ಬಂಗಾರದ ಕಾಣಿಕೆ ಬಗ್ಗೆ ಮಾತನಾಡಿರುವ ಸಿದ್ಧಿವಿನಾಯಕ ದೇಗುಲ ಟ್ರಸ್ಟ್ ಸದಸ್ಯ ಆದೇಶ್ ಬಂಡೇಕರ್, ‘ಕಳೆದ ವಾರ ಭಕ್ತರೊಬ್ಬರು 35 ಕೆ.ಜಿ ಚಿನ್ನವನ್ನು ಕಾಣಿಕೆಯಾಗಿ ನೀಡಿದ್ದಾರೆ. ಆದರೆ, ಅವರ ಹೆಸರು ಹೇಳಲು ಸಾಧ್ಯವಿಲ್ಲ. ಅವರು ನೀಡಿದ ಚಿನ್ನದಿಂದ ದೇಗುಲದ ದ್ವಾರ ಮತ್ತು ಛಾವಣಿಗೆ ಹೊದಿಕೆ ಮಾಡಿಸಲಾಗಿದೆ,’ ಎಂದು ಹೇಳಿದ್ದಾರೆ.