<p><strong>ವಿಶಾಖಪಟ್ಟಣಂ:</strong> ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ವಿಧಾನಸಭೆ ವಿರೋಧಪಕ್ಷದ ನಾಯಕ ಜಗನ್ಮೋಹನ್ ರೆಡ್ಡಿ ಅವರಿಗೆ ವಿಶಾಖಪಟ್ಟಣ ವಿಮಾನನಿಲ್ದಾಣದಲ್ಲಿ ಗುರುವಾರ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ.</p>.<p>ಇದೇ ವಿಮಾನ ನಿಲ್ದಾಣದಲ್ಲಿನ ರೆಸ್ಟೋರೆಂಟ್ನಲ್ಲಿ ಬಾಣಸಿಗನಾಗಿ ಕೆಲಸ ಮಾಡುವ ಜೆ. ಶ್ರೀನಿವಾಸ ರಾವ್ (30) ಈ ಕೃತ್ಯ ಎಸಗಿದ್ದಾನೆ. ಈ ರೆಸ್ಟೋರೆಂಟ್ ಆಡಳಿತಾರೂಢ ತೆಲುಗು ದೇಶಂ ಪಾರ್ಟಿ (ಟಿಡಿಪಿ) ನಾಯಕ ಹರ್ಷವರ್ಧನ್ ಅವರಿಗೆ ಸೇರಿದ್ದಾಗಿದೆ.</p>.<p>ಹೈದರಾಬಾದ್ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಜಗನ್, ಗಣ್ಯರ ಲಾಂಜ್ನಿಂದ ಹೊರ ಬರುತ್ತಿದ್ದ ವೇಳೆ ಸೆಲ್ಫಿ ತೆಗೆದುಕೊಳ್ಳುವ ನೆಪ ಮಾಡಿಕೊಂಡು ಅವರ ಬಳಿ ಶ್ರೀನಿವಾಸ ಹೋಗಿದ್ದಾನೆ. ಅವರು ಫೋಟೊಗೆಪೋಸ್ ನೀಡುವ ಸಂದರ್ಭದಲ್ಲಿ ಅವರ ಎಡ ಭುಜಕ್ಕೆ ಚಾಕುವಿನಿಂದ ಇರಿದಿದ್ದಾನೆ.</p>.<p>ವಿಮಾನನಿಲ್ದಾಣದಲ್ಲಿ ಸಿಐಎಸ್ಎಫ್ ಯೋಧರು ಶ್ರೀನಿವಾಸ್ನನ್ನು ಥಳಿಸಿ, ರಾಜ್ಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.</p>.<p>ಈ ಬಗ್ಗೆ ಟ್ವೀಟ್ ಮಾಡಿರುವ ಜಗನ್, ‘ನಾನು ಸುರಕ್ಷಿತವಾಗಿದ್ದೇನೆ. ಇಂತಹ ಹೇಡಿ ಕೃತ್ಯಗಳು ನನ್ನನ್ನು ಅಧೀರನನ್ನಾಗಿಸುವುದಿಲ್ಲ. ಜನರಿಗಾಗಿ ಕೆಲಸ ಮಾಡುವ ನನ್ನ ಬದ್ಧತೆ ಮತ್ತಷ್ಟು ಹೆಚ್ಚಿದೆ’ ಎಂದಿದ್ದಾರೆ.</p>.<p>ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ಜಗನ್ ಅವರನ್ನು ದಾಖಲಿಸಲಾಗಿದೆ. ಗಾಯ ಗಂಭೀರವಾಗಿದೆ ಎಂದು ವೈಎಸ್ಆರ್ ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.</p>.<p>‘ಅರ್ಧಕ್ಕೆ ಕಾಲೇಜು ವ್ಯಾಸಂಗ ತೊರೆದಿರುವ ಶ್ರೀನಿವಾಸ ರಾವ್, ಪೂರ್ವ ಗೋದಾವರಿ ಜಿಲ್ಲೆಯವನು. ಏರ್ಪೋರ್ಟ್ನ ಫ್ಯೂಷನ್ ರೆಸ್ಟೋರೆಂಟ್ನಲ್ಲಿ ಒಂದು ವರ್ಷದಿಂದ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಪ್ರಚಾರ ಪಡೆಯುವ ಉದ್ದೇಶದಿಂದ ಅವನು ಈ ಕೃತ್ಯ ಎಸಗಿರಬಹುದು’ ಎಂದು ರಾಜ್ಯ ಡಿಜಿಪಿ ಆರ್.ಪಿ. ಠಾಕೂರ್ ಹೇಳಿದ್ದಾರೆ.</p>.<p>‘ಶ್ರೀನಿವಾಸ್ನಿಂದ 9–10 ಪುಟಗಳ ಪತ್ರವನ್ನು ಸಿಐಎಸ್ಎಫ್ ವಶಪಡಿಸಿಕೊಂಡಿದ್ದು, ನಮಗೆ ಅದನ್ನು ನೀಡಲಾಗಿದೆ. ಮೊದಲು ಈ ವ್ಯಕ್ತಿ ಜಗನ್ ಅವರ ಅಭಿಮಾನಿ ಎಂದು ಭಾವಿಸಲಾಗಿತ್ತು. ಆದರೆ, ದಾಳಿಯ ಹಿಂದಿನ ಕಾರಣ ತಿಳಿದುಬಂದಿಲ್ಲ. ವಿಚಾರಣೆ ನಡೆಯುತ್ತಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.</p>.<p>‘ಜಗನ್ರನ್ನು ಕೊಲೆ ಮಾಡಲು ಯತ್ನಿಸಲಾಗಿದೆ. ಈ ಕೃತ್ಯದ ಹಿಂದೆ ಟಿಡಿಪಿ ಕೈವಾಡವಿದೆ’ ಎಂದು ವೈಎಸ್ಆರ್ ಕಾಂಗ್ರೆಸ್ ಆರೋಪಿಸಿದೆ. ಇತರ ವಿರೋಧಪಕ್ಷಗಳಾದ ಕಾಂಗ್ರೆಸ್, ಜನಸೇನಾ ಮತ್ತು ಬಿಜೆಪಿ ಕೂಡ ಘಟನೆಯನ್ನು ಖಂಡಿಸಿವೆ.</p>.<p>‘ಶ್ರೀನಿವಾಸ್ ಯಾರು, ಯಾವ ಪಕ್ಷದವನು ಎಂಬ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಗೃಹಸಚಿವ ಎನ್. ರಾಜಪ್ಪ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶಾಖಪಟ್ಟಣಂ:</strong> ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ವಿಧಾನಸಭೆ ವಿರೋಧಪಕ್ಷದ ನಾಯಕ ಜಗನ್ಮೋಹನ್ ರೆಡ್ಡಿ ಅವರಿಗೆ ವಿಶಾಖಪಟ್ಟಣ ವಿಮಾನನಿಲ್ದಾಣದಲ್ಲಿ ಗುರುವಾರ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ.</p>.<p>ಇದೇ ವಿಮಾನ ನಿಲ್ದಾಣದಲ್ಲಿನ ರೆಸ್ಟೋರೆಂಟ್ನಲ್ಲಿ ಬಾಣಸಿಗನಾಗಿ ಕೆಲಸ ಮಾಡುವ ಜೆ. ಶ್ರೀನಿವಾಸ ರಾವ್ (30) ಈ ಕೃತ್ಯ ಎಸಗಿದ್ದಾನೆ. ಈ ರೆಸ್ಟೋರೆಂಟ್ ಆಡಳಿತಾರೂಢ ತೆಲುಗು ದೇಶಂ ಪಾರ್ಟಿ (ಟಿಡಿಪಿ) ನಾಯಕ ಹರ್ಷವರ್ಧನ್ ಅವರಿಗೆ ಸೇರಿದ್ದಾಗಿದೆ.</p>.<p>ಹೈದರಾಬಾದ್ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಜಗನ್, ಗಣ್ಯರ ಲಾಂಜ್ನಿಂದ ಹೊರ ಬರುತ್ತಿದ್ದ ವೇಳೆ ಸೆಲ್ಫಿ ತೆಗೆದುಕೊಳ್ಳುವ ನೆಪ ಮಾಡಿಕೊಂಡು ಅವರ ಬಳಿ ಶ್ರೀನಿವಾಸ ಹೋಗಿದ್ದಾನೆ. ಅವರು ಫೋಟೊಗೆಪೋಸ್ ನೀಡುವ ಸಂದರ್ಭದಲ್ಲಿ ಅವರ ಎಡ ಭುಜಕ್ಕೆ ಚಾಕುವಿನಿಂದ ಇರಿದಿದ್ದಾನೆ.</p>.<p>ವಿಮಾನನಿಲ್ದಾಣದಲ್ಲಿ ಸಿಐಎಸ್ಎಫ್ ಯೋಧರು ಶ್ರೀನಿವಾಸ್ನನ್ನು ಥಳಿಸಿ, ರಾಜ್ಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.</p>.<p>ಈ ಬಗ್ಗೆ ಟ್ವೀಟ್ ಮಾಡಿರುವ ಜಗನ್, ‘ನಾನು ಸುರಕ್ಷಿತವಾಗಿದ್ದೇನೆ. ಇಂತಹ ಹೇಡಿ ಕೃತ್ಯಗಳು ನನ್ನನ್ನು ಅಧೀರನನ್ನಾಗಿಸುವುದಿಲ್ಲ. ಜನರಿಗಾಗಿ ಕೆಲಸ ಮಾಡುವ ನನ್ನ ಬದ್ಧತೆ ಮತ್ತಷ್ಟು ಹೆಚ್ಚಿದೆ’ ಎಂದಿದ್ದಾರೆ.</p>.<p>ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ಜಗನ್ ಅವರನ್ನು ದಾಖಲಿಸಲಾಗಿದೆ. ಗಾಯ ಗಂಭೀರವಾಗಿದೆ ಎಂದು ವೈಎಸ್ಆರ್ ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.</p>.<p>‘ಅರ್ಧಕ್ಕೆ ಕಾಲೇಜು ವ್ಯಾಸಂಗ ತೊರೆದಿರುವ ಶ್ರೀನಿವಾಸ ರಾವ್, ಪೂರ್ವ ಗೋದಾವರಿ ಜಿಲ್ಲೆಯವನು. ಏರ್ಪೋರ್ಟ್ನ ಫ್ಯೂಷನ್ ರೆಸ್ಟೋರೆಂಟ್ನಲ್ಲಿ ಒಂದು ವರ್ಷದಿಂದ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಪ್ರಚಾರ ಪಡೆಯುವ ಉದ್ದೇಶದಿಂದ ಅವನು ಈ ಕೃತ್ಯ ಎಸಗಿರಬಹುದು’ ಎಂದು ರಾಜ್ಯ ಡಿಜಿಪಿ ಆರ್.ಪಿ. ಠಾಕೂರ್ ಹೇಳಿದ್ದಾರೆ.</p>.<p>‘ಶ್ರೀನಿವಾಸ್ನಿಂದ 9–10 ಪುಟಗಳ ಪತ್ರವನ್ನು ಸಿಐಎಸ್ಎಫ್ ವಶಪಡಿಸಿಕೊಂಡಿದ್ದು, ನಮಗೆ ಅದನ್ನು ನೀಡಲಾಗಿದೆ. ಮೊದಲು ಈ ವ್ಯಕ್ತಿ ಜಗನ್ ಅವರ ಅಭಿಮಾನಿ ಎಂದು ಭಾವಿಸಲಾಗಿತ್ತು. ಆದರೆ, ದಾಳಿಯ ಹಿಂದಿನ ಕಾರಣ ತಿಳಿದುಬಂದಿಲ್ಲ. ವಿಚಾರಣೆ ನಡೆಯುತ್ತಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.</p>.<p>‘ಜಗನ್ರನ್ನು ಕೊಲೆ ಮಾಡಲು ಯತ್ನಿಸಲಾಗಿದೆ. ಈ ಕೃತ್ಯದ ಹಿಂದೆ ಟಿಡಿಪಿ ಕೈವಾಡವಿದೆ’ ಎಂದು ವೈಎಸ್ಆರ್ ಕಾಂಗ್ರೆಸ್ ಆರೋಪಿಸಿದೆ. ಇತರ ವಿರೋಧಪಕ್ಷಗಳಾದ ಕಾಂಗ್ರೆಸ್, ಜನಸೇನಾ ಮತ್ತು ಬಿಜೆಪಿ ಕೂಡ ಘಟನೆಯನ್ನು ಖಂಡಿಸಿವೆ.</p>.<p>‘ಶ್ರೀನಿವಾಸ್ ಯಾರು, ಯಾವ ಪಕ್ಷದವನು ಎಂಬ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಗೃಹಸಚಿವ ಎನ್. ರಾಜಪ್ಪ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>