ನವದೆಹಲಿ: ಚುನಾವಣಾ ಆಯೋಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿದೆ.
ಕೇಜ್ರಿವಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವ 'ಹಿಂದು ಮುಸ್ಲಿಂ' ಎಂಬ ವಿಡಿಯೋ ಪ್ರಕಟಿಸಿರುವುದಾಗಿ ನೋಟೀಸಿನಲ್ಲಿ ತಿಳಿಸಲಾಗಿದೆ.
ಈ ನೋಟೀಸಿಗೆ ಚುನಾವಣೆ ನಡೆಯುವ ದಿನ ಫೆ.8ರಂದು ಶನಿವಾರ ಸಂಜೆ 5ರ ಒಳಗೆ ಪ್ರತಿಕ್ರಿಯೆ ನೀಡಬೇಕೆಂದು ತಿಳಿಸಲಾಗಿದೆ.
ವಿಡಿಯೋದಲ್ಲಿ ಬೇರೆ ಪಕ್ಷಗಳು 'ಹಿಂದು ಮುಸ್ಲಿಂ' 'ಸಿಎಎ' 'ಮಂದಿರ ಮಸೀದಿ' ಎಂಬುದರ ಬಗ್ಗೆ ಮಾತನಾಡಿದರೆ, ಕೇಜ್ರಿವಾಲ್ ಮಾತ್ರ ಅಭಿವೃದ್ಧಿ, ಶಾಲೆ ಮತ್ತು ಮಹಿಳೆಯ ಭದ್ರತೆ ಬಗ್ಗೆ ಮಾತನಾಡುತ್ತಾರೆ ಎಂದು ತಿಳಿಸಲಾಗಿದೆ.