ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ನಮ್ಮನ್ನು ತಿರಸ್ಕರಿಸಿಲ್ಲ, ಬಿಜೆಪಿ ಮತಗಳು ಏರಿಕೆ ಕಂಡಿವೆ: ಮನೋಜ್ ತಿವಾರಿ

Last Updated 11 ಫೆಬ್ರುವರಿ 2020, 14:41 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಾವುಯಾಕೆ ವಿಫಲವಾದೆವು ಎಂಬುದರ ಬಗ್ಗೆ ಪಕ್ಷ ಅವಲೋಕನ ನಡೆಸಲಿದೆ. ನಮಗೆ ನೈತಿಕ ಗೆಲುವು ಸಿಕ್ಕಿದೆ. 2015ರ ನಂತರ ಪಕ್ಷದ ಮತಗಳ ಶೇಕಡಾವಾರು ಏರಿಕೆಯಾಗಿದೆ ಎಂದು ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಹೇಳಿದ್ದಾರೆ.

ಬಹಳ ಎಚ್ಚರಿಕೆಯಿಂದದೆಹಲಿ ಜನರು ಮತ ಹಾಕಬೇಕಿತ್ತು. ನಮ್ಮ ಮತಗಳ ಶೇಕಡಾವಾರು ಶೇ. 32ರಿಂದ ಶೇ.38ರ ವರೆಗೆ ಏರಿಕೆ ಕಂಡಿದೆ. ದೆಹಲಿ ನಮ್ಮನ್ನು ತಿರಸ್ಕರಿಸಿಲ್ಲ, ಮತಗಳಲ್ಲಿನ ಏರಿಕೆ ನಮಗೆ ಉತ್ತಮ ಮುನ್ಸೂಚನೆಯನ್ನು ನೀಡಿದೆ ಎಂದಿದ್ದಾರೆ ತಿವಾರಿ.

ಪರಸ್ಪರ ದೂರುವುದನ್ನು ಬಿಟ್ಟು ಹೆಚ್ಚಿನ ಕೆಲಸವನ್ನು ಬಿಜೆಪಿ ಮಾಡಬೇಕಿತ್ತು ಎಂದು ಹೇಳಿದ ತಿವಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದಅರವಿಂದ ಕೇಜ್ರಿವಾಲ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT