ಅಮೃತಸರ: ಪದ್ಮಶ್ರೀ ಪುರಸ್ಕೃತ 67 ವರ್ಷ ವಯಸ್ಸಿನ ಭಾಯ್ ನಿರ್ಮಲ್ ಸಿಂಗ್ ಖಾಸ್ಲಾ ಅವರು ಇಂದು ಮುಂಜಾನೆ 4.30ರ ವೇಳೆಗೆ ಮೃತಪಟ್ಟಿದ್ದಾರೆ. ಅವರಿಗೆ ಕೊರೊನಾವೈರಸ್ ಇರುವುದು ಬುಧವಾರ ದೃಢಪಟ್ಟಿತ್ತು.
ಅಸ್ತಮಾ ಸಮಸ್ಯೆಯಿಂದಲೂ ಬಳಲುತ್ತಿದ್ದ ಸಿಂಗ್ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಪ್ರದೀಪ್ ಕೌರ್ ಜೋಹಲ್ ಹೇಳಿದ್ದಾರೆ.
ಇದರೊಂದಿಗೆ ಪಂಜಾಬ್ನಲ್ಲಿ ಕೋವಿಡ್–19ಗೆ ಬಲಿಯಾದವರ ಸಂಖ್ಯೆ ಆರಕ್ಕೇರಿದೆ.
ಧರ್ಮ ಬೋಧಕರಾಗಿದ್ದ ಸಿಂಗ್ಅವರನ್ನುಉಸಿರಾಟದ ಸಮಸ್ಯೆಯಿಂದಾಗಿ ಇಲ್ಲಿನ ಗುರು ರಾಮ್ ದಾಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಅವರನ್ನುಗುರು ನಾನಕ್ ದೇವ್ ಆಸ್ಪತ್ರೆಗೆ ಮಾರ್ಚ್ 30ರಂದು ದಾಖಲಿಸಲಾಗಿತ್ತು.