ಕೋಲ್ಕತ್ತಾದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿರುವ ಅವರು, ‘ದೇಶಕ್ಕೆ ಸ್ವಾತಂತ್ರ ಬಂದು 73 ವರ್ಷಗಳೇ ಆಗಿವೆ. ಆದರೆ, ಈಗ ದಿಢೀರನೇ ನಾವೆಲ್ಲರೂ ನಮ್ಮ ಪೌರತ್ವ ಸಾಬೀತು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಈ ಹಿಂದೆ ಬಿಜೆಪಿಯ ತಲೆ ಮತ್ತು ಬಾಲ ಎಲ್ಲಿತ್ತು? ಬಿಜೆಪಿ ರಾಷ್ಟ್ರವನ್ನು ವಿಭಜಿಸುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವ ವರೆಗೆ ನಾವು ಪ್ರತಿಭಟನೆ ನಿಲ್ಲಿಸುವುದು ಬೇಡ,’ ಎಂದು ಮಮತಾ ಹೋರಾಟಗಾರರಿಗೆ ತಿಳಿಸಿದರು.