<p><strong>ನವದೆಹಲಿ:</strong> ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಮೊದಲ ಕಂತು ₹2,000 ಪಡೆಯುವ ರೈತರಿಗೆ ಆಧಾರ್ ಐಚ್ಛಿಕವಾಗಿದ್ದು, ಎರಡನೇ ಕಂತು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯ.</p>.<p>ಮೊದಲ ಕಂತಿಗೆ ವಿನಾಯಿತಿ ಇದ್ದು, ಮುಂಬರುವ ಕಂತುಗಳ ಹಣ ಪಡೆಯಲು ರೈತರು ಆಧಾರ್ ಸಂಖ್ಯೆ ಮೂಲಕ ತಮ್ಮ ಗುರುತು ಖಚಿತಪಡಿಸಬೇಕಿದೆ.</p>.<p>2 ಹೆಕ್ಟೇರ್ ಜಮೀನು ಹೊಂದಿರುವ ಸುಮಾರು 12 ಕೋಟಿ ರೈತರಿಗೆ ವರ್ಷಕ್ಕೆ ₹6,000 ಧನಸಹಾಯ ನೀಡುವ ಹೊಸ ಯೋಜನೆಯನ್ನು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರು ಮಧ್ಯಂತರ ಬಜೆಟ್ನಲ್ಲಿ ಘೋಷಿಸಿದ್ದರು. ಇದೇ ವರ್ಷದಿಂದ ಯೋಜನೆ ಜಾರಿಯಾಗಲಿದ್ದು, ಮಾರ್ಚ್ ತಿಂಗಳಲ್ಲಿ ರೈತರ ಖಾತೆಗಳಿಗೆ ಮೊದಲ ಕಂತು ವರ್ಗಾವಣೆಯಾಗಲಿದೆ.</p>.<p>ಡಿಸೆಂಬರ್ 2018–ಮಾರ್ಚ್ 2019 ಅವಧಿಯ ಆರಂಭದ ಕಂತಿಗಾಗಿ ಆಧಾರ್ ಸಂಗ್ರಹಿಸಲಾಗುತ್ತಿದೆ. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದವರು ಪರ್ಯಾಯವಾಗಿ ವಾಹನ ಚಾಲನಾ ಪರವಾನಗಿ, ಚುನಾವಣಾ ಗುರುತಿನ ಚೀಟಿ, ನರೇಗಾ ಜಾಬ್ಕಾರ್ಡ್, ಅಥವಾ ಕೇಂದ್ರ/ಸರ್ಕಾರ ಸರ್ಕಾರಗಳು ನೀಡಿರುವ ಯಾವುದಾದರೂ ಅಧಿಕೃತ ದಾಖಲೆಗಳನ್ನು ಒದಗಿಸುವುದು ಅಗತ್ಯ.</p>.<p>ಈ ಸಂಬಂಧ ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಕೃಷಿ ಸಚಿವಾಲಯ, ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಅವರ ಆಧಾರ್ ಸಂಖ್ಯೆ ಸಂಗ್ರಹಿಸುವುದು ಅಗತ್ಯ ಎಂದು ತಿಳಿಸಿದೆ.</p>.<p><strong>ಏನೇನು ಮಾಹಿತಿ?</strong></p>.<p>ಎರಡು ಹೆಕ್ಟೇರ್ ಜಮೀನು ಹೊಂದಿರುವ ರೈತನ ಹೆಸರು, ಲಿಂಗ, ಸಮುದಾಯ (ಎಸ್ಸಿ/ಎಸ್ಟಿ), ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ಹೊಂದಿರುವ ಡೇಟಾಬೇಸ್ ತಯಾರಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ.</p>.<p><strong>ಫಲಾನುಭವಿಗಳು ಯಾರು?</strong></p>.<p>* ಅರ್ಹ ಫಲಾನುಭವಿ ಎಂದರೆ, ಗಂಡ, ಹೆಂಡತಿ, 18 ವರ್ಷದೊಳಗಿನ ಮಗ/ಮಗಳು ಇರುವ ಕುಟುಂಬಕ್ಕೆ ಸಾಗುವಳಿ ಮಾಡುವ ಎರಡು ಹೆಕ್ಟೇರ್ ಜಮೀನು ಇರಬೇಕು ಎಂದು ಕೇಂದ್ರದ ಮಾರ್ಗಸೂಚಿ ತಿಳಿಸಿದೆ.</p>.<p>* ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಯ ಜಾರಿಯಲ್ಲಿರುವ ಭೂಒಡೆತನ ವ್ಯವಸ್ಥೆಯನ್ನು ಬಳಸಿಕೊಂಡು ಫಲಾನುಭವಿಗಳನ್ನು ಸರ್ಕಾರ ಗುರುತಿಸಲಿದೆ.</p>.<p>* 1 ಫೆಬ್ರುವರಿ 2019ಕ್ಕಿಂತ ಮೊದಲು ಭೂ ದಾಖಲೆಗಳಲ್ಲಿ ಹೆಸರ ಇರುವ ಹಿಡುವಳಿದಾರರನ್ನು ಮಾತ್ರ ಪರಿಗಣಿಸಲಾಗುತ್ತದೆ. ಫೆ.1ರ ಬಳಿಕ ಬದಲಾವಣೆ ಮಾಡಲಾದ ಭೂ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ. ಐದು ವರ್ಷದ ಬಳಿಕ ಹೊಸ ಹಿಡುವಳಿದಾರರ ಪರಿಗಣನೆ.</p>.<p>* ಸಾಗುವಳಿ ಜಮೀನಿನ ಒಡೆತನವು ಉತ್ತರಾಧಿಕತ್ವದ ಮೂಲಕ ಮಾಲೀಕತ್ವವರ್ಗಾವಣೆಗೆ ಒಳಪಟ್ಟಿದ್ದರೆ, ಅಂತಹವರಿಗೆ ಯೋಜನೆಯ ನೆರವು ಸಿಗಲಿದೆ.</p>.<p>* ಒಂದು ವೇಳೆ ಕುಟುಂಬವೊಂದಕ್ಕೆ ಸೇರಿದ ಜಮೀನು ವಿವಿಧ ಗ್ರಾಮಗಳು ಅಥವಾ ಕಂದಾಯ ದಾಖಲೆಗಳಲ್ಲಿ ಹಂಚಿಹೋಗಿದ್ದರೆ, ಅವೆಲ್ಲವನ್ನೂ ಒಟ್ಟುಗೂಡಿಸಿ ಫಲಾನುಭವಿ ಆಯ್ಕೆಗೆ ಪರಿಗಣಿಸಲಾಗುತ್ತದೆ.</p>.<p>* ಈಶಾನ್ಯ ರಾಜ್ಯಗಳಲ್ಲಿ ಸಮುದಾಯ ಆಧರಿತ ಜಮೀನು ಒಡೆತನ ಇದ್ದಲ್ಲಿ, ಫಲಾನುಭವಿ ಆಯ್ಕೆಗೆ ಪ್ರತ್ಯೇಕ ಮಾನದಂಡ ಅನುಸರಿಸಲಾಗುತ್ತದೆ.</p>.<p>* ಜಿಲ್ಲಾಮಟ್ಟದ ಕುಂದುಕೊರತೆ ಪರಿಹಾರ ಸಮಿತಿಗಳನ್ನು ಆಯ್ಕೆ ಮಾಡುವಂತೆ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ. ಯೋಜನೆ ಸಂಬಂಧ ಸಮಸ್ಯೆಗಳಿಗೆ ಈ ಸಮಿತಿಗಳು ಪರಿಹಾರ ಒದಗಿಸಲಿವೆ.</p>.<p>* ಯೋಜನೆಯ ಕಣ್ಗಾವಲಿ ಸಮಿತಿಯುನ್ನು ಕೇಂದ್ರ ಸರ್ಕಾರ ಸದ್ಯದಲ್ಲೇ ರಚಿಸಲಿದ್ದು, ಅಲ್ಲಿಯವರೆಗೆ ಯೋಜನೆ ಅನುಷ್ಠಾನಕ್ಕೆ ಆಯಾ ರಾಜ್ಯ ಸರ್ಕಾರಗಳೇ ನೋಡಲ್ ಇಲಾಖೆಯ ರೀತಿ ಕೆಲಸ ಮಾಡಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಮೊದಲ ಕಂತು ₹2,000 ಪಡೆಯುವ ರೈತರಿಗೆ ಆಧಾರ್ ಐಚ್ಛಿಕವಾಗಿದ್ದು, ಎರಡನೇ ಕಂತು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯ.</p>.<p>ಮೊದಲ ಕಂತಿಗೆ ವಿನಾಯಿತಿ ಇದ್ದು, ಮುಂಬರುವ ಕಂತುಗಳ ಹಣ ಪಡೆಯಲು ರೈತರು ಆಧಾರ್ ಸಂಖ್ಯೆ ಮೂಲಕ ತಮ್ಮ ಗುರುತು ಖಚಿತಪಡಿಸಬೇಕಿದೆ.</p>.<p>2 ಹೆಕ್ಟೇರ್ ಜಮೀನು ಹೊಂದಿರುವ ಸುಮಾರು 12 ಕೋಟಿ ರೈತರಿಗೆ ವರ್ಷಕ್ಕೆ ₹6,000 ಧನಸಹಾಯ ನೀಡುವ ಹೊಸ ಯೋಜನೆಯನ್ನು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರು ಮಧ್ಯಂತರ ಬಜೆಟ್ನಲ್ಲಿ ಘೋಷಿಸಿದ್ದರು. ಇದೇ ವರ್ಷದಿಂದ ಯೋಜನೆ ಜಾರಿಯಾಗಲಿದ್ದು, ಮಾರ್ಚ್ ತಿಂಗಳಲ್ಲಿ ರೈತರ ಖಾತೆಗಳಿಗೆ ಮೊದಲ ಕಂತು ವರ್ಗಾವಣೆಯಾಗಲಿದೆ.</p>.<p>ಡಿಸೆಂಬರ್ 2018–ಮಾರ್ಚ್ 2019 ಅವಧಿಯ ಆರಂಭದ ಕಂತಿಗಾಗಿ ಆಧಾರ್ ಸಂಗ್ರಹಿಸಲಾಗುತ್ತಿದೆ. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದವರು ಪರ್ಯಾಯವಾಗಿ ವಾಹನ ಚಾಲನಾ ಪರವಾನಗಿ, ಚುನಾವಣಾ ಗುರುತಿನ ಚೀಟಿ, ನರೇಗಾ ಜಾಬ್ಕಾರ್ಡ್, ಅಥವಾ ಕೇಂದ್ರ/ಸರ್ಕಾರ ಸರ್ಕಾರಗಳು ನೀಡಿರುವ ಯಾವುದಾದರೂ ಅಧಿಕೃತ ದಾಖಲೆಗಳನ್ನು ಒದಗಿಸುವುದು ಅಗತ್ಯ.</p>.<p>ಈ ಸಂಬಂಧ ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಕೃಷಿ ಸಚಿವಾಲಯ, ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಅವರ ಆಧಾರ್ ಸಂಖ್ಯೆ ಸಂಗ್ರಹಿಸುವುದು ಅಗತ್ಯ ಎಂದು ತಿಳಿಸಿದೆ.</p>.<p><strong>ಏನೇನು ಮಾಹಿತಿ?</strong></p>.<p>ಎರಡು ಹೆಕ್ಟೇರ್ ಜಮೀನು ಹೊಂದಿರುವ ರೈತನ ಹೆಸರು, ಲಿಂಗ, ಸಮುದಾಯ (ಎಸ್ಸಿ/ಎಸ್ಟಿ), ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ಹೊಂದಿರುವ ಡೇಟಾಬೇಸ್ ತಯಾರಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ.</p>.<p><strong>ಫಲಾನುಭವಿಗಳು ಯಾರು?</strong></p>.<p>* ಅರ್ಹ ಫಲಾನುಭವಿ ಎಂದರೆ, ಗಂಡ, ಹೆಂಡತಿ, 18 ವರ್ಷದೊಳಗಿನ ಮಗ/ಮಗಳು ಇರುವ ಕುಟುಂಬಕ್ಕೆ ಸಾಗುವಳಿ ಮಾಡುವ ಎರಡು ಹೆಕ್ಟೇರ್ ಜಮೀನು ಇರಬೇಕು ಎಂದು ಕೇಂದ್ರದ ಮಾರ್ಗಸೂಚಿ ತಿಳಿಸಿದೆ.</p>.<p>* ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಯ ಜಾರಿಯಲ್ಲಿರುವ ಭೂಒಡೆತನ ವ್ಯವಸ್ಥೆಯನ್ನು ಬಳಸಿಕೊಂಡು ಫಲಾನುಭವಿಗಳನ್ನು ಸರ್ಕಾರ ಗುರುತಿಸಲಿದೆ.</p>.<p>* 1 ಫೆಬ್ರುವರಿ 2019ಕ್ಕಿಂತ ಮೊದಲು ಭೂ ದಾಖಲೆಗಳಲ್ಲಿ ಹೆಸರ ಇರುವ ಹಿಡುವಳಿದಾರರನ್ನು ಮಾತ್ರ ಪರಿಗಣಿಸಲಾಗುತ್ತದೆ. ಫೆ.1ರ ಬಳಿಕ ಬದಲಾವಣೆ ಮಾಡಲಾದ ಭೂ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ. ಐದು ವರ್ಷದ ಬಳಿಕ ಹೊಸ ಹಿಡುವಳಿದಾರರ ಪರಿಗಣನೆ.</p>.<p>* ಸಾಗುವಳಿ ಜಮೀನಿನ ಒಡೆತನವು ಉತ್ತರಾಧಿಕತ್ವದ ಮೂಲಕ ಮಾಲೀಕತ್ವವರ್ಗಾವಣೆಗೆ ಒಳಪಟ್ಟಿದ್ದರೆ, ಅಂತಹವರಿಗೆ ಯೋಜನೆಯ ನೆರವು ಸಿಗಲಿದೆ.</p>.<p>* ಒಂದು ವೇಳೆ ಕುಟುಂಬವೊಂದಕ್ಕೆ ಸೇರಿದ ಜಮೀನು ವಿವಿಧ ಗ್ರಾಮಗಳು ಅಥವಾ ಕಂದಾಯ ದಾಖಲೆಗಳಲ್ಲಿ ಹಂಚಿಹೋಗಿದ್ದರೆ, ಅವೆಲ್ಲವನ್ನೂ ಒಟ್ಟುಗೂಡಿಸಿ ಫಲಾನುಭವಿ ಆಯ್ಕೆಗೆ ಪರಿಗಣಿಸಲಾಗುತ್ತದೆ.</p>.<p>* ಈಶಾನ್ಯ ರಾಜ್ಯಗಳಲ್ಲಿ ಸಮುದಾಯ ಆಧರಿತ ಜಮೀನು ಒಡೆತನ ಇದ್ದಲ್ಲಿ, ಫಲಾನುಭವಿ ಆಯ್ಕೆಗೆ ಪ್ರತ್ಯೇಕ ಮಾನದಂಡ ಅನುಸರಿಸಲಾಗುತ್ತದೆ.</p>.<p>* ಜಿಲ್ಲಾಮಟ್ಟದ ಕುಂದುಕೊರತೆ ಪರಿಹಾರ ಸಮಿತಿಗಳನ್ನು ಆಯ್ಕೆ ಮಾಡುವಂತೆ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ. ಯೋಜನೆ ಸಂಬಂಧ ಸಮಸ್ಯೆಗಳಿಗೆ ಈ ಸಮಿತಿಗಳು ಪರಿಹಾರ ಒದಗಿಸಲಿವೆ.</p>.<p>* ಯೋಜನೆಯ ಕಣ್ಗಾವಲಿ ಸಮಿತಿಯುನ್ನು ಕೇಂದ್ರ ಸರ್ಕಾರ ಸದ್ಯದಲ್ಲೇ ರಚಿಸಲಿದ್ದು, ಅಲ್ಲಿಯವರೆಗೆ ಯೋಜನೆ ಅನುಷ್ಠಾನಕ್ಕೆ ಆಯಾ ರಾಜ್ಯ ಸರ್ಕಾರಗಳೇ ನೋಡಲ್ ಇಲಾಖೆಯ ರೀತಿ ಕೆಲಸ ಮಾಡಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>