ಬಿಜೆಪಿಯೂ ಎನ್ಸಿಪಿ ಶಾಸಕರ ಜತೆಗೂಡಿ, ಸ್ವತಂತ್ರರ ಬೆಂಬಲಕ್ಕೂ ಪ್ರಯತ್ನಿಸುತ್ತಲೇ ಇತ್ತು. ಎನ್ಸಿಪಿ-ಕಾಂಗ್ರೆಸ್-ಶಿವಸೇನಾ ಪಕ್ಷಗಳು ಮಾತುಕತೆ ನಡೆಸುತ್ತಾ, ಅಧಿಕಾರಕ್ಕೇರಲು ಪ್ರಯತ್ನಿಸಿದ್ದವು. ಒಟ್ಟಾರೆ ಈ ಗೊಂದಲದ ಮಧ್ಯೆ, ಚಾಣಾಕ್ಷ ನಡೆಯಿಂದ ಬಿಜೆಪಿ ಹಾಗೂ ಎನ್ಸಿಪಿಯ ಅಜಿತ್ ಪವಾರ್ ಬಣ ಸೇರಿಕೊಂಡು, ಜತೆಗೆ ಸ್ವತಂತ್ರರ ಬೆಂಬಲದೊಂದಿಗೆ ಸರಕಾರ ರಚನೆ ಪ್ರಕ್ರಿಯೆಗೆ ಚಾಲನೆ ದೊರೆತೇಬಿಟ್ಟಿದೆ.