<p><strong>ನಾಗಪುರ (ಮಹಾರಾಷ್ಟ್ರ)</strong>: ‘ಹುಡುಗಿಯೊಬ್ಬಳು ನನ್ನ ಹೃದಯ ಕದ್ದಿದ್ದಾಳೆ, ದಯವಿಟ್ಟು ಆ ಹೃದಯವನ್ನು ಹುಡುಕಿಕೊಡಿ’ ಎಂದು ಯುವಕನೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ!</p>.<p>ಕಳವಾದ ವಸ್ತುಗಳನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಪೊಲೀಸರಿಗೆ ದೂರುಗಳು ಬರುವುದು ಸಹಜ. ಆದರೆ, ಯುವಕನ ಈ ವಿಚಿತ್ರ ದೂರಿನಿಂದ ಅವಾಕ್ಕಾದ ಪೊಲೀಸರು ಏನು ಮಾಡಬೇಕೆಂದು ತೋಚದೆ ಮೇಲಧಿಕಾರಿಯ ಸಲಹೆ ಕೋರಿದರು.</p>.<p>ಈ ಕುರಿತು ಅನೌಪಚಾರಿಕವಾಗಿ ಚರ್ಚೆ ನಡೆಸಿದ ಮೇಲಧಿಕಾರಿ, ಈ ಬಗೆಯ ಪ್ರಕರಣ ದಾಖಲಿಸಿಕೊಳ್ಳಲು ಭಾರತೀಯ ಕಾನೂನಿನಲ್ಲಿ ಯಾವುದೇ ಕಾಯ್ದೆ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದರು. ಬಳಿಕ, ನಿನ್ನ ದೂರಿಗೆ ನಮ್ಮ ಬಳಿ ಪರಿಹಾರ ಇಲ್ಲ ಎಂದು ತಿಳಿಸಿ ಪೊಲೀಸರು ಯುವಕನನ್ನು ಸಾಗಹಾಕಿದರು.</p>.<p>ಕಳವಾಗಿದ್ದ ₹82 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ, ಪೊಲೀಸ್ ಆಯುಕ್ತ ಭೂಷಣ್ ಕುಮಾರ್ ಉಪಾಧ್ಯಾಯ ಈ ಪ್ರಕರಣವನ್ನು ಹಂಚಿಕೊಂಡರು.</p>.<p>‘ಕಳವಾದ ವಸ್ತುಗಳನ್ನು ನಾವು ಮರಳಿ ದೊರಕಿಸಿಕೊಡಬಹುದು. ಆದರೆ, ಕೆಲವೊಮ್ಮೆ ನಾವು ಪರಿಹರಿಸಲಾಗದಂತಹ ದೂರುಗಳೂ ನಮಗೆ ಬರುತ್ತವೆ’ ಎಂದು ನಗುತ್ತಾ, ಯುವಕನ ಬೇಡಿಕೆ ಉದಾಹರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಪುರ (ಮಹಾರಾಷ್ಟ್ರ)</strong>: ‘ಹುಡುಗಿಯೊಬ್ಬಳು ನನ್ನ ಹೃದಯ ಕದ್ದಿದ್ದಾಳೆ, ದಯವಿಟ್ಟು ಆ ಹೃದಯವನ್ನು ಹುಡುಕಿಕೊಡಿ’ ಎಂದು ಯುವಕನೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ!</p>.<p>ಕಳವಾದ ವಸ್ತುಗಳನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಪೊಲೀಸರಿಗೆ ದೂರುಗಳು ಬರುವುದು ಸಹಜ. ಆದರೆ, ಯುವಕನ ಈ ವಿಚಿತ್ರ ದೂರಿನಿಂದ ಅವಾಕ್ಕಾದ ಪೊಲೀಸರು ಏನು ಮಾಡಬೇಕೆಂದು ತೋಚದೆ ಮೇಲಧಿಕಾರಿಯ ಸಲಹೆ ಕೋರಿದರು.</p>.<p>ಈ ಕುರಿತು ಅನೌಪಚಾರಿಕವಾಗಿ ಚರ್ಚೆ ನಡೆಸಿದ ಮೇಲಧಿಕಾರಿ, ಈ ಬಗೆಯ ಪ್ರಕರಣ ದಾಖಲಿಸಿಕೊಳ್ಳಲು ಭಾರತೀಯ ಕಾನೂನಿನಲ್ಲಿ ಯಾವುದೇ ಕಾಯ್ದೆ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದರು. ಬಳಿಕ, ನಿನ್ನ ದೂರಿಗೆ ನಮ್ಮ ಬಳಿ ಪರಿಹಾರ ಇಲ್ಲ ಎಂದು ತಿಳಿಸಿ ಪೊಲೀಸರು ಯುವಕನನ್ನು ಸಾಗಹಾಕಿದರು.</p>.<p>ಕಳವಾಗಿದ್ದ ₹82 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ, ಪೊಲೀಸ್ ಆಯುಕ್ತ ಭೂಷಣ್ ಕುಮಾರ್ ಉಪಾಧ್ಯಾಯ ಈ ಪ್ರಕರಣವನ್ನು ಹಂಚಿಕೊಂಡರು.</p>.<p>‘ಕಳವಾದ ವಸ್ತುಗಳನ್ನು ನಾವು ಮರಳಿ ದೊರಕಿಸಿಕೊಡಬಹುದು. ಆದರೆ, ಕೆಲವೊಮ್ಮೆ ನಾವು ಪರಿಹರಿಸಲಾಗದಂತಹ ದೂರುಗಳೂ ನಮಗೆ ಬರುತ್ತವೆ’ ಎಂದು ನಗುತ್ತಾ, ಯುವಕನ ಬೇಡಿಕೆ ಉದಾಹರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>