ಮೃತರನ್ನು ರಾಜುನಾಥ್, ಬಿದೇಶ್ನಾಥ್ ಹಾಗೂ ನೌಶಾದ್ ಖುರೇಷಿ ಎಂದು ಗುರುತಿಸಲಾಗಿದೆ. ಪೈಗಂಬರಪುರ್ ಗ್ರಾಮಕ್ಕೆ ಸೇರಿದ ಇವರೆಲ್ಲರೂ ಪಿಠೌರಿ ನಂದಾಲಾಲ್ ಗ್ರಾಮದಲ್ಲಿ ಟ್ರಕ್ನಲ್ಲಿ ತೆರಳುತ್ತಿದ್ದರು. ಬೆಳಗಿನ ಜಾವ ಟ್ರಕ್ ನಿಲ್ಲಿಸಿ ಕೆಳಗಿಳಿದಿದ್ದ ಇವರು, ಸಮೀಪದಲ್ಲಿ ಗೂಟಕ್ಕೆ ಕಟ್ಟಿ ಹಾಕಿದ್ದ ಎಮ್ಮೆ ಕದಿಯಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಮತ್ತೊಂದು ಜನರ ಗುಂಪು ಇವರ ಮೇಲೆ ದಾಳಿ ನಡೆಸಿದೆ.