ಪುಣೆಯಲ್ಲಿ ನಡೆದ ಖಾಸಗಿ ಟಿ.ವಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದ ಶಿವಸೇನಾ ವಕ್ತಾರ ಸಂಜಯ್ ರಾವುತ್, ರೌಡಿ ಹಾಜಿ ಮಸ್ತಾನ್ ಮಂತ್ರಾಲಯಕ್ಕೆ ಬಂದಿದ್ದಾಗ ಸರ್ಕಾರದ ಎಲ್ಲ ಅಧಿಕಾರಿಗಳು ಆತನನ್ನು ನೋಡಲು ಬಂದಿದ್ದರು. ಇಂದಿರಾಗಾಂಧಿ ಅವರೂ ದಕ್ಷಿಣ ಮುಂಬೈನ ಪಾಯ್ದೋನಿಯಲ್ಲಿ ಕರೀಂಲಾಲಾನನ್ನು ಭೇಟಿಯಾಗಿದ್ದರು ಎಂಬ ವಿವಾದಿತ ಹೇಳಿಕೆಯನ್ನು ನೀಡಿದ್ದರು.