ಶುಕ್ರವಾರ ಪುಣೆಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ದೆಹಲಿಯಿಂದ ಕಾಂಗ್ರೆಸ್ನ ಹಠಾತ್ ಕಣ್ಮರೆಯೇ ಬಿಜೆಪಿ ಸೋಲಿಗೆ ಕಾರಣ. ಕಾಂಗ್ರೆಸ್ ತಾನಾಗಿಯೇ ಕಣ್ಮರೆ ಆಯಿತಾ, ಜನರು ಕಣ್ಮರೆ ಆಗುವಂತೆ ಮಾಡಿದರಾ ಅಥವಾ ಅವರ ಮತಗಳು ಎಎಪಿಗೆ ವರ್ಗಾವಣೆಗೊಂಡವಾ ಎಂಬುದು ಗೊತ್ತಿಲ್ಲ’ ಎಂದು ಜಾವಡೇಕರ್ ತಿಳಿಸಿದ್ದಾರೆ.