<p><strong>ನವದೆಹಲಿ</strong>: ಕೊರೊನಾ ವೈರಸ್ಗೆ ಔಷಧ ಅಭಿವೃದ್ಧಿಪಡಿಸುವ ಉದ್ದೇಶದಿಂದ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಂಜಾತ ವಿಜ್ಞಾನಿ ಎಸ್.ಎಸ್ ವಾಸು ನೇತೃತ್ವದ ತಂಡವು ಕೊರೊನಾ ವೈರಸ್ ಸೃಷ್ಟಿಸಿದೆ.<br />ಕಾಮನ್ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಸಂಸ್ಥೆಯ (ಸಿಎಸ್ಐಆರ್ಒ)</p>.<p>ಪ್ರಯೋಗಾಲಯದಲ್ಲಿ ಈ ವೈರಸ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೆಲ್ಬರ್ನ್ನ ಡೊಹರ್ಟಿ ಸಂಸ್ಥೆಯಲ್ಲಿ ಮೊದಲ ಬಾರಿಗೆ ಈ ತಂಡದ ವಿಜ್ಞಾನಿಗಳು ಕೊರೊನಾ ವೈರಸ್ನ ಮಾದರಿಯನ್ನು ಅಭಿವೃದ್ಧಿಪಡಿಸಿದ್ದರು. ಸೋಂಕಿತ ವ್ಯಕ್ತಿಯ ರಕ್ತದ ಮಾದರಿಯಿಂದ ಈ ವೈರಸ್ ಬೇರ್ಪಡಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದರು ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.</p>.<p>‘ವೈರಸ್ನ ಗುಣಲಕ್ಷಣಗಳನ್ನು ಮೊದಲು ಅಧ್ಯಯನ ನಡೆಸಲಾಗುತ್ತದೆ. ಹೊಸ ರೋಗನಿರೋಧಕ ಔಷಧ ಅಭಿವೃದ್ಧಿಪಡಿಸಲು ಇದುವೇ ಪ್ರಮುಖ ಆಧಾರ’ ಎಂದು ಸಿಎಸ್ಐಆರ್ಒ ತಿಳಿಸಿದೆ.</p>.<p><strong>ನೆರವು: </strong>ವುಹಾನ್ನಿಂದ ಪಾಕಿಸ್ತಾನ ಸೇರಿದಂತೆ ನೆರೆ ರಾಷ್ಟ್ರಗಳ ಪ್ರಜೆಗಳನ್ನು ವಾಪಸ್ ಕರೆ ತರಲು ಭಾರತ ನೆರವು ನೀಡಲು ಸಿದ್ಧವಿತ್ತು. ನಮ್ಮ ನೆರವು ಪಡೆದ ಮಾಲ್ಡೀವ್ಸ್ನ 7 ಜನರನ್ನು ಭಾರತಕ್ಕೆ ಕರೆ ತರಲಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೊರೊನಾ ವೈರಸ್ಗೆ ಔಷಧ ಅಭಿವೃದ್ಧಿಪಡಿಸುವ ಉದ್ದೇಶದಿಂದ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಂಜಾತ ವಿಜ್ಞಾನಿ ಎಸ್.ಎಸ್ ವಾಸು ನೇತೃತ್ವದ ತಂಡವು ಕೊರೊನಾ ವೈರಸ್ ಸೃಷ್ಟಿಸಿದೆ.<br />ಕಾಮನ್ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಸಂಸ್ಥೆಯ (ಸಿಎಸ್ಐಆರ್ಒ)</p>.<p>ಪ್ರಯೋಗಾಲಯದಲ್ಲಿ ಈ ವೈರಸ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೆಲ್ಬರ್ನ್ನ ಡೊಹರ್ಟಿ ಸಂಸ್ಥೆಯಲ್ಲಿ ಮೊದಲ ಬಾರಿಗೆ ಈ ತಂಡದ ವಿಜ್ಞಾನಿಗಳು ಕೊರೊನಾ ವೈರಸ್ನ ಮಾದರಿಯನ್ನು ಅಭಿವೃದ್ಧಿಪಡಿಸಿದ್ದರು. ಸೋಂಕಿತ ವ್ಯಕ್ತಿಯ ರಕ್ತದ ಮಾದರಿಯಿಂದ ಈ ವೈರಸ್ ಬೇರ್ಪಡಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದರು ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.</p>.<p>‘ವೈರಸ್ನ ಗುಣಲಕ್ಷಣಗಳನ್ನು ಮೊದಲು ಅಧ್ಯಯನ ನಡೆಸಲಾಗುತ್ತದೆ. ಹೊಸ ರೋಗನಿರೋಧಕ ಔಷಧ ಅಭಿವೃದ್ಧಿಪಡಿಸಲು ಇದುವೇ ಪ್ರಮುಖ ಆಧಾರ’ ಎಂದು ಸಿಎಸ್ಐಆರ್ಒ ತಿಳಿಸಿದೆ.</p>.<p><strong>ನೆರವು: </strong>ವುಹಾನ್ನಿಂದ ಪಾಕಿಸ್ತಾನ ಸೇರಿದಂತೆ ನೆರೆ ರಾಷ್ಟ್ರಗಳ ಪ್ರಜೆಗಳನ್ನು ವಾಪಸ್ ಕರೆ ತರಲು ಭಾರತ ನೆರವು ನೀಡಲು ಸಿದ್ಧವಿತ್ತು. ನಮ್ಮ ನೆರವು ಪಡೆದ ಮಾಲ್ಡೀವ್ಸ್ನ 7 ಜನರನ್ನು ಭಾರತಕ್ಕೆ ಕರೆ ತರಲಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>