ರಾಸಾಯನಿಕ ಅವಘಡಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು...

ನವದೆಹಲಿ: ರಾಸಾಯನಿಕ (ಕೈಗಾರಿಕೆ) ಅವಘಡಗಳು ಸಂಭವಿಸಿದಾಗ ಹಾಗೂ ನಂತರ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು...
* ಗಾಬರಿಯಾಗಬೇಡಿ, ನಿಗದಿಪಡಿಸಿರುವ ನಿರ್ಗಮನ ದಾರಿಯ ಮೂಲಕ ಶಾಂತವಾಗಿ ಮತ್ತು ತ್ವರಿತವಾಗಿ ಸ್ಥಳಾಂತರಗೊಳ್ಳಿ
* ಸ್ಥಳಾಂತರಗೊಳ್ಳುವಾಗ ಒದ್ದೆಯಾದ ಕರವಸ್ತ್ರ, ಬಟ್ಟೆ ಅಥವಾ ಸೀರೆಯಿಂದ ಮುಖವನ್ನು ಮುಚ್ಚಿಕೊಳ್ಳಿ.
* ಸ್ಥಳಾಂತರಿಸಲು ಸಾಧ್ಯವಾಗದೇ ಇರುವ ಅನಾರೋಗ್ಯ ಪೀಡಿತರು, ವೃದ್ಧರು, ದುರ್ಬಲರು, ಅಂಗವಿಕಲರನ್ನು ಮನೆಯಲ್ಲೇ ಇರಿಸಿ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ಭದ್ರವಾಗಿ ಮುಚ್ಚಬೇಕು.
* ಮುಚ್ಚಿಡದ ಆಹಾರ / ನೀರನ್ನು ಸೇವಿಸಬೇಡಿ. ಬಾಟಲಿಯಿಂದ ಮಾತ್ರ ನೀರು ಕುಡಿಯಿರಿ
* ಸುರಕ್ಷಿತ ಸ್ಥಳಗಳಿಗೆ ತಲುಪಿದ ಬಳಿಕ ಉಡುಪುಗಳನ್ನು ಬದಲಿಸಿ ಮತ್ತು ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಿ
* ಸುರಕ್ಷಿತ ಸ್ಥಳಗಳಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗ, ಪೊಲೀಸ್ ಮತ್ತು ವೈದ್ಯಕೀಯ ಸೇವೆಗಳಿಗಾಗಿ ಕ್ರಮವಾಗಿ 101, 100 ಮತ್ತು 108 ಸಂಖ್ಯೆಗೆ ಕರೆ ಮಾಡಿ.
* ಜಿಲ್ಲಾಡಳಿತ / ಅಗ್ನಿಶಾಮಕ / ಆರೋಗ್ಯ / ಪೊಲೀಸ್ ಮತ್ತು ಇತರೆ ಸಂಬಂಧಪಟ್ಟ ಅಧಿಕಾರಿಗಳು ನೀಡುತ್ತಿರುವ ಸಲಹೆಗಳನ್ನು ಪಡೆಯುತ್ತಿರಿ. ಹಾಗೂ ಸ್ಥಳೀಯ ರೇಡಿಯೋ, ಟಿವಿ ಚಾನೆಲ್ಗಳನ್ನು ಗಮನಿಸುತ್ತಿರಬೇಕು.
* ಸರ್ಕಾರಿ ಅಧಿಕಾರಿಗಳಿಗೆ ಸರಿಯಾದ ಮತ್ತು ನಿಖರವಾದ ಮಾಹಿತಿಯನ್ನು ನೀಡಿ
* ಸಾರ್ವಜನಿಕ ಸಭೆ, ಖಾಸಗಿ ಸಮಾರಂಭ ಸೇರಿದಂತೆ ಜನ ಸೇರುವ ಸ್ಥಳಗಳಲ್ಲಿನ ಜನರಿಗೆ ತ್ವರಿತವಾಗಿ ಮಾಹಿತಿ ನೀಡಿ (ಶಾಲೆ, ಶಾಪಿಂಗ್ ಸೆಂಟರ್, ಥಿಯೇಟರ್ ಇತ್ಯಾದಿ)
* ವದಂತಿಗಳಿಗೆ ಕಿವಿ ಕೊಡಬೇಡಿ ಮತ್ತು ವದಂತಿಗಳನ್ನು ಹರಡಬೇಡಿ.
ಮಾಹಿತಿ ಮೂಲ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಭಾರತ ಸರ್ಕಾರ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.