<p><strong>ನವದೆಹಲಿ:</strong>ಬಂಗ್ಲೇವಾಲಿ ಮಸೀದಿ ಖಾಲಿ ಮಾಡುವಂತೆ ದೆಹಲಿ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಮನವಿ ಮಾಡಿದರೂ ನಿಜಾಮುದ್ದೀನ್ ಮರ್ಕಜ್ ಮುಖ್ಯಸ್ಥ ಮೌಲಾನಾ ಸಾದ್ ಕೇಳಲಿಲ್ಲ.ಕೊನೆಗೆ ಈ ಕಾರ್ಯವನ್ನು ಮಾಡಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್ ಬರಬೇಕಾಯಿತು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/covid-19-search-begins-for-nizamuddin-linked-suspected-cases-as-tally-increases-across-india-716896.html" itemprop="url" target="_blank">ತಬ್ಲಿಗಿ ಜಮಾತ್ | ದೇಶದಾದ್ಯಂತ ಸುಮಾರು 7000 ಮಂದಿ ಪತ್ತೆಯೇ ಸವಾಲು </a></p>.<p>ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ ಡೊಬಾಲ್ ಅವರು ಮಾರ್ಚ್ 28-29ರ ರಾತ್ರಿ2 ಗಂಟೆಗೆ ಮರ್ಕಜ್ಗೆ ಬಂದು ಮಸೀದಿಯಲ್ಲಿರುವ ಜನರನ್ನು ಕೋವಿಡ್-19 ತಪಾಸಣೆ ನಡೆಸಿ ಕ್ವಾರಂಟೈನ್ನಲ್ಲಿರಿಸುವಂತೆ ಮೌಲಾನಾ ಸಾದ್ ಮನವೊಲಿಸಿದ್ದಾರೆ.</p>.<p>ಮಾರ್ಚ್ 18ರಂದು ಮರ್ಕಜ್ನಲ್ಲಿ ಭಾಗಿಯಾಗಿದ್ದ ಇಂಡೋನೇಷ್ಯಾದ 9 ಪ್ರಜೆಗಳಿಗೆ ಕೋವಿಡ್ ರೋಗ ದೃಢಪಟ್ಟಿದೆ ಎಂದು ತೆಲಂಗಾಣದ ಕರೀಂನಗರದಿಂದ ವರದಿಯಾಗಿತ್ತು.ಈ ಹಿನ್ನಲೆಯಲ್ಲಿ ಭದ್ರತಾ ಸಂಸ್ಥೆಯು ಎಲ್ಲ ರಾಜ್ಯದ ಪೊಲೀಸ್ ಮತ್ತು ಇತರ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ನೀಡಿತ್ತು .</p>.<p>ಏತನ್ಮಧ್ಯೆ ಮರ್ಕಜ್ 167 ತಬ್ಲಿಗಿ ನೌಕರರನ್ನು ಮಾರ್ಚ್ 27, 28 ಮತ್ತು 29ರಂದು ಆಸ್ಪತ್ರೆಗೆ ದಾಖಲಿಸಿತ್ತು.ಡೊಬಾಲ್ ಅವರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದ ನಂತರವೇ ಜಮಾತ್ ನಾಯಕತ್ವವು ಮಸೀದಿ ಶುಚೀಕರಣಕ್ಕೆ ಒಪ್ಪಿದ್ದು. ಕಳೆದ ದಶಕಗಳಿಂದ ಡೊಬಾಲ್ ಅವರು ಭಾರತದ ಒಳಗೆ ಮತ್ತು ಹೊರಗೆ ಹಲವಾರು ಮುಸ್ಲಿಂ ಚಳವಳಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.</p>.<p>ಇದೀಗ ಎರಡನೇ ಹಂತದ ಕಾರ್ಯಾಚರಣೆ ಇಲ್ಲಿ ನಡೆಯುತ್ತಿದೆ. ಈ ಕಾರ್ಯಾಚರಣೆಯಲ್ಲಿ ಎಲ್ಲ ವೀಸಾಗಳನ್ನು ಪರಿಶೀಲಿಸಲಾಗುತ್ತಿದೆ. ದೆಹಲಿಯಲ್ಲಿರುವ ಮರ್ಕಜ್ನಲ್ಲಿ 216 ಮಂದಿ ವಿದೇಶೀಯರಿದ್ದಾರೆ. ಆದರೆ ದೇಶದ ವಿವಿಧ ಭಾಗಗಳಲ್ಲಿ 800ಕ್ಕಿಂತಲೂ ಹೆಚ್ಚು ವಿದೇಶಿಯರಿದ್ದಾರೆ. ಇವರಲ್ಲಿ ಹೆಚ್ಚಿನವರು ಇಂಡೊನೇಷ್ಯಾ, ಮಲೇಷ್ಯಾ ಮತ್ತು ಬಾಂಗ್ಲಾದೇಶದವರಾಗಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/nizamuddin-markaz-state-wise-list-of-around-2000-people-who-attended-tablighi-jamaat-new-delhi-716791.html" itemprop="url" target="_blank">ತಬ್ಲಿಗಿ ಜಮಾತ್ನಲ್ಲಿ ಧಾರ್ಮಿಕ ಸಮಾವೇಶಕ್ಕೆಹಾಜರಾದವರಿಗೆ ಕೊರೊನಾ ಸೋಂಕು: ವಿವರ ಇಲ್ಲಿದೆ </a></p>.<p>ಜನವರಿಯ ನಂತರ ಸುಮಾರು 2,000 ವಿದೇಶಿಯರು ಮರ್ಕಜ್ನಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಹೆಚ್ಚಿನವರು ವೀಸಾ ನಿಯಮ ಉಲ್ಲಂಘಿಸಿ ಭಾರತಕ್ಕೆ ಬಂದವರಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.</p>.<p>ಮಿಷನರಿ ಕೆಟಗರಿಯಡಿಯಲ್ಲಿಯೇ ವೀಸಾ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಪದೇ ಪದೇ ಹೇಳಿದ್ದರೂ ಇಲ್ಲಿಗೆ ಬಂದವರು ಅದನ್ನು ಪಾಲಿಸಿಲ್ಲ. ವೀಸಾ ನಿಯಮ ಉಲ್ಲಂಘಿಸಿದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ಮತ್ತೊಮ್ಮೆ ದೇಶಕ್ಕೆ ಪ್ರವೇಶಿಸದಂತೆ ತಡೆಯಲಾಗುವುದು.<br />ವಿದೇಶಿಯರ ಹೊರತಾಗಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಎಲ್ಲ ಭಾರತೀಯರನ್ನು ಪತ್ತೆ ಹಚ್ಚಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುವುದು ಎಂದು ಮೂಲಗಳು ಹೇಳಿವೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/tablighi-jamaat-attendees-misbehave-with-coronavirus-health-staffers-spit-at-doctors-at-delhi-716995.html" itemprop="url">ತಬ್ಲಿಗಿ ಸಮಾವೇಶ: ಕ್ವಾರಂಟೈನ್ ಕೇಂದ್ರದಲ್ಲಿ ವೈದ್ಯರತ್ತ ಉಗುಳಿ ರಂಪಾಟ ಮಾಡಿದರು! </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong>ಬಂಗ್ಲೇವಾಲಿ ಮಸೀದಿ ಖಾಲಿ ಮಾಡುವಂತೆ ದೆಹಲಿ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಮನವಿ ಮಾಡಿದರೂ ನಿಜಾಮುದ್ದೀನ್ ಮರ್ಕಜ್ ಮುಖ್ಯಸ್ಥ ಮೌಲಾನಾ ಸಾದ್ ಕೇಳಲಿಲ್ಲ.ಕೊನೆಗೆ ಈ ಕಾರ್ಯವನ್ನು ಮಾಡಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್ ಬರಬೇಕಾಯಿತು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/covid-19-search-begins-for-nizamuddin-linked-suspected-cases-as-tally-increases-across-india-716896.html" itemprop="url" target="_blank">ತಬ್ಲಿಗಿ ಜಮಾತ್ | ದೇಶದಾದ್ಯಂತ ಸುಮಾರು 7000 ಮಂದಿ ಪತ್ತೆಯೇ ಸವಾಲು </a></p>.<p>ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ ಡೊಬಾಲ್ ಅವರು ಮಾರ್ಚ್ 28-29ರ ರಾತ್ರಿ2 ಗಂಟೆಗೆ ಮರ್ಕಜ್ಗೆ ಬಂದು ಮಸೀದಿಯಲ್ಲಿರುವ ಜನರನ್ನು ಕೋವಿಡ್-19 ತಪಾಸಣೆ ನಡೆಸಿ ಕ್ವಾರಂಟೈನ್ನಲ್ಲಿರಿಸುವಂತೆ ಮೌಲಾನಾ ಸಾದ್ ಮನವೊಲಿಸಿದ್ದಾರೆ.</p>.<p>ಮಾರ್ಚ್ 18ರಂದು ಮರ್ಕಜ್ನಲ್ಲಿ ಭಾಗಿಯಾಗಿದ್ದ ಇಂಡೋನೇಷ್ಯಾದ 9 ಪ್ರಜೆಗಳಿಗೆ ಕೋವಿಡ್ ರೋಗ ದೃಢಪಟ್ಟಿದೆ ಎಂದು ತೆಲಂಗಾಣದ ಕರೀಂನಗರದಿಂದ ವರದಿಯಾಗಿತ್ತು.ಈ ಹಿನ್ನಲೆಯಲ್ಲಿ ಭದ್ರತಾ ಸಂಸ್ಥೆಯು ಎಲ್ಲ ರಾಜ್ಯದ ಪೊಲೀಸ್ ಮತ್ತು ಇತರ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ನೀಡಿತ್ತು .</p>.<p>ಏತನ್ಮಧ್ಯೆ ಮರ್ಕಜ್ 167 ತಬ್ಲಿಗಿ ನೌಕರರನ್ನು ಮಾರ್ಚ್ 27, 28 ಮತ್ತು 29ರಂದು ಆಸ್ಪತ್ರೆಗೆ ದಾಖಲಿಸಿತ್ತು.ಡೊಬಾಲ್ ಅವರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದ ನಂತರವೇ ಜಮಾತ್ ನಾಯಕತ್ವವು ಮಸೀದಿ ಶುಚೀಕರಣಕ್ಕೆ ಒಪ್ಪಿದ್ದು. ಕಳೆದ ದಶಕಗಳಿಂದ ಡೊಬಾಲ್ ಅವರು ಭಾರತದ ಒಳಗೆ ಮತ್ತು ಹೊರಗೆ ಹಲವಾರು ಮುಸ್ಲಿಂ ಚಳವಳಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.</p>.<p>ಇದೀಗ ಎರಡನೇ ಹಂತದ ಕಾರ್ಯಾಚರಣೆ ಇಲ್ಲಿ ನಡೆಯುತ್ತಿದೆ. ಈ ಕಾರ್ಯಾಚರಣೆಯಲ್ಲಿ ಎಲ್ಲ ವೀಸಾಗಳನ್ನು ಪರಿಶೀಲಿಸಲಾಗುತ್ತಿದೆ. ದೆಹಲಿಯಲ್ಲಿರುವ ಮರ್ಕಜ್ನಲ್ಲಿ 216 ಮಂದಿ ವಿದೇಶೀಯರಿದ್ದಾರೆ. ಆದರೆ ದೇಶದ ವಿವಿಧ ಭಾಗಗಳಲ್ಲಿ 800ಕ್ಕಿಂತಲೂ ಹೆಚ್ಚು ವಿದೇಶಿಯರಿದ್ದಾರೆ. ಇವರಲ್ಲಿ ಹೆಚ್ಚಿನವರು ಇಂಡೊನೇಷ್ಯಾ, ಮಲೇಷ್ಯಾ ಮತ್ತು ಬಾಂಗ್ಲಾದೇಶದವರಾಗಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/nizamuddin-markaz-state-wise-list-of-around-2000-people-who-attended-tablighi-jamaat-new-delhi-716791.html" itemprop="url" target="_blank">ತಬ್ಲಿಗಿ ಜಮಾತ್ನಲ್ಲಿ ಧಾರ್ಮಿಕ ಸಮಾವೇಶಕ್ಕೆಹಾಜರಾದವರಿಗೆ ಕೊರೊನಾ ಸೋಂಕು: ವಿವರ ಇಲ್ಲಿದೆ </a></p>.<p>ಜನವರಿಯ ನಂತರ ಸುಮಾರು 2,000 ವಿದೇಶಿಯರು ಮರ್ಕಜ್ನಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಹೆಚ್ಚಿನವರು ವೀಸಾ ನಿಯಮ ಉಲ್ಲಂಘಿಸಿ ಭಾರತಕ್ಕೆ ಬಂದವರಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.</p>.<p>ಮಿಷನರಿ ಕೆಟಗರಿಯಡಿಯಲ್ಲಿಯೇ ವೀಸಾ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಪದೇ ಪದೇ ಹೇಳಿದ್ದರೂ ಇಲ್ಲಿಗೆ ಬಂದವರು ಅದನ್ನು ಪಾಲಿಸಿಲ್ಲ. ವೀಸಾ ನಿಯಮ ಉಲ್ಲಂಘಿಸಿದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ಮತ್ತೊಮ್ಮೆ ದೇಶಕ್ಕೆ ಪ್ರವೇಶಿಸದಂತೆ ತಡೆಯಲಾಗುವುದು.<br />ವಿದೇಶಿಯರ ಹೊರತಾಗಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಎಲ್ಲ ಭಾರತೀಯರನ್ನು ಪತ್ತೆ ಹಚ್ಚಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುವುದು ಎಂದು ಮೂಲಗಳು ಹೇಳಿವೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/tablighi-jamaat-attendees-misbehave-with-coronavirus-health-staffers-spit-at-doctors-at-delhi-716995.html" itemprop="url">ತಬ್ಲಿಗಿ ಸಮಾವೇಶ: ಕ್ವಾರಂಟೈನ್ ಕೇಂದ್ರದಲ್ಲಿ ವೈದ್ಯರತ್ತ ಉಗುಳಿ ರಂಪಾಟ ಮಾಡಿದರು! </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>