಮಾಡಿಕೊಂಡಿದ್ದಾರೆ.</p>.<p><strong>ಯುಜಿಸಿಗೆ ಹಸ್ತಾಂತರಿಸಬೇಕು:</strong> ‘ಕನ್ನಡ ಅಧ್ಯಯನ ಪೀಠ ಶಾಶ್ವತವಾಗಿ ಉಳಿಯಬೇಕಾದರೆ ಅದನ್ನು ನಿಯಮದ ಅನುಸಾರ ಯುಜಿಸಿಗೆ ಹಸ್ತಾಂತರಿಸಬೇಕು. ಈ ಬಗ್ಗೆ ವಿಶ್ವವಿದ್ಯಾಲಯದ ಉಪಕುಲಪತಿಗೆ ಕೂಡ ನಾನು ಪತ್ರ ಬರೆದಿದ್ದೇನೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ. ಇಲ್ಲವಾದಲ್ಲಿ ಇದೇ ರೀತಿ ಮೂರು ಅಥವಾ ಐದು ವರ್ಷದ ಬಳಿಕ ಸಮಸ್ಯೆ ಉಂಟಾಗಲಿದೆ’ ಎಂದುಪ್ರೊ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.</p>.<p>‘ಈಗಾಗಲೇ ಹಲವು ಪೀಠಗಳು ಪ್ರಾಧ್ಯಾಪಕರಿಲ್ಲದೆಯೇ ಮುಚ್ಚಿವೆ. ಇಲ್ಲಿನ ಪೀಠದಲ್ಲಿ ಹಲವರು ಕನ್ನಡವನ್ನು ಕಲಿತಿದ್ದಾರೆ. ನಿರಂತರವಾಗಿ ಕನ್ನಡದ ಕೆಲಸಗಳು ನಡೆಯುತ್ತಿವೆ. ಪ್ರಾಧ್ಯಾಪಕರ ನೇಮಕಕ್ಕೆ ಸಂಬಂಧಿಸಿದಂತೆ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ. ಯುಜಿಸಿಗೆ ಹಸ್ತಾಂತರಿಸಿದಲ್ಲಿ ಪೀಠವು ಕನ್ನಡ ವಿಭಾಗವಾಗಿ ಪರಿವರ್ತನೆಯಾಗಿ,<br />ಇನ್ನಷ್ಟು ಮಹತ್ವ ಪಡೆಯಲಿದೆ’ ಎಂದರು.</p>.<p>*****</p>.<p>ಜೆಎನ್ಯು ಕನ್ನಡ ಅಧ್ಯಯನ ಪೀಠವನ್ನು ಮುಂದುವರಿಸಲು ಸರ್ಕಾರ ಬದ್ಧವಾಗಿದೆ. ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಆತಂಕಪಡಬೇಕಾದ ಅಗತ್ಯವಿಲ್ಲ<br /><strong>-ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ</strong></p>.<p>****</p>.<p>ನಾವು ಕೂಡ ವಿಶ್ವವಿದ್ಯಾಲಯಕ್ಕೆ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಪತ್ರ ಬರೆದಿದ್ದೇವೆ. ನಿಗದಿತ ಅವಧಿಯೊಳಗೆ ಪ್ರಾಧ್ಯಾಪಕರ ನೇಮಕಾತಿ ಬಗ್ಗೆ ಭರವಸೆ ಸಿಕ್ಕಿದೆ<br /><strong>-ಟಿ.ಎಸ್. ನಾಗಾಭರಣ</strong><br /><strong>ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ</strong></p>.<p>ಪ್ರಾಧ್ಯಾಪಕರ ನೇಮಕಕ್ಕೆ ಸಂಬಂಧಿಸಿದಂತೆ ಅಲ್ಲಿನ ಉಪಕುಲಪತಿಗೆ ಪತ್ರ ಬರೆದಿದ್ದೇವೆ. ಪೀಠಕ್ಕೆ ಬೀಗ ಹಾಕಲು ಅವಕಾಶ ನೀಡುವುದಿಲ್ಲ. ಮುಂದಿನ ವಾರ ನೇಮಕಾತಿ ನಡೆಯಲಿದೆ</p>.<p><strong>-ಎಸ್. ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ</strong></p>.<p><strong>***</strong></p>.<p><strong>ಅಧ್ಯಯನ ಪೀಠದ ಚಟುವಟಿಕೆಗಳು</strong></p>.<p>*ಕನ್ನಡ ತರಗತಿಗಳನ್ನು ನಡೆಸುವುದು</p>.<p>* ನಿಯಮಿತವಾಗಿ ವಿಚಾರಸಂಕಿರಣ ಹಾಗೂ ಕನ್ನಡಪರ ಕಾರ್ಯಕ್ರಮಗಳ ಆಯೋಜನೆ</p>.<p>* ಜಾಲತಾಣದ ಮೂಲಕ ಕನ್ನಡ ಕಲಿಕೆ</p>.<p>* ಯಕ್ಷಗಾನ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ</p>.<p>* ವಿವಿಧ ವಿಷಯಗಳ ಮೇಲೆ ಕಮ್ಮಟಗಳ ಆಯೋಜನೆ</p>.<p>* ‘ಕವಿರಾಜಮಾರ್ಗ’, ‘ಗದಾಯುದ್ಧ’ ಸೇರಿದಂತೆ ಹಲವು ಪುಸ್ತಕಗಳು ಆಂಗ್ಲ ಭಾಷೆಯಲ್ಲಿ ಪ್ರಕಟಣೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಷ್ಟ್ರಮಟ್ಟದಲ್ಲಿ ಕನ್ನಡದ ಹಿರಿಮೆ ಹೆಚ್ಚಿಸಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ಭಾರತೀಯ ಭಾಷಾ ಕೇಂದ್ರದ ಕನ್ನಡ ಅಧ್ಯಯನ ಪೀಠ ಸಹ ಇತಿಹಾಸದ ಪುಟಗಳನ್ನು ಸೇರುವ ಆತಂಕ ಎದುರಿಸುತ್ತಿದೆ.</p>.<p>ಜೆಎನ್ಯುನ ಕನ್ನಡ ಪೀಠಕ್ಕೆ ಕೂಡಲೇ ಪ್ರಾಧ್ಯಾಪಕರನ್ನು ನೇಮಕ ಮಾಡಬೇಕು, ಇಲ್ಲವೇಕೇಂದ್ರ ಧನಸಹಾಯ ಆಯೋಗಕ್ಕೆ (ಯುಜಿಸಿ) ಹಸ್ತಾಂತರಿಸಬೇಕು ಎಂಬ ಕೂಗು ಸಾಂಸ್ಕೃತಿಕ ವಲಯದಲ್ಲಿ ಮುನ್ನೆಲೆಗೆ ಬಂದಿದೆ.</p>.<p>ಜೆಎನ್ಯುನಲ್ಲಿ ದೇಶ–ವಿದೇಶದ ಸುಮಾರು 8 ಸಾವಿರ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. 2015ರಲ್ಲಿ ಅಲ್ಲಿ ಪ್ರಾರಂಭವಾದ ಕನ್ನಡ ಅಧ್ಯಯನ ಪೀಠವು ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ. ರಾಜ್ಯ ಸರ್ಕಾರ ನೀಡಿದ ₹ 5 ಕೋಟಿ ಅನುದಾನವನ್ನು ಪೀಠವು ಇಡುಗಂಟಾಗಿ ಇರಿಸಿದೆ. ಸದ್ಯ ಸೇವೆ ಸಲ್ಲಿಸುತ್ತಿರುವ ಏಕಮಾತ್ರ ಪ್ರಾಧ್ಯಾಪಕರಾಗಿರುವ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಆ.20ರಂದು ನಿವೃತ್ತರಾಗಲಿದ್ದಾರೆ. ಈ ಅವಧಿಯಲ್ಲಿ ಬೇರೆ ಪ್ರಾಧ್ಯಾಪಕರನ್ನು ವಿಶ್ವವಿದ್ಯಾಲಯ ನೇಮಕ ಮಾಡದಿದ್ದಲ್ಲಿ ಕನ್ನಡದ ಪೀಠಕ್ಕೆ ಬೀಗ ಬೀಳುವ ಸಾಧ್ಯತೆಯಿದೆ.</p>.<p>ಬಿಳಿಮಲೆ ಅವರು ಕಳೆದ ಡಿಸೆಂಬರ್ನಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ಬಗ್ಗೆ ಪತ್ರ ಬರೆದಿದ್ದರು. ಆದರೆ, ಈ ಬಗ್ಗೆ ಇಲಾಖೆ ಗಮನಹರಿಸದ ಪರಿಣಾಮ ಈಗ ಪೀಠವನ್ನು ಉಳಿಸಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ದೆಹಲಿ ವಿಶ್ವವಿದ್ಯಾಲಯ, ಬನಾರಸ್ ವಿಶ್ವವಿದ್ಯಾಲಯ ಸೇರಿದಂತೆ ವಿವಿಧೆಡೆ ಕನ್ನಡಪೀಠಕ್ಕೆ ಬೀಗ ಬಿದ್ದಿದೆ. ಅದೇ ಹಾದಿಯಲ್ಲಿ ಈ ಪೀಠವನ್ನೂ ಕಳೆದುಕೊಳ್ಳುತ್ತೇವೆಯೇ ಎಂಬ ಕಳವಳವನ್ನು ಸಾಹಿತಿ<br />ಗಳು ಹಾಗೂ ಕನ್ನಡ ಪರ ಹೋರಾಟಗಾರರು ವ್ಯಕ್ತಪಡಿಸಲಾರಂಭಿಸಿದ್ದಾರೆ.</p>.<p>ಈ ನಡುವೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರು ಜೂನ್ 25ರಂದು ಜೆಎನ್ಯು ಉಪಕುಲಪತಿ ಪ್ರೊ.ಜಗದೀಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಪ್ರಾಧ್ಯಾಪಕರ ನೇಮಕಕ್ಕೆ ಮನವಿ ಮಾಡಿಕೊಂಡಿದ್ದಾರೆ.</p>.<p><strong>ಯುಜಿಸಿಗೆ ಹಸ್ತಾಂತರಿಸಬೇಕು:</strong> ‘ಕನ್ನಡ ಅಧ್ಯಯನ ಪೀಠ ಶಾಶ್ವತವಾಗಿ ಉಳಿಯಬೇಕಾದರೆ ಅದನ್ನು ನಿಯಮದ ಅನುಸಾರ ಯುಜಿಸಿಗೆ ಹಸ್ತಾಂತರಿಸಬೇಕು. ಈ ಬಗ್ಗೆ ವಿಶ್ವವಿದ್ಯಾಲಯದ ಉಪಕುಲಪತಿಗೆ ಕೂಡ ನಾನು ಪತ್ರ ಬರೆದಿದ್ದೇನೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ. ಇಲ್ಲವಾದಲ್ಲಿ ಇದೇ ರೀತಿ ಮೂರು ಅಥವಾ ಐದು ವರ್ಷದ ಬಳಿಕ ಸಮಸ್ಯೆ ಉಂಟಾಗಲಿದೆ’ ಎಂದುಪ್ರೊ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.</p>.<p>‘ಈಗಾಗಲೇ ಹಲವು ಪೀಠಗಳು ಪ್ರಾಧ್ಯಾಪಕರಿಲ್ಲದೆಯೇ ಮುಚ್ಚಿವೆ. ಇಲ್ಲಿನ ಪೀಠದಲ್ಲಿ ಹಲವರು ಕನ್ನಡವನ್ನು ಕಲಿತಿದ್ದಾರೆ. ನಿರಂತರವಾಗಿ ಕನ್ನಡದ ಕೆಲಸಗಳು ನಡೆಯುತ್ತಿವೆ. ಪ್ರಾಧ್ಯಾಪಕರ ನೇಮಕಕ್ಕೆ ಸಂಬಂಧಿಸಿದಂತೆ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ. ಯುಜಿಸಿಗೆ ಹಸ್ತಾಂತರಿಸಿದಲ್ಲಿ ಪೀಠವು ಕನ್ನಡ ವಿಭಾಗವಾಗಿ ಪರಿವರ್ತನೆಯಾಗಿ,<br />ಇನ್ನಷ್ಟು ಮಹತ್ವ ಪಡೆಯಲಿದೆ’ ಎಂದರು.</p>.<p>*****</p>.<p>ಜೆಎನ್ಯು ಕನ್ನಡ ಅಧ್ಯಯನ ಪೀಠವನ್ನು ಮುಂದುವರಿಸಲು ಸರ್ಕಾರ ಬದ್ಧವಾಗಿದೆ. ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಆತಂಕಪಡಬೇಕಾದ ಅಗತ್ಯವಿಲ್ಲ<br /><strong>-ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ</strong></p>.<p>****</p>.<p>ನಾವು ಕೂಡ ವಿಶ್ವವಿದ್ಯಾಲಯಕ್ಕೆ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಪತ್ರ ಬರೆದಿದ್ದೇವೆ. ನಿಗದಿತ ಅವಧಿಯೊಳಗೆ ಪ್ರಾಧ್ಯಾಪಕರ ನೇಮಕಾತಿ ಬಗ್ಗೆ ಭರವಸೆ ಸಿಕ್ಕಿದೆ<br /><strong>-ಟಿ.ಎಸ್. ನಾಗಾಭರಣ</strong><br /><strong>ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ</strong></p>.<p>ಪ್ರಾಧ್ಯಾಪಕರ ನೇಮಕಕ್ಕೆ ಸಂಬಂಧಿಸಿದಂತೆ ಅಲ್ಲಿನ ಉಪಕುಲಪತಿಗೆ ಪತ್ರ ಬರೆದಿದ್ದೇವೆ. ಪೀಠಕ್ಕೆ ಬೀಗ ಹಾಕಲು ಅವಕಾಶ ನೀಡುವುದಿಲ್ಲ. ಮುಂದಿನ ವಾರ ನೇಮಕಾತಿ ನಡೆಯಲಿದೆ</p>.<p><strong>-ಎಸ್. ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ</strong></p>.<p><strong>***</strong></p>.<p><strong>ಅಧ್ಯಯನ ಪೀಠದ ಚಟುವಟಿಕೆಗಳು</strong></p>.<p>*ಕನ್ನಡ ತರಗತಿಗಳನ್ನು ನಡೆಸುವುದು</p>.<p>* ನಿಯಮಿತವಾಗಿ ವಿಚಾರಸಂಕಿರಣ ಹಾಗೂ ಕನ್ನಡಪರ ಕಾರ್ಯಕ್ರಮಗಳ ಆಯೋಜನೆ</p>.<p>* ಜಾಲತಾಣದ ಮೂಲಕ ಕನ್ನಡ ಕಲಿಕೆ</p>.<p>* ಯಕ್ಷಗಾನ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ</p>.<p>* ವಿವಿಧ ವಿಷಯಗಳ ಮೇಲೆ ಕಮ್ಮಟಗಳ ಆಯೋಜನೆ</p>.<p>* ‘ಕವಿರಾಜಮಾರ್ಗ’, ‘ಗದಾಯುದ್ಧ’ ಸೇರಿದಂತೆ ಹಲವು ಪುಸ್ತಕಗಳು ಆಂಗ್ಲ ಭಾಷೆಯಲ್ಲಿ ಪ್ರಕಟಣೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>