<p><strong>ನವದೆಹಲಿ:</strong> ಆಫ್ರಿಕಾ ಚೀತಾವನ್ನು ಕರೆತರಲು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದ್ದು, ಭಾರತದಲ್ಲಿ ಸೂಕ್ತ ಎನಿಸುವ ಎಚ್ಚರಿಕೆಯಿಂದ ಆಯ್ಕೆ ಮಾಡಿದ ವನ್ಯಜೀವಿ ತಾಣದಲ್ಲಿ ಬಿಡಬೇಕು ಎಂದು ಸೂಚಿಸಿದೆ.</p>.<p>ಭಾರತದಲ್ಲಿ ಚೀತಾ ಸಂತತಿಯು ಕಣ್ಮರೆಯಾಗಿದೆ ಎಂಬ ಕಾರಣವನ್ನು ನೀಡಿದ್ದರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಆಫ್ರಿಕಾದ ಚೀತಾ ತರಲು ಯೋಜನೆಗೆ ಅನುಮತಿಯನ್ನು ಕೋರಿ ಅರ್ಜಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ನ್ಯಾಯಪೀಠ ಈ ಬಗ್ಗೆ ಆದೇಶ ನೀಡಿತು.</p>.<p>ಈ ಬಗ್ಗೆ ಎನ್ಟಿಸಿಎಗೆ ಅಗತ್ಯ ಮಾರ್ಗದರ್ಶನ ನೀಡಲು ಭಾರತೀಯ ವನ್ಯಜೀವಿ ಮಂಡಳಿಯ ಮಾಜಿ ನಿರ್ದೇಶಕ ರಂಜಿತ್ ಸಿಂಗ್, ಪ್ರಧಾನ ನಿರ್ದೇಶಕ ಧನಂಜಯ ಮೋಹನ್, ಕೇಂದ್ರ ಅರಣ್ಯ ಸಚಿವಾಲಯದ ಡಿಐಜಿ ಒಳಗೊಂಡ ತ್ರಿಸದಸ್ಯ ಸಮಿತಿಯನ್ನೂ ಕೋರ್ಟ್ ರಚಿಸಿತು.</p>.<p>ಸಮಿತಿಯು ಪ್ರತಿ ನಾಲ್ಕು ತಿಂಗಳಿಗೊಮ್ಮೆ ವರದಿ ಸಲ್ಲಿಸಬೇಕು. ಕೋರ್ಟ್ ಈ ಯೋಜನೆಯ ಮೇಲೆ ನಿಗಾ ಇರಿಸಲಿದೆ ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ತ್ರಿಸದಸ್ಯರ ನ್ಯಾಯಪೀಠ ತಿಳಿಸಿತು.</p>.<div style="text-align:center"><figcaption><em><strong>ಇರಾನ್ನ ತೆಹರಾನ್ನಲ್ಲಿರುವ ಪರ್ಡಿಸನ್ ಉದ್ಯಾನದಲ್ಲಿ ವಿಹರಿಸುತ್ತಿರುವ ಚೀತಾ</strong></em></figcaption></div>.<p>‘ಆಫ್ರಿಕಾ ಚೀತಾ ಪರಿಚಯಿಸುವುದನ್ನು ಎನ್ಟಿಸಿಎ ವಿವೇಚನೆಗೇ ಬಿಡುವುದು ಸರಿಯಲ್ಲ. ಅದರ ಮೇಲ್ವಿಚಾರಣೆಯನ್ನು ಪರಿಣತರ ಸಮಿತಿಯು ಮಾಡಬೇಕು. ಸಮಿತಿಯು ದೇಶದಲ್ಲಿ ಚೀತಾ ಬಿಡಲು ಸೂಕ್ತ ಎನಿಸುವ ತಾಣವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು’ ಎಂದು ಪೀಠ ಸ್ಪಷ್ಟಪಡಿಸಿತು.</p>.<p>ಇದೇ ಸಂದರ್ಭದಲ್ಲಿ ರಂಜಿತ್ ಸಿಂಗ್ ಅವರು, ಆಫ್ರಿಕಾದ ಚೀತಾ ಕರೆತರುವ ಕ್ರಮ ದೇಶದಲ್ಲಿ ಜೀವವೈವಿಧ್ಯದಲ್ಲಿ ಭಾರಿ ಬದಲಾವಣೆ ತರಲಿದೆ. ಪ್ರವಾಸೋದ್ಯಮಕ್ಕೂ ನೆರವಾಗಲಿದೆ ಎಂದು ಪ್ರತಿಪಾದಿಸಿದ್ದರು. ಚೀತಾ ತರುವುದನ್ನು ನಿಷೇಧಿಸಿ ಈ ಹಿಂದೆ 2013ರಲ್ಲಿ ನೀಡಿದ್ದ ಆದೇಶವನ್ನು ಕೋರ್ಟ್ ಪರಿಷ್ಕರಿಸಿತು.</p>.<p>ಭಾರತದಲ್ಲಿ ಈ ಹಿಂದೆ 1947ರಲ್ಲಿ ಚೀತಾ ಕಡೆಯ ಬಾರಿಗೆ ಕಾಣಿಸಿಕೊಂಡಿತ್ತು. ದೇಶದಲ್ಲಿ ಚೀತಾ ಸಂತತಿಯು ಗತಿಸಿದೆ ಎಂದು 1952ರಲ್ಲಿ ಘೋಷಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಆಫ್ರಿಕಾ ಚೀತಾವನ್ನು ಕರೆತರಲು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದ್ದು, ಭಾರತದಲ್ಲಿ ಸೂಕ್ತ ಎನಿಸುವ ಎಚ್ಚರಿಕೆಯಿಂದ ಆಯ್ಕೆ ಮಾಡಿದ ವನ್ಯಜೀವಿ ತಾಣದಲ್ಲಿ ಬಿಡಬೇಕು ಎಂದು ಸೂಚಿಸಿದೆ.</p>.<p>ಭಾರತದಲ್ಲಿ ಚೀತಾ ಸಂತತಿಯು ಕಣ್ಮರೆಯಾಗಿದೆ ಎಂಬ ಕಾರಣವನ್ನು ನೀಡಿದ್ದರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಆಫ್ರಿಕಾದ ಚೀತಾ ತರಲು ಯೋಜನೆಗೆ ಅನುಮತಿಯನ್ನು ಕೋರಿ ಅರ್ಜಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ನ್ಯಾಯಪೀಠ ಈ ಬಗ್ಗೆ ಆದೇಶ ನೀಡಿತು.</p>.<p>ಈ ಬಗ್ಗೆ ಎನ್ಟಿಸಿಎಗೆ ಅಗತ್ಯ ಮಾರ್ಗದರ್ಶನ ನೀಡಲು ಭಾರತೀಯ ವನ್ಯಜೀವಿ ಮಂಡಳಿಯ ಮಾಜಿ ನಿರ್ದೇಶಕ ರಂಜಿತ್ ಸಿಂಗ್, ಪ್ರಧಾನ ನಿರ್ದೇಶಕ ಧನಂಜಯ ಮೋಹನ್, ಕೇಂದ್ರ ಅರಣ್ಯ ಸಚಿವಾಲಯದ ಡಿಐಜಿ ಒಳಗೊಂಡ ತ್ರಿಸದಸ್ಯ ಸಮಿತಿಯನ್ನೂ ಕೋರ್ಟ್ ರಚಿಸಿತು.</p>.<p>ಸಮಿತಿಯು ಪ್ರತಿ ನಾಲ್ಕು ತಿಂಗಳಿಗೊಮ್ಮೆ ವರದಿ ಸಲ್ಲಿಸಬೇಕು. ಕೋರ್ಟ್ ಈ ಯೋಜನೆಯ ಮೇಲೆ ನಿಗಾ ಇರಿಸಲಿದೆ ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ತ್ರಿಸದಸ್ಯರ ನ್ಯಾಯಪೀಠ ತಿಳಿಸಿತು.</p>.<div style="text-align:center"><figcaption><em><strong>ಇರಾನ್ನ ತೆಹರಾನ್ನಲ್ಲಿರುವ ಪರ್ಡಿಸನ್ ಉದ್ಯಾನದಲ್ಲಿ ವಿಹರಿಸುತ್ತಿರುವ ಚೀತಾ</strong></em></figcaption></div>.<p>‘ಆಫ್ರಿಕಾ ಚೀತಾ ಪರಿಚಯಿಸುವುದನ್ನು ಎನ್ಟಿಸಿಎ ವಿವೇಚನೆಗೇ ಬಿಡುವುದು ಸರಿಯಲ್ಲ. ಅದರ ಮೇಲ್ವಿಚಾರಣೆಯನ್ನು ಪರಿಣತರ ಸಮಿತಿಯು ಮಾಡಬೇಕು. ಸಮಿತಿಯು ದೇಶದಲ್ಲಿ ಚೀತಾ ಬಿಡಲು ಸೂಕ್ತ ಎನಿಸುವ ತಾಣವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು’ ಎಂದು ಪೀಠ ಸ್ಪಷ್ಟಪಡಿಸಿತು.</p>.<p>ಇದೇ ಸಂದರ್ಭದಲ್ಲಿ ರಂಜಿತ್ ಸಿಂಗ್ ಅವರು, ಆಫ್ರಿಕಾದ ಚೀತಾ ಕರೆತರುವ ಕ್ರಮ ದೇಶದಲ್ಲಿ ಜೀವವೈವಿಧ್ಯದಲ್ಲಿ ಭಾರಿ ಬದಲಾವಣೆ ತರಲಿದೆ. ಪ್ರವಾಸೋದ್ಯಮಕ್ಕೂ ನೆರವಾಗಲಿದೆ ಎಂದು ಪ್ರತಿಪಾದಿಸಿದ್ದರು. ಚೀತಾ ತರುವುದನ್ನು ನಿಷೇಧಿಸಿ ಈ ಹಿಂದೆ 2013ರಲ್ಲಿ ನೀಡಿದ್ದ ಆದೇಶವನ್ನು ಕೋರ್ಟ್ ಪರಿಷ್ಕರಿಸಿತು.</p>.<p>ಭಾರತದಲ್ಲಿ ಈ ಹಿಂದೆ 1947ರಲ್ಲಿ ಚೀತಾ ಕಡೆಯ ಬಾರಿಗೆ ಕಾಣಿಸಿಕೊಂಡಿತ್ತು. ದೇಶದಲ್ಲಿ ಚೀತಾ ಸಂತತಿಯು ಗತಿಸಿದೆ ಎಂದು 1952ರಲ್ಲಿ ಘೋಷಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>