ನಿರ್ಭಯಾ ಪ್ರಕರಣದ ಮೂವರು ಅಪರಾಧಿಗಳ ದಯಾಅರ್ಜಿಯನ್ನು ಕೋವಿಂದ್ ಅವರು ಈ ಹಿಂದೆಯೇ ತಿರಸ್ಕರಿಸಿದ್ದರು . ಇದಾದ ನಂತರ ಮಾರ್ಚ್ 3 ರಂದುಬೆಳಿಗ್ಗೆ ಆರು ಗಂಟೆಗೆ ದೆಹಲಿಯ ತಿಹಾರ್ ಜೈಲಿನಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿ ನಿಗದಿಯಾಗಿತ್ತು. ಈ ನಡುವೆ ಪವನ್ ಗುಪ್ತಾ ಸಲ್ಲಿಸಿದ್ದ ದಯಾ ಅರ್ಜಿ ಬಗ್ಗೆ ರಾಷ್ಟ್ರಪತಿ ತೀರ್ಮಾನ ಬಾಕಿ ಇದ್ದುದರಿಂದ ಮರಣದಂಡನೆ ದಿನಾಂಕ ಮುಂದೂಡಲಾಗಿತ್ತು.