'ಇವತ್ತು 66 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ಈಗ ಹಡಗಿನಲ್ಲಿರುವ 137 ಮಂದಿ ಕೊರೊನಾ ಸೋಂಕಿಗೊಳಗಾಗಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ವ್ಯಾಪಿಸುತ್ತಾ ಬರುತ್ತಿದ್ದು, ಸೋಂಕು ತಗಲಿರುವ ವ್ಯಕ್ತಿಗಳನ್ನು ಬೇರೆಡೆಗೆ ವರ್ಗಾಯಿಸಬೇಕಿದೆ. ಆದಷ್ಟು ಬೇಗ ನಮ್ಮನ್ನು ರಕ್ಷಿಸಿ. ಏನಾದರೂ ಆದರೆ ಏನು ಮಾಡಲಿ? ಭಾರತ ಸರ್ಕಾರಕ್ಕೆ ನಾನು ಮಾಡುವ ಮನವಿ ಏನೆಂದರೆ ಮೋದಿಜೀ ದಯವಿಟ್ಟು ನಮ್ಮನ್ನು ಸ್ಥಳಾಂತರ ಮಾಡಿ, ಮನೆಗೆ ಸುರಕ್ಷಿತವಾಗಿ ತಲುಪಿಸಿ' ಎಂದು ಬಿನಯ್ ಕುಮಾರ್ ವಿಡಿಯೊದಲ್ಲಿಹೇಳಿದ್ದಾರೆ.