ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಒಎಸ್‌ಡಿ ಬಂಧನ: ಭ್ರಷ್ಟಾಚಾರ ಸಹಿಸುವುದಿಲ್ಲ– ಮನೀಶ್ ಸಿಸೋಡಿಯಾ

Last Updated 7 ಫೆಬ್ರುವರಿ 2020, 7:41 IST
ಅಕ್ಷರ ಗಾತ್ರ

ನವ ದೆಹಲಿ: ಭ್ರಷ್ಟಾಚಾರದಆರೋಪದಲ್ಲಿ ಬಂಧಿಸಲ್ಪಟ್ಟದೆಹಲಿ ಸರ್ಕಾರದ ವಿಶೇಷ ಅಧಿಕಾರಿಯವಿರುದ್ಧಕಠಿಣ ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿಮನೀಶ್ ಸಿಸೋಡಿಯಾಆಗ್ರಹಿಸಿದ್ದಾರೆ.

ದೆಹಲಿ, ಅಂಡಮಾನ್ ಮತ್ತುನಿಕೋಬಾರ್ನಾಗರಿಕ ಸೇವೆ (DANIS) ಹಿರಿಯ ಅಧಿಕಾರಿಯಾದಗೋಪಾಲ್ ಕೃಷ್ಣಮಾಧವ್ ಅವರನ್ನು ದೆಹಲಿ ವಿಧಾನಸಭಾಚುನಾವಣೆಗಿಂತ ಎರಡು ದಿನ ಮುಂಚಿತವಾಗಿ ಬಂಧಿಸಲಾಗಿತ್ತು.

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐನ ಅಧಿಕಾರಿಗಳು ಹೆಣೆದ ಬಲೆಗೆಮಾಧವ್ಸಿಕ್ಕಿಬಿದ್ದಿದ್ದುಜಿಎಸ್‌ಟಿಗೆಸಂಬಂಧಿಸಿದಂತೆ ₹ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿಸಲಾದ ಅಧಿಕಾರಿಮಾಧವ್ನನ್ನ(ಉಪಮುಖ್ಯಮಂತ್ರಿ) ಕಚೇರಿಯಲ್ಲಿ ಒಎಸ್‌ಡಿಯಾಗಿಕಾರ್ಯನಿರ್ವಹಿಸುತ್ತಿದ್ದರು, ಭ್ರಷ್ಟ ಅಧಿಕಾರಿಯನ್ನು ತಕ್ಷಣ ಶಿಕ್ಷಿಸಬೇಕು, ನನ್ನಅಧಿಕಾರಾವಧಿಯಲ್ಲಿಇಂತಹಭ್ರಷ್ಟ ಅಧಿಕಾರಿಗಳನ್ನು ಹಿಡಿಯುವಲ್ಲಿನೆರವಾಗಿದ್ದೇನೆಎಂದು ಅವರುಟ್ವೀಟ್‌ ಮಾಡಿದ್ದಾರೆ.

ಬಂಧಿತ ಅಧಿಕಾರಿಯು ಕಳೆದ ಐದು ವರ್ಷಗಳಿಂದ ಉಪಮುಖ್ಯಮಂತ್ರಿಗಳ ಕಚೇರಿಯಲ್ಲಿಕಾರ್ಯ ನಿರ್ವಹಿಸುತ್ತಿದ್ದರುಎಂದು ಹೇಳಲಾಗಿದೆ.

ನನಗೆ ಚುನಾವಣೆಸಂದರ್ಭದಲ್ಲಿಬಂಧಿಸಿರುವುದರಬಗ್ಗೆ ಯಾವುದೇತಕರಾರು ಇಲ್ಲ, ಭ್ರಷ್ಟ ಅಧಿಕಾರಿಗಳನ್ನು ತಕ್ಷಣ ಬಂಧಿಸಬೇಕು, ಭ್ರಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಮಾಧವ್ಅವರನ್ನುವಿಚಾರಣೆಗಾಗಿ ಸಿಬಿಐನ ಮುಖ್ಯ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.ಆಮ್ಆದ್ಮಿಪಕ್ಷ (ಎಎಪಿ)2015ರಲ್ಲಿ ಅಧಿಕಾರಕ್ಕೆಬಂದಾಗಮಾಧವ್ಅವರನ್ನು ಅಧಿಕಾರಿಯಾಗಿ ನೇಮಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT