ನ್ಯಾಯಮೂರ್ತಿ ಎಲ್.ನಾಗೇಶ್ವರರಾವ್, ಕೃಷ್ಣ ಮುರಾರಿ ಮತ್ತು ಎಸ್.ರವೀಂದ್ರ ಭಟ್ ಅವರಿದ್ದ ಪೀಠವು ಅರ್ಜಿದಾರರಾದ ದ್ರಾವಿಡ ಮುನ್ನೇತ್ರ ಕಜಗಂನ ವಕೀಲರು, ವೈಕೊ, ಅನ್ಬುಮಣಿ ರಾಮದಾಸ್, ಸಿಪಿಎಂ ಮತ್ತು ತಮಿಳುನಾಡು ಕಾಂಗ್ರೆಸ್ ಸಮಿತಿಗೆ ಮೊದಲು ಈ ಸಂಬಂಧ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಿತು. ಈ ಅರ್ಜಿಗಳನ್ನು ವಾಪಸು ಪಡೆಯಬೇಕು ಮತ್ತು ಮದ್ರಾಸ್ ಹೈಕೋರ್ಟ್ ಮನವಿ ಸಲ್ಲಿಸಬೇಕು ಎಂದು ಪೀಠ ಹೇಳಿತು.