ದೇಶವು ಎರಡು ತಿಂಗಳ ಸಂಪೂರ್ಣ ಲಾಕ್ಡೌನ್ ಪೂರ್ಣಗೊಳಿಸುವುದರೊಂದಿಗೆ, ಎಲ್ಲ ಕ್ಷೇತ್ರಗಳಾದ್ಯಂತ ವ್ಯವಹಾರಗಳು ಸಂಕಷ್ಟಕ್ಕೆ ಸಿಲುಕಿವೆ ಮತ್ತು ರಾತ್ರೋರಾತ್ರಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವಂತಾಯಿತು. ಪ್ರಧಾನಿ ಮೋದಿ ಅವರು ಲಾಕ್ಡೌನ್ ಘೋಷಿಸುವಾಗ, ಈ ಕಷ್ಟದ ಸಮಯದಲ್ಲಿ ನೌಕರರಿಗೆ ಉದ್ಯೋಗ ಭದ್ರತೆಯನ್ನು ಒದಗಿಸಿ ಎಂದು ಕಂಪನಿಗಳನ್ನು ಒತ್ತಾಯಿಸಿದ್ದರು.