<p><strong>ನವದೆಹಲಿ</strong>: 'ರಾಜ್ಯಪಾಲರು ಅಮಿತ್ ಶಾ ಅವರ ಹಿಟ್ಮ್ಯಾನ್ ರೀತಿ ವರ್ತಿಸಿದ್ದಾರೆ' ಎಂದುಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ ಟೀಕಿಸಿದರು.</p>.<p>ಮಹಾರಾಷ್ಟ್ರದಲ್ಲಿ ಬೆಳಿಗ್ಗೆ ನಡೆದಿರುವ ದಿಢೀರ್ ನಾಟಕೀಯ ಬೆಳವಣಿಗೆ ಕುರಿತು ಸುರ್ಜೇವಾಲಾ ಮಾತನಾಡಿದರು.</p>.<p><strong>ಇದನ್ನೂ ಓದಿ:</strong><a href="https://cms.prajavani.net/stories/national/want-a-government-under-shiv-senas-leadership-says-sharad-pawar-maharashtra-politics-684564.html">ಶಾಸಕರ ಹಾದಿ ತಪ್ಪಿಸಿದ ಅಜಿತ್; ಏನಾಗ್ತಿದೆ ತಿಳಿಯುವುದರಲ್ಲಿ ಪ್ರಮಾಣವಚನ ಮುಕ್ತಾಯ!</a></p>.<p>'ಅವಕಾಶವಾದಿ ಅಜಿತ್ ಪವಾರ್ಗೆ ಜೈಲಿನ ಭೀತಿ ಮೂಡಿಸಿ ಬಿಜೆಪಿ ಸೆಳೆದುಕೊಂಡಿದೆ. ದುರ್ಯೋಧನ ಮತ್ತು ಶಕುನಿಯ ರೀತಿ ಬಿಜೆಪಿ ಮತ್ತು ಅಜಿತ್ ಪವಾರ್ ಸೇರಿ ಮಹಾರಾಷ್ಟ್ರ ಜನಾದೇಶವನ್ನು ಹರಣಗೊಳಿಸಿದ್ದಾರೆ' ಎಂದರು.</p>.<p>'72,000 ಕೋಟಿ ಕೃಷಿಹಗರಣದಲ್ಲಿ ಅಜಿತ್ ಪವಾರ್ನ್ನು ಜೈಲಿಗೆ ಕಳುಹಿಸಲು ಫಡಣವಿಸ್ ನೇತೃತ್ವದ ಬಿಜೆಪಿ ಸರ್ಕಾರ ಕ್ರಮವಹಿಸಿತ್ತು. ಆದರೆ, ಅದೇ ಬಿಜೆಪಿ ಹಗರಣಗಳ ಆರೋಪ ಹೊತ್ತಿರುವ ವ್ಯಕ್ತಿಯನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಸಚಿವಾಲಯಕ್ಕೆ ಕಳುಹಿಸಿದೆ' ಎಂದು ಬಿಜೆಪಿ ವಿರುದ್ಧ ಕುಟುಕಿದರು.</p>.<p><strong>ಇದನ್ನೂ ಓದಿ:</strong><a href="https://cms.prajavani.net/stories/national/mla-signatures-misused-as-basis-for-oath-nawab-malik-attacks-ajit-pawar-684594.html">'ಹಾಜರಾತಿಗೆ ಪಡೆದ ಶಾಸಕರ ಸಹಿಗಳು ಪ್ರಮಾಣ ವಚನ ಸ್ವೀಕಾರದಲ್ಲಿ ದುರುಪಯೋಗ' </a></p>.<p>'ಮಹಾರಾಷ್ಟ್ರದ ರಾಜ್ಯಪಾಲರು ಸಂವಿಧಾನ ರಕ್ಷಣೆ ಕಾರ್ಯನಿರ್ವಹಿಸುವುದನ್ನು ಬಿಟ್ಟು ಅಮಿತ್ ಶಾ ಅವರ ಹಿಟ್ಮ್ಯಾನ್ ರೀತಿ ನಡೆದುಕೊಂಡಿದ್ದಾರೆ. ರಾತ್ರಿ ಕಳೆದು ಬೆಳಗಾಗುವ ವೇಳೆಗೆ ಕದ್ದು ಮುಚ್ಚಿ ಪ್ರಮಾಣ ವಚನ ಸ್ವೀಕಾರ ನಡೆಸಲಾಗಿದೆ' ಎಂದು ಸರ್ಜೇವಾಲಾ ಆರೋಪಿಸಿದರು.</p>.<p><strong>ಇದನ್ನೂ ಓದಿ:</strong><a href="https://cms.prajavani.net/stories/national/maharashtra-highlights-bjp-shiv-sena-midnight-coup-devendra-fadnavis-cm-ajit-pawar-dcm-684559.html" itemprop="url">ಮಹಾರಾಷ್ಟ್ರ ರಾಜಕೀಯದ 'ಹಗಲು-ರಾತ್ರಿ ಪಂದ್ಯ': ಮಧ್ಯರಾತ್ರಿ ನಡೆದದ್ದು ಇಷ್ಟು...</a></p>.<p>'ಸರ್ಕಾರ ರಚನೆಯ ಪ್ರಸ್ತಾಪವನ್ನು ಯಾರು ಮುಂದಿಟ್ಟರು? ಬೆಂಬಲ ವ್ಯಕ್ತಪಡಿಸಿರುವವ ಸಹಿಗಳನ್ನು ರಾಜ್ಯಪಾಲರು ಪರಿಶೀಲಿಸಿದ್ದಾರೆಯೇ?,..' ಎಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಹಲವು ಪ್ರಶ್ನೆಗಳನ್ನು ತೂರಿದರು.</p>.<p><strong>ಇದನ್ನೂ ಓದಿ:</strong><a href="https://cms.prajavani.net/stories/national/will-form-maharashtra-govt-with-sena-ncp-congress-after-ajit-pawars-stunner-684579.html">ವಿಶ್ವಾಸ ಮತ ಯಾಚನೆಯಲ್ಲಿ ಬಿಜೆಪಿ ಸೋಲಿಸಿ ಸರ್ಕಾರ ರಚನೆ ಖಚಿತ: ಕಾಂಗ್ರೆಸ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: 'ರಾಜ್ಯಪಾಲರು ಅಮಿತ್ ಶಾ ಅವರ ಹಿಟ್ಮ್ಯಾನ್ ರೀತಿ ವರ್ತಿಸಿದ್ದಾರೆ' ಎಂದುಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ ಟೀಕಿಸಿದರು.</p>.<p>ಮಹಾರಾಷ್ಟ್ರದಲ್ಲಿ ಬೆಳಿಗ್ಗೆ ನಡೆದಿರುವ ದಿಢೀರ್ ನಾಟಕೀಯ ಬೆಳವಣಿಗೆ ಕುರಿತು ಸುರ್ಜೇವಾಲಾ ಮಾತನಾಡಿದರು.</p>.<p><strong>ಇದನ್ನೂ ಓದಿ:</strong><a href="https://cms.prajavani.net/stories/national/want-a-government-under-shiv-senas-leadership-says-sharad-pawar-maharashtra-politics-684564.html">ಶಾಸಕರ ಹಾದಿ ತಪ್ಪಿಸಿದ ಅಜಿತ್; ಏನಾಗ್ತಿದೆ ತಿಳಿಯುವುದರಲ್ಲಿ ಪ್ರಮಾಣವಚನ ಮುಕ್ತಾಯ!</a></p>.<p>'ಅವಕಾಶವಾದಿ ಅಜಿತ್ ಪವಾರ್ಗೆ ಜೈಲಿನ ಭೀತಿ ಮೂಡಿಸಿ ಬಿಜೆಪಿ ಸೆಳೆದುಕೊಂಡಿದೆ. ದುರ್ಯೋಧನ ಮತ್ತು ಶಕುನಿಯ ರೀತಿ ಬಿಜೆಪಿ ಮತ್ತು ಅಜಿತ್ ಪವಾರ್ ಸೇರಿ ಮಹಾರಾಷ್ಟ್ರ ಜನಾದೇಶವನ್ನು ಹರಣಗೊಳಿಸಿದ್ದಾರೆ' ಎಂದರು.</p>.<p>'72,000 ಕೋಟಿ ಕೃಷಿಹಗರಣದಲ್ಲಿ ಅಜಿತ್ ಪವಾರ್ನ್ನು ಜೈಲಿಗೆ ಕಳುಹಿಸಲು ಫಡಣವಿಸ್ ನೇತೃತ್ವದ ಬಿಜೆಪಿ ಸರ್ಕಾರ ಕ್ರಮವಹಿಸಿತ್ತು. ಆದರೆ, ಅದೇ ಬಿಜೆಪಿ ಹಗರಣಗಳ ಆರೋಪ ಹೊತ್ತಿರುವ ವ್ಯಕ್ತಿಯನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಸಚಿವಾಲಯಕ್ಕೆ ಕಳುಹಿಸಿದೆ' ಎಂದು ಬಿಜೆಪಿ ವಿರುದ್ಧ ಕುಟುಕಿದರು.</p>.<p><strong>ಇದನ್ನೂ ಓದಿ:</strong><a href="https://cms.prajavani.net/stories/national/mla-signatures-misused-as-basis-for-oath-nawab-malik-attacks-ajit-pawar-684594.html">'ಹಾಜರಾತಿಗೆ ಪಡೆದ ಶಾಸಕರ ಸಹಿಗಳು ಪ್ರಮಾಣ ವಚನ ಸ್ವೀಕಾರದಲ್ಲಿ ದುರುಪಯೋಗ' </a></p>.<p>'ಮಹಾರಾಷ್ಟ್ರದ ರಾಜ್ಯಪಾಲರು ಸಂವಿಧಾನ ರಕ್ಷಣೆ ಕಾರ್ಯನಿರ್ವಹಿಸುವುದನ್ನು ಬಿಟ್ಟು ಅಮಿತ್ ಶಾ ಅವರ ಹಿಟ್ಮ್ಯಾನ್ ರೀತಿ ನಡೆದುಕೊಂಡಿದ್ದಾರೆ. ರಾತ್ರಿ ಕಳೆದು ಬೆಳಗಾಗುವ ವೇಳೆಗೆ ಕದ್ದು ಮುಚ್ಚಿ ಪ್ರಮಾಣ ವಚನ ಸ್ವೀಕಾರ ನಡೆಸಲಾಗಿದೆ' ಎಂದು ಸರ್ಜೇವಾಲಾ ಆರೋಪಿಸಿದರು.</p>.<p><strong>ಇದನ್ನೂ ಓದಿ:</strong><a href="https://cms.prajavani.net/stories/national/maharashtra-highlights-bjp-shiv-sena-midnight-coup-devendra-fadnavis-cm-ajit-pawar-dcm-684559.html" itemprop="url">ಮಹಾರಾಷ್ಟ್ರ ರಾಜಕೀಯದ 'ಹಗಲು-ರಾತ್ರಿ ಪಂದ್ಯ': ಮಧ್ಯರಾತ್ರಿ ನಡೆದದ್ದು ಇಷ್ಟು...</a></p>.<p>'ಸರ್ಕಾರ ರಚನೆಯ ಪ್ರಸ್ತಾಪವನ್ನು ಯಾರು ಮುಂದಿಟ್ಟರು? ಬೆಂಬಲ ವ್ಯಕ್ತಪಡಿಸಿರುವವ ಸಹಿಗಳನ್ನು ರಾಜ್ಯಪಾಲರು ಪರಿಶೀಲಿಸಿದ್ದಾರೆಯೇ?,..' ಎಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಹಲವು ಪ್ರಶ್ನೆಗಳನ್ನು ತೂರಿದರು.</p>.<p><strong>ಇದನ್ನೂ ಓದಿ:</strong><a href="https://cms.prajavani.net/stories/national/will-form-maharashtra-govt-with-sena-ncp-congress-after-ajit-pawars-stunner-684579.html">ವಿಶ್ವಾಸ ಮತ ಯಾಚನೆಯಲ್ಲಿ ಬಿಜೆಪಿ ಸೋಲಿಸಿ ಸರ್ಕಾರ ರಚನೆ ಖಚಿತ: ಕಾಂಗ್ರೆಸ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>