ರಾಜ್ಯ ಸರ್ಕಾರವು ಪರಿಹಾರದ ರೂಪದಲ್ಲಿ ₹ 50 ಕೋಟಿ ಹಾಗೂ ಕಾರ್ಯಕ್ಷಮತೆ ಖಾತರಿಯಾಗಿ ₹ 100 ಕೋಟಿ ನೀಡಬೇಕು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ₹ 25 ಕೋಟಿ ದಂಡ ನೀಡಬೇಕು ಎಂದು ಸೂಚಿಸಿರುವ ಪೀಠವು, ನಿತ್ಯವೂ ಅಂದಾಜು 256.7 ದಶಲಕ್ಷ ಲೀಟರ್ ಕೊಳಚೆ ನೀರು ಬೆಳ್ಳಂದೂರು ಕೆರೆಯನ್ನು ಸೇರುತ್ತಿದ್ದು, ಇದರ ತಡೆಗೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.