<p><strong>ನವದೆಹಲಿ: </strong>ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಚಿಸಿರುವ ಸಂಧಾನ ಸಮಿತಿಯಲ್ಲಿರುವ ಮೂವರೂ ತಮಿಳುನಾಡಿನವರೇ.</p>.<p>ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ. ಇಬ್ರಾಹಿಂ ಕಲೀಫುಲ್ಲಾ, ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ನ ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನೊಳಗೊಂಡ ಸಂಧಾನ ಸಮಿತಿಯನ್ನು ಸುಪ್ರೀಂ ರಚಿಸಿದೆ.</p>.<p>2012–16ರ ಅವಧಿಯಲ್ಲಿಸುಪ್ರಿಂ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಕಲೀಫುಲ್ಲಾ ದಕ್ಷಿಣ ತಮಿಳುನಾಡಿನ ಕರೈಕುಡಿಯವರು. ಅದಕ್ಕೂ ಮೊದಲು ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು.ರವಿಶಂಕರ್ ಅವರ ಹುಟ್ಟೂರು ತಾಂಜಾವೂರು ಸಮೀಪದ ಪಾಪನಾಶಂ. ಪಂಚು ಚೆನ್ನೈ ಮೂಲದವರು.</p>.<p><a href="http://www.prajavani.net/stories/national/ayodhya-case-supreme-court-619554.html" target="_blank"><span style="color:#000000;"><strong>ಇದನ್ನೂ ಓದಿ:</strong></span></a><strong><a href="https://www.prajavani.net/stories/national/ayodhya-case-supreme-court-619554.html" target="_blank"></a></strong><a href="https://www.prajavani.net/stories/national/ayodhya-case-supreme-court-619554.html" target="_blank">ಅಯೋಧ್ಯೆ: ಸಂಧಾನಕ್ಕೆ ಸಲಹೆ</a></p>.<p>ಸುಪ್ರೀಂ ನೇಮಕದ ಬಳಿಕ ಮಾಧ್ಯಮಗಳಿಗೆ ಪ್ರತ್ಯೇಕವಾಗಿ ಹೇಳಿಕೆ ನೀಡಿರುವ ಮೂವರೂ, ದಶಕಗಳಿಗೂ ಹೆಚ್ಚು ಕಾಲದ ವಿವಾದವನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.</p>.<p>‘ನನ್ನ ನೇತೃತ್ವದಲ್ಲಿ ಸುಪ್ರಿಂ ಕೋರ್ಟ್ ಸಂಧಾನ ಸಮಿತಿಯನ್ನು ರಚಿಸಿರುವುದು ತಿಳಿದಿದೆ. ಆದೇಶ ಪ್ರತಿ ಇನ್ನೂ ಕೈಸೇರಿಲ್ಲ. ಸೌಹಾರ್ದಯುತವಾಗಿ ವಿವಾದವನ್ನು ಇತ್ಯರ್ಥಪಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡಲಿದ್ದೇವೆ’ ಎಂದು ಕಲೀಫುಲ್ಲಾ ಹೇಳಿದ್ದಾರೆ.</p>.<p>‘ದೀರ್ಘಕಾಲದಿಂದ ಪರಿಹಾರ ಕಾಣದ ವಿವಾದವನ್ನು ಸುಖಾಂತ್ಯಗೊಳಿಸಿ, ಸಮಾಜದಲ್ಲಿ ಸೌಹಾರ್ದತೆಯನ್ನು ನೆಲೆಗೊಳಿಸಿಸುವ ಸಲುವಾಗಿ ನಾವೆಲ್ಲರೂ ಒಗ್ಗಟ್ಟಾಗಿ ಗುರಿಯೆಡೆಗೆ ಸಾಗಬೇಕಾಗಿದೆ’ ಎಂದು ರವಿಶಂಕರ್ ಅಭಿಪ್ರಾಯಪಟ್ಟಿದ್ದಾರೆ.</p>.<p><a href="https://www.prajavani.net/stories/national/supreme-courts-constitution-619845.html" target="_blank"><strong><span style="color:#000000;">ಇದನ್ನೂ ಓದಿ:</span></strong>ಅಯೋಧ್ಯೆ ವಿವಾದ ಸಂಧಾನದ ಮೂಲಕ ಬಗೆಹರಿಸಿ: ಸುಪ್ರೀಂ ಆದೇಶ</a></p>.<p>ಇದು ಗಂಭೀರವಾದ ಜವಾಬ್ದಾರಿಯಾಗಿದ್ದು, ತಮ್ಮಿಂದ ಸಾಧ್ಯವಾದಷ್ಟು ಉತ್ತಮವಾಗಿ ನಿರ್ವಹಿಸುವುದಾಗಿ ಪಂಚು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಚಿಸಿರುವ ಸಂಧಾನ ಸಮಿತಿಯಲ್ಲಿರುವ ಮೂವರೂ ತಮಿಳುನಾಡಿನವರೇ.</p>.<p>ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ. ಇಬ್ರಾಹಿಂ ಕಲೀಫುಲ್ಲಾ, ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ನ ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನೊಳಗೊಂಡ ಸಂಧಾನ ಸಮಿತಿಯನ್ನು ಸುಪ್ರೀಂ ರಚಿಸಿದೆ.</p>.<p>2012–16ರ ಅವಧಿಯಲ್ಲಿಸುಪ್ರಿಂ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಕಲೀಫುಲ್ಲಾ ದಕ್ಷಿಣ ತಮಿಳುನಾಡಿನ ಕರೈಕುಡಿಯವರು. ಅದಕ್ಕೂ ಮೊದಲು ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು.ರವಿಶಂಕರ್ ಅವರ ಹುಟ್ಟೂರು ತಾಂಜಾವೂರು ಸಮೀಪದ ಪಾಪನಾಶಂ. ಪಂಚು ಚೆನ್ನೈ ಮೂಲದವರು.</p>.<p><a href="http://www.prajavani.net/stories/national/ayodhya-case-supreme-court-619554.html" target="_blank"><span style="color:#000000;"><strong>ಇದನ್ನೂ ಓದಿ:</strong></span></a><strong><a href="https://www.prajavani.net/stories/national/ayodhya-case-supreme-court-619554.html" target="_blank"></a></strong><a href="https://www.prajavani.net/stories/national/ayodhya-case-supreme-court-619554.html" target="_blank">ಅಯೋಧ್ಯೆ: ಸಂಧಾನಕ್ಕೆ ಸಲಹೆ</a></p>.<p>ಸುಪ್ರೀಂ ನೇಮಕದ ಬಳಿಕ ಮಾಧ್ಯಮಗಳಿಗೆ ಪ್ರತ್ಯೇಕವಾಗಿ ಹೇಳಿಕೆ ನೀಡಿರುವ ಮೂವರೂ, ದಶಕಗಳಿಗೂ ಹೆಚ್ಚು ಕಾಲದ ವಿವಾದವನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.</p>.<p>‘ನನ್ನ ನೇತೃತ್ವದಲ್ಲಿ ಸುಪ್ರಿಂ ಕೋರ್ಟ್ ಸಂಧಾನ ಸಮಿತಿಯನ್ನು ರಚಿಸಿರುವುದು ತಿಳಿದಿದೆ. ಆದೇಶ ಪ್ರತಿ ಇನ್ನೂ ಕೈಸೇರಿಲ್ಲ. ಸೌಹಾರ್ದಯುತವಾಗಿ ವಿವಾದವನ್ನು ಇತ್ಯರ್ಥಪಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡಲಿದ್ದೇವೆ’ ಎಂದು ಕಲೀಫುಲ್ಲಾ ಹೇಳಿದ್ದಾರೆ.</p>.<p>‘ದೀರ್ಘಕಾಲದಿಂದ ಪರಿಹಾರ ಕಾಣದ ವಿವಾದವನ್ನು ಸುಖಾಂತ್ಯಗೊಳಿಸಿ, ಸಮಾಜದಲ್ಲಿ ಸೌಹಾರ್ದತೆಯನ್ನು ನೆಲೆಗೊಳಿಸಿಸುವ ಸಲುವಾಗಿ ನಾವೆಲ್ಲರೂ ಒಗ್ಗಟ್ಟಾಗಿ ಗುರಿಯೆಡೆಗೆ ಸಾಗಬೇಕಾಗಿದೆ’ ಎಂದು ರವಿಶಂಕರ್ ಅಭಿಪ್ರಾಯಪಟ್ಟಿದ್ದಾರೆ.</p>.<p><a href="https://www.prajavani.net/stories/national/supreme-courts-constitution-619845.html" target="_blank"><strong><span style="color:#000000;">ಇದನ್ನೂ ಓದಿ:</span></strong>ಅಯೋಧ್ಯೆ ವಿವಾದ ಸಂಧಾನದ ಮೂಲಕ ಬಗೆಹರಿಸಿ: ಸುಪ್ರೀಂ ಆದೇಶ</a></p>.<p>ಇದು ಗಂಭೀರವಾದ ಜವಾಬ್ದಾರಿಯಾಗಿದ್ದು, ತಮ್ಮಿಂದ ಸಾಧ್ಯವಾದಷ್ಟು ಉತ್ತಮವಾಗಿ ನಿರ್ವಹಿಸುವುದಾಗಿ ಪಂಚು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>