‘ಬಾಳೆಗೆ ಮಾರುಕಟ್ಟೆಯಿಲ್ಲದೇ, ರೈತರಿಗೆ ಗೊನೆ ಕಡಿದ ಕೂಲಿ ವೆಚ್ಚವೇ ಭಾರವಾಗುತ್ತಿತ್ತು. ತೋಟದಲ್ಲೇ ಗೊನೆಗಳು ಹಣ್ಣಾಗಿ ಕೊಳೆಯುತ್ತಿದ್ದವು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗಲು ರಾಜ್ಯದಲ್ಲೇ ಮೊದಲ ಬಾರಿಗೆ ಎಪಿಎಂಸಿ ವ್ಯವಸ್ಥೆಯಡಿ ಈ ಪ್ರಯತ್ನ ಮಾಡಲಾಗಿದೆ‘ ಎಂದುಕದಂಬ ಮಾರ್ಕೆಟಿಂಗ್ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.