ನವದೆಹಲಿ: ಒಳಚರಂಡಿ ನೀರು ನದಿಗಳಿಗೆ ಸೇರುವ ಮುನ್ನ ಸಂಪೂರ್ಣವಾಗಿ ಸಂಸ್ಕರಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್ಜಿಟಿ) ಹೇಳಿದೆ. ಮುಂದಿನ ಮಾರ್ಚ್ 31ರೊಳಗೆ ಇದು ಜಾರಿಗೆ ಬರಬೇಕು. ತಪ್ಪಿದರೆ, ಸಂಬಂಧಪಟ್ಟಇಲಾಖೆಯು ಒಂದು ಚರಂಡಿಗೆತಿಂಗಳಿಗೆ ₹5 ಲಕ್ಷ ದಂಡ ಪಾವತಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ನೇತೃತ್ವದ ಪೀಠವು ನೀಡಿದೆ.