<p><strong>ನವದೆಹಲಿ: </strong>ಸಂಸದರು ಮತ್ತು ಮಾಜಿ ಸಂಸದರು ಅನೇಕ ರೈಲು ಟಿಕೆಟ್ಗಳನ್ನು ಕಾಯ್ದಿರಿಸಿ ಕೆಲವೇ ಪ್ರಯಾಣಗಳನ್ನು ಕೈಗೊಂಡು ಉಳಿದ ಟಿಕೆಟ್ಗಳನ್ನು ರದ್ದುಗೊಳಿಸದೇ ಇರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಸಂಸತ್ಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ.</p>.<p>ರಾಜ್ಯಸಭೆಯ ಮಾಜಿ ಸಂಸದರೊಬ್ಬರು 2019ರ ಜನವರಿಯಲ್ಲಿ 23 ದಿನಗಳಲ್ಲಿ 63 ರೈಲು ಟಿಕೆಟ್ ಕಾಯ್ದಿರಿಸಿದ್ದರು. ಆದರೆ 7 ಬಾರಿ ಮಾತ್ರ ಪ್ರಯಾಣಿಸಿದ್ದರು. ಉಳಿದ ಟಿಕೆಟ್ಗಳನ್ನು ರದ್ದುಗೊಳಿಸಿರಲಿಲ್ಲ. ಇದರಿಂದಾಗಿ ಸಂಸತ್ತು ಹೆಚ್ಚುವರಿಯಾಗಿ ₹1.46 ಲಕ್ಷ ಪಾವತಿಸುವಂತಾಗಿತ್ತು ಎಂದು ಮೂಲಗಳು ತಿಳಿಸಿವೆ.</p>.<p>ರಾಜ್ಯಸಭೆಯ ಸಮೀಕ್ಷೆಯೊಂದರ ಮಾಹಿತಿ ಪ್ರಕಾರ, 2019ರ ಜನವರಿಯಲ್ಲಿ ಹಾಲಿ ಸಂಸದರು ರೈಲು ಟಿಕೆಟ್ ಕಾಯ್ದಿರಿಸಿದ್ದರ ಶೇ 15ರಷ್ಟು ಮಾತ್ರವೇ ಪ್ರಯಾಣಿಸಿದ್ದರು. ಉಳಿದ ಟಿಕೆಟ್ಗಳನ್ನು ರದ್ದುಗೊಳಿಸದ್ದರ ಪರಿಣಾಮವಾಗಿ ಸಂಸತ್ತು ಹೆಚ್ಚುವರಿ ಪಾವತಿ ಮಾಡುವಂತಾಗಿತ್ತು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/india-crosses-3-lakh-mark-as-it-reports-the-highest-single-day-spike-in-covid-19-cases-736105.html" itemprop="url" target="_blank">Covid-19 India Updates| 24 ಗಂಟೆಗಳಲ್ಲಿ ಅತ್ಯಧಿಕ ಸೋಂಕು ಪ್ರಕರಣಗಳು ಪತ್ತೆ</a></p>.<p>ಹೀಗಾಗಿ, ಪ್ರಯಾಣ ಮಾಡದೇ ಇದ್ದಲ್ಲಿ ಕಾಯ್ದಿರಿಸಿದ ಟಿಕೆಟ್ಗಳನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಆ ಮೊತ್ತವನ್ನು ಸಂಸದರಿಂದಲೇ ಸ್ವೀಕರಿಸಲಾಗುವುದು ಎಂದು ರಾಜ್ಯಸಭೆ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.</p>.<p>ಸಂಸದರು ಮತ್ತು ಮಾಜಿ ಸಂಸದರು ಪ್ರಥಮ ದರ್ಜೆ ಎಸಿ ಕೋಚ್ನ ಒಂದು ಟಿಕೆಟ್ ಉಚಿತವಾಗಿ ಪಡೆಯಬಹುದಾಗಿದೆ. ಅವರ ಪತ್ನಿಗೂಅವರ ಜೊತೆ ಪ್ರಯಾಣಿಸಲು ಉಚಿತ ಟಿಕೆಟ್ ನೀಡಲಾಗುತ್ತದೆ. ಜೊತೆಗೆ ಇನ್ಯಾರಾದರೂ ಪ್ರಯಾಣಿಸುವುದಿದ್ದಲ್ಲಿ ಅವರಿಗೆ ಸೆಕೆಂಡ್ ಟೈರ್ ಎಸಿ ಕೋಚ್ನಲ್ಲಿ ಉಚಿತವಾಗಿ ಟಿಕೆಟ್ ನೀಡಲಾಗುತ್ತದೆ.</p>.<p>ರೈಲ್ವೆ ಇಲಾಖೆಗೆ ಸಂಸತ್ ಹೆಚ್ಚು ಮೊತ್ತ ಪಾವತಿಸಬೇಕಾಗಿ ಬರುತ್ತಿರುವುದರಿಂದ, ಸಂಸದರ ಟಿಕೆಟ್ ಕಾಯ್ದಿರಿಸುವಿಕೆ ಮತ್ತು ಪ್ರಯಾಣದ ವಿವರವನ್ನು ರಾಜ್ಯಸಭೆಯ ಅಧ್ಯಕ್ಷ, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ನಿರ್ದೇಶನದ ಮೇರೆಗೆ ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/rjd-leader-tejashwi-yadav-tells-bjp-cm-nitish-kumar-bihar-will-get-nothing-from-personal-attack-on-736098.html" itemprop="url" target="_blank">ಬಿಹಾರ | ಸಿಎಂ ನಿತೀಶ್ ಕುಮಾರ್ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ</a></p>.<p>ಕಾಯ್ದಿರಿಸಿ ಬಳಿಕ ಪ್ರಯಾಣಿಸದೇ ಇರುವ ಟಿಕೆಟ್ ರದ್ದುಗೊಳಿಸದಿರುವುದರಿಂದ ರಾಜ್ಯಸಭೆಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿತಗೊಳಿಸುವ ಬಗ್ಗೆ ಮತ್ತು ಟಿಕೆಟ್ ರದ್ದುಗೊಳಿಸದ ಪರಿಣಾಮ ಇತರ ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ನಾಯ್ಡು ಸೂಚಿಸಿದ್ದರು ಎನ್ನಲಾಗಿದೆ.</p>.<p>63 ಟಿಕೆಟ್ಗಳನ್ನು ಕಾಯ್ದಿರಿಸಿದ ಮಾಜಿ ಸಂಸದರ ಬಗ್ಗೆ ಉಲ್ಲೇಖಿಸಿರುವ ಮೂಲಗಳು, ಈ ಕಾಯ್ದಿರಿಸಿದ ಟಿಕೆಟ್ಗಳ ವೆಚ್ಚ ₹1.69 ಲಕ್ಷ ಆಗುತ್ತದೆ. ಆದರೆ ಮಾಜಿ ಸಂಸದರು ಕೇವಲ ಏಳು ಬಾರಿ ಪ್ರಯಾಣಿಸಿದ್ದರಿಂದ ಅದಕ್ಕೆ ತಗಲುವ ವೆಚ್ಚ ಕೇವಲ ₹ 22,085. ರಾಜ್ಯಸಭೆಯು ₹1.46 ಲಕ್ಷ ಹೆಚ್ಚುವರಿಯಾಗಿ, ಅಂದರೆ ಶೇಕಡ 87ರಷ್ಟು ಹೆಚ್ಚುವರಿ ಮೊತ್ತ ಪಾವತಿಸಬೇಕಾಗಿ ಬಂದಿದೆ ಎಂದು ಹೇಳಿವೆ.</p>.<p>2019ರಲ್ಲಿ ಹಾಲಿ, ಮಾಜಿ ಸಂಸದರು ಮತ್ತು ಅವರ ಸಂಗಾತಿ, ಸಹವರ್ತಿಗಳ ರೈಲು ಪ್ರಯಾಣದ ಮೂರನೇ ಒಂದರಷ್ಟು ವೆಚ್ಚವನ್ನು, ₹7.8 ಕೋಟಿಯನ್ನು ರಾಜ್ಯಸಭೆ ಪಾವತಿಸಿತ್ತು. ಉಳಿದ ಮೊತ್ತವನ್ನು ಲೋಕಸಭೆ ಪಾವತಿಸಿತ್ತು. ಈ ಮೊತ್ತದ ಲೆಕ್ಕಾಚಾರದ ವೇಳೆ ಅನೇಕ ಸಂಸದರು, ಮಾಜಿ ಸಂಸದರು ಹಲವು ಟಿಕೆಟ್ ಕಾಯ್ದಿರಿಸಿ ಕೆಲವೇ ಪ್ರಯಾಣಗಳನ್ನು ಕೈಗೊಂಡಿರುವುದು ಗಮನಕ್ಕೆ ಬಂದಿತ್ತು. ಜೊತೆಗೆ ಪ್ರಯಾಣಿಸದೇ ಇರುವ ಟಿಕೆಟ್ಗಳನ್ನು ರದ್ದುಗೊಳಿಸದೇ ಇರುವುದು ತಿಳಿದುಬಂದಿತ್ತು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/modi-conversation-with-chief-ministers-on-june-1617-736084.html" itemprop="url">ಜೂನ್ 16,17ರಂದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಸಂಸದರು ಮತ್ತು ಮಾಜಿ ಸಂಸದರು ಅನೇಕ ರೈಲು ಟಿಕೆಟ್ಗಳನ್ನು ಕಾಯ್ದಿರಿಸಿ ಕೆಲವೇ ಪ್ರಯಾಣಗಳನ್ನು ಕೈಗೊಂಡು ಉಳಿದ ಟಿಕೆಟ್ಗಳನ್ನು ರದ್ದುಗೊಳಿಸದೇ ಇರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಸಂಸತ್ಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ.</p>.<p>ರಾಜ್ಯಸಭೆಯ ಮಾಜಿ ಸಂಸದರೊಬ್ಬರು 2019ರ ಜನವರಿಯಲ್ಲಿ 23 ದಿನಗಳಲ್ಲಿ 63 ರೈಲು ಟಿಕೆಟ್ ಕಾಯ್ದಿರಿಸಿದ್ದರು. ಆದರೆ 7 ಬಾರಿ ಮಾತ್ರ ಪ್ರಯಾಣಿಸಿದ್ದರು. ಉಳಿದ ಟಿಕೆಟ್ಗಳನ್ನು ರದ್ದುಗೊಳಿಸಿರಲಿಲ್ಲ. ಇದರಿಂದಾಗಿ ಸಂಸತ್ತು ಹೆಚ್ಚುವರಿಯಾಗಿ ₹1.46 ಲಕ್ಷ ಪಾವತಿಸುವಂತಾಗಿತ್ತು ಎಂದು ಮೂಲಗಳು ತಿಳಿಸಿವೆ.</p>.<p>ರಾಜ್ಯಸಭೆಯ ಸಮೀಕ್ಷೆಯೊಂದರ ಮಾಹಿತಿ ಪ್ರಕಾರ, 2019ರ ಜನವರಿಯಲ್ಲಿ ಹಾಲಿ ಸಂಸದರು ರೈಲು ಟಿಕೆಟ್ ಕಾಯ್ದಿರಿಸಿದ್ದರ ಶೇ 15ರಷ್ಟು ಮಾತ್ರವೇ ಪ್ರಯಾಣಿಸಿದ್ದರು. ಉಳಿದ ಟಿಕೆಟ್ಗಳನ್ನು ರದ್ದುಗೊಳಿಸದ್ದರ ಪರಿಣಾಮವಾಗಿ ಸಂಸತ್ತು ಹೆಚ್ಚುವರಿ ಪಾವತಿ ಮಾಡುವಂತಾಗಿತ್ತು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/india-crosses-3-lakh-mark-as-it-reports-the-highest-single-day-spike-in-covid-19-cases-736105.html" itemprop="url" target="_blank">Covid-19 India Updates| 24 ಗಂಟೆಗಳಲ್ಲಿ ಅತ್ಯಧಿಕ ಸೋಂಕು ಪ್ರಕರಣಗಳು ಪತ್ತೆ</a></p>.<p>ಹೀಗಾಗಿ, ಪ್ರಯಾಣ ಮಾಡದೇ ಇದ್ದಲ್ಲಿ ಕಾಯ್ದಿರಿಸಿದ ಟಿಕೆಟ್ಗಳನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಆ ಮೊತ್ತವನ್ನು ಸಂಸದರಿಂದಲೇ ಸ್ವೀಕರಿಸಲಾಗುವುದು ಎಂದು ರಾಜ್ಯಸಭೆ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.</p>.<p>ಸಂಸದರು ಮತ್ತು ಮಾಜಿ ಸಂಸದರು ಪ್ರಥಮ ದರ್ಜೆ ಎಸಿ ಕೋಚ್ನ ಒಂದು ಟಿಕೆಟ್ ಉಚಿತವಾಗಿ ಪಡೆಯಬಹುದಾಗಿದೆ. ಅವರ ಪತ್ನಿಗೂಅವರ ಜೊತೆ ಪ್ರಯಾಣಿಸಲು ಉಚಿತ ಟಿಕೆಟ್ ನೀಡಲಾಗುತ್ತದೆ. ಜೊತೆಗೆ ಇನ್ಯಾರಾದರೂ ಪ್ರಯಾಣಿಸುವುದಿದ್ದಲ್ಲಿ ಅವರಿಗೆ ಸೆಕೆಂಡ್ ಟೈರ್ ಎಸಿ ಕೋಚ್ನಲ್ಲಿ ಉಚಿತವಾಗಿ ಟಿಕೆಟ್ ನೀಡಲಾಗುತ್ತದೆ.</p>.<p>ರೈಲ್ವೆ ಇಲಾಖೆಗೆ ಸಂಸತ್ ಹೆಚ್ಚು ಮೊತ್ತ ಪಾವತಿಸಬೇಕಾಗಿ ಬರುತ್ತಿರುವುದರಿಂದ, ಸಂಸದರ ಟಿಕೆಟ್ ಕಾಯ್ದಿರಿಸುವಿಕೆ ಮತ್ತು ಪ್ರಯಾಣದ ವಿವರವನ್ನು ರಾಜ್ಯಸಭೆಯ ಅಧ್ಯಕ್ಷ, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ನಿರ್ದೇಶನದ ಮೇರೆಗೆ ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/rjd-leader-tejashwi-yadav-tells-bjp-cm-nitish-kumar-bihar-will-get-nothing-from-personal-attack-on-736098.html" itemprop="url" target="_blank">ಬಿಹಾರ | ಸಿಎಂ ನಿತೀಶ್ ಕುಮಾರ್ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ</a></p>.<p>ಕಾಯ್ದಿರಿಸಿ ಬಳಿಕ ಪ್ರಯಾಣಿಸದೇ ಇರುವ ಟಿಕೆಟ್ ರದ್ದುಗೊಳಿಸದಿರುವುದರಿಂದ ರಾಜ್ಯಸಭೆಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿತಗೊಳಿಸುವ ಬಗ್ಗೆ ಮತ್ತು ಟಿಕೆಟ್ ರದ್ದುಗೊಳಿಸದ ಪರಿಣಾಮ ಇತರ ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ನಾಯ್ಡು ಸೂಚಿಸಿದ್ದರು ಎನ್ನಲಾಗಿದೆ.</p>.<p>63 ಟಿಕೆಟ್ಗಳನ್ನು ಕಾಯ್ದಿರಿಸಿದ ಮಾಜಿ ಸಂಸದರ ಬಗ್ಗೆ ಉಲ್ಲೇಖಿಸಿರುವ ಮೂಲಗಳು, ಈ ಕಾಯ್ದಿರಿಸಿದ ಟಿಕೆಟ್ಗಳ ವೆಚ್ಚ ₹1.69 ಲಕ್ಷ ಆಗುತ್ತದೆ. ಆದರೆ ಮಾಜಿ ಸಂಸದರು ಕೇವಲ ಏಳು ಬಾರಿ ಪ್ರಯಾಣಿಸಿದ್ದರಿಂದ ಅದಕ್ಕೆ ತಗಲುವ ವೆಚ್ಚ ಕೇವಲ ₹ 22,085. ರಾಜ್ಯಸಭೆಯು ₹1.46 ಲಕ್ಷ ಹೆಚ್ಚುವರಿಯಾಗಿ, ಅಂದರೆ ಶೇಕಡ 87ರಷ್ಟು ಹೆಚ್ಚುವರಿ ಮೊತ್ತ ಪಾವತಿಸಬೇಕಾಗಿ ಬಂದಿದೆ ಎಂದು ಹೇಳಿವೆ.</p>.<p>2019ರಲ್ಲಿ ಹಾಲಿ, ಮಾಜಿ ಸಂಸದರು ಮತ್ತು ಅವರ ಸಂಗಾತಿ, ಸಹವರ್ತಿಗಳ ರೈಲು ಪ್ರಯಾಣದ ಮೂರನೇ ಒಂದರಷ್ಟು ವೆಚ್ಚವನ್ನು, ₹7.8 ಕೋಟಿಯನ್ನು ರಾಜ್ಯಸಭೆ ಪಾವತಿಸಿತ್ತು. ಉಳಿದ ಮೊತ್ತವನ್ನು ಲೋಕಸಭೆ ಪಾವತಿಸಿತ್ತು. ಈ ಮೊತ್ತದ ಲೆಕ್ಕಾಚಾರದ ವೇಳೆ ಅನೇಕ ಸಂಸದರು, ಮಾಜಿ ಸಂಸದರು ಹಲವು ಟಿಕೆಟ್ ಕಾಯ್ದಿರಿಸಿ ಕೆಲವೇ ಪ್ರಯಾಣಗಳನ್ನು ಕೈಗೊಂಡಿರುವುದು ಗಮನಕ್ಕೆ ಬಂದಿತ್ತು. ಜೊತೆಗೆ ಪ್ರಯಾಣಿಸದೇ ಇರುವ ಟಿಕೆಟ್ಗಳನ್ನು ರದ್ದುಗೊಳಿಸದೇ ಇರುವುದು ತಿಳಿದುಬಂದಿತ್ತು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/modi-conversation-with-chief-ministers-on-june-1617-736084.html" itemprop="url">ಜೂನ್ 16,17ರಂದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>