ಪಟ್ನಾ (ಪಿಟಿಐ): ಕೊರೊನಾ ವೈರಸ್ ಸೋಂಕು ಹರಡದಂತೆ ಭಾನುವಾರ ‘ಜನತಾ ಕರ್ಫ್ಯೂ’ ಆಚರಣೆಯಿಂದ ಮನೆಗಳಲ್ಲಿದ್ದ ವಿದ್ಯಾರ್ಥಿಗಳಿಗೆ ‘ಸೂಪರ್ 30’ ಸ್ಥಾಪಕ ಆನಂದ್ ಕುಮಾರ್ ಗಣಿತ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವಂತೆ ಸೂಚಿಸಿ, ಕರ್ಫ್ಯೂ ನಡುವೆಯೂ ವಿದ್ಯಾರ್ಥಿಗಳನ್ನು ಓದಿನಲ್ಲಿ ಸಕ್ರಿಯರಾಗಿರುವಂತೆ ಮಾಡಿದ್ದಾರೆ.