ನವದೆಹಲಿ:ರಾಸಾಯನಿಕ (ಕೈಗಾರಿಕೆ) ಅವಘಡಗಳು ಸಂಭವಿಸಿದಾಗ ಹಾಗೂ ನಂತರ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು...
* ಗಾಬರಿಯಾಗಬೇಡಿ, ನಿಗದಿಪಡಿಸಿರುವ ನಿರ್ಗಮನ ದಾರಿಯ ಮೂಲಕ ಶಾಂತವಾಗಿ ಮತ್ತು ತ್ವರಿತವಾಗಿ ಸ್ಥಳಾಂತರಗೊಳ್ಳಿ
* ಸ್ಥಳಾಂತರಗೊಳ್ಳುವಾಗ ಒದ್ದೆಯಾದ ಕರವಸ್ತ್ರ, ಬಟ್ಟೆ ಅಥವಾ ಸೀರೆಯಿಂದಮುಖವನ್ನು ಮುಚ್ಚಿಕೊಳ್ಳಿ.
* ಸ್ಥಳಾಂತರಿಸಲು ಸಾಧ್ಯವಾಗದೇ ಇರುವಅನಾರೋಗ್ಯ ಪೀಡಿತರು, ವೃದ್ಧರು, ದುರ್ಬಲರು, ಅಂಗವಿಕಲರನ್ನು ಮನೆಯಲ್ಲೇಇರಿಸಿ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ಭದ್ರವಾಗಿಮುಚ್ಚಬೇಕು.
* ಮುಚ್ಚಿಡದ ಆಹಾರ / ನೀರನ್ನು ಸೇವಿಸಬೇಡಿ. ಬಾಟಲಿಯಿಂದ ಮಾತ್ರ ನೀರುಕುಡಿಯಿರಿ
* ಸುರಕ್ಷಿತ ಸ್ಥಳಗಳಿಗೆ ತಲುಪಿದ ಬಳಿಕ ಉಡುಪುಗಳನ್ನು ಬದಲಿಸಿ ಮತ್ತು ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಿ
* ಸುರಕ್ಷಿತ ಸ್ಥಳಗಳಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗ, ಪೊಲೀಸ್ ಮತ್ತು ವೈದ್ಯಕೀಯ ಸೇವೆಗಳಿಗಾಗಿ ಕ್ರಮವಾಗಿ 101, 100 ಮತ್ತು 108 ಸಂಖ್ಯೆಗೆ ಕರೆ ಮಾಡಿ.
* ಜಿಲ್ಲಾಡಳಿತ / ಅಗ್ನಿಶಾಮಕ / ಆರೋಗ್ಯ / ಪೊಲೀಸ್ ಮತ್ತು ಇತರೆ ಸಂಬಂಧಪಟ್ಟ ಅಧಿಕಾರಿಗಳು ನೀಡುತ್ತಿರುವ ಸಲಹೆಗಳನ್ನು ಪಡೆಯುತ್ತಿರಿ. ಹಾಗೂ ಸ್ಥಳೀಯ ರೇಡಿಯೋ, ಟಿವಿ ಚಾನೆಲ್ಗಳನ್ನು ಗಮನಿಸುತ್ತಿರಬೇಕು.
* ಸರ್ಕಾರಿ ಅಧಿಕಾರಿಗಳಿಗೆ ಸರಿಯಾದ ಮತ್ತು ನಿಖರವಾದ ಮಾಹಿತಿಯನ್ನು ನೀಡಿ
* ಸಾರ್ವಜನಿಕ ಸಭೆ, ಖಾಸಗಿ ಸಮಾರಂಭ ಸೇರಿದಂತೆ ಜನ ಸೇರುವ ಸ್ಥಳಗಳಲ್ಲಿನ ಜನರಿಗೆ ತ್ವರಿತವಾಗಿಮಾಹಿತಿ ನೀಡಿ (ಶಾಲೆ, ಶಾಪಿಂಗ್ ಸೆಂಟರ್, ಥಿಯೇಟರ್ ಇತ್ಯಾದಿ)
* ವದಂತಿಗಳಿಗೆ ಕಿವಿ ಕೊಡಬೇಡಿ ಮತ್ತು ವದಂತಿಗಳನ್ನುಹರಡಬೇಡಿ.
ಮಾಹಿತಿ ಮೂಲ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಭಾರತ ಸರ್ಕಾರ