ಮಂಗಳೂರು: ‘ಕೊರೊನಾ ವೈರಸ್’ ಪರಿಣಾಮ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರ ನೆರವಿಗಾಗಿ ರಾಜ್ಯ ಸರ್ಕಾರವು ದೆಹಲಿಗೆ ವಿಶೇಷ ಪ್ರತಿನಿಧಿ(ಅಧಿಕಾರಿ)ಯನ್ನು ಕಳುಹಿಸಿ ಕೊಡಬೇಕು. ಅವರು ವಿದೇಶಾಂಗ ಇಲಾಖೆ, ರಾಯಭಾರ ಕಚೇರಿಗಳ ಜೊತೆ ನಿಕಟ ಸಂಪರ್ಕದ ಮೂಲಕ ಅವಶ್ಯಕತೆ ಇದ್ದವರಿಗೆ ನೆರವು ನೀಡಬೇಕು’ ಎಂದು ಶಾಸಕ ಯು.ಟಿ.ಖಾದರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.