<p><strong>ನವದೆಹಲಿ</strong>: ಬೆಂಗಳೂರಿನ ಬೆಳ್ಳಂದೂರು, ಅಗರ ಹಾಗೂ ವರ್ತೂರು ಕೆರೆಗಳ ಪುನಶ್ಚೇತನ ಹಿನ್ನೆಲೆಯಲ್ಲಿ 2020ರ ಸೆಪ್ಟೆಂಬರ್ 30ರೊಳಗೆ ಕೊಳಚೆ ನೀರಿನ ಶುದ್ಧೀಕರಣ ಘಟಕ (ಎಸ್ಟಿಪಿ) ಸ್ಥಾಪಿಸದಿದ್ದರೆ ಅಧಿಕಾರಿಗಳಿಂದಲೇ ಪರಿಹಾರ ಮೊತ್ತ ಪಡೆಯಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಹೇಳಿದೆ.</p>.<p>ಕೆರೆಗಳ ಅವ್ಯವಸ್ಥೆ ಆಧರಿಸಿ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 11ರಂದು ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಪೀಠ ಈ ಆದೇಶ ನೀಡಿದೆ.</p>.<p>ಕೊನೆಯದಾಗಿ ನೀಡಲಾದ ಈ ಗಡುವಿನೊಳಗೆ ಎಸ್ಟಿಪಿ ಸ್ಥಾಪಿಸದಿದ್ದರೆ ಅಧಿಕಾರಿಗಳು ಪ್ರತಿ ಎಸ್ಟಿಪಿಗೆ ಮಾಸಿಕ ₹ 10 ಲಕ್ಷ ಪರಿಹಾರ ನೀಡಬೇಕಾಗುತ್ತದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.</p>.<p>ಅಲ್ಲದೆ, 2020ರ ಫೆಬ್ರುವರಿ 1ರ ನಂತರ ಕೆರೆಗಳಿಗೆ ಒಳಚರಂಡಿ ನೀರನ್ನು ಹರಿಬಿಡುವ ಖಾಸಗಿ ಬಿಲ್ಡರ್ಗಳಿಂದ ಮಾಸಿಕ ₹ 5 ಲಕ್ಷ ಪರಿಹಾರ ಸ್ವೀಕರಿಸಬೇಕು ಎಂದಿರುವ ಪೀಠ, ಒಳಚರಂಡಿಯ ನೀರು ಕೆರೆಗಳಿಗೆ ಸೇರುತ್ತಿಲ್ಲ ಎಂಬುದನ್ನು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾಲಮಿತಿಯೊಳಗೆ ದೃಢಪಡಿಸಬೇಕು ಎಂದು ಹೇಳಿದೆ.</p>.<p>ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ನೇತೃತ್ವದ ಮೇಲುಸ್ತುವಾರಿ ಸಮಿತಿಯ ಅವಧಿಯನ್ನು 2020ರ ಮಾರ್ಚ್ 24ರವರೆಗೆ ವಿಸ್ತರಿಸಿರುವ ಹಸಿರು ಪೀಠ, ಕೆರೆಗಳ ಸಂರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕಾಮಗಾರಿಗಳ ವರದಿಯನ್ನು ಸಮಿತಿಯು ಮಾರ್ಚ್ 6ರೊಳಗೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.</p>.<p>ರಾಜ್ಯ ಸರ್ಕಾರವು ಪರಿಹಾರದ ರೂಪದಲ್ಲಿ ₹ 50 ಕೋಟಿ ಹಾಗೂ ಕಾರ್ಯಕ್ಷಮತೆ ಖಾತರಿಯಾಗಿ ₹ 100 ಕೋಟಿ ನೀಡಬೇಕು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ₹ 25 ಕೋಟಿ ದಂಡ ನೀಡಬೇಕು ಎಂದು ಸೂಚಿಸಿರುವ ಪೀಠವು, ನಿತ್ಯವೂ ಅಂದಾಜು 256.7 ದಶಲಕ್ಷ ಲೀಟರ್ ಕೊಳಚೆ ನೀರು ಬೆಳ್ಳಂದೂರು ಕೆರೆಯನ್ನು ಸೇರುತ್ತಿದ್ದು, ಇದರ ತಡೆಗೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.</p>.<p><strong>ಎನ್ಜಿಟಿ ಆದೇಶದ ಮುಖ್ಯಾಂಶ</strong><br />* ಬೆಂಗಳೂರಿನ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು<br />* ಕೆರೆಯ ಮಾಲಿನ್ಯ ತಡೆಯದ ಅಧಿಕಾರಿಗಳ ವಿರುದ್ಧ ಕ್ರಮ<br />* ಎಸ್ಟಿಪಿ ಸ್ಥಾಪಿಸದ ಅಪಾರ್ಟ್ಮೆಂಟ್ಗಳಿಂದ ಪರಿಹಾರ<br />* ಕೆರೆಗಳಿಗೆ ಕೊಳಚೆ ನೀರು ಸೇರದಂತೆ ಅಗತ್ಯ ಕ್ರಮ<br />* ನೀರಿನ ಗುಣಮಟ್ಟ ಅಳೆಯುವ ವ್ಯವಸ್ಥೆ ಜಾರಿಗೊಳಿಸಿ<br />* ಕೆರೆಗಳ ಹೂಳು, ಕೆಸರು ಮತ್ತು ಕಳೆ ತೆರವುಗೊಳಿಸಬೇಕು<br />* ಕೆರೆಯ ಬಳಿ ಜೀವ ವೈವಿಧ್ಯ ಉದ್ಯಾನ ನಿರ್ಮಿಸಬೇಕು<br />* ನಿರ್ಮಾಣ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬೆಂಗಳೂರಿನ ಬೆಳ್ಳಂದೂರು, ಅಗರ ಹಾಗೂ ವರ್ತೂರು ಕೆರೆಗಳ ಪುನಶ್ಚೇತನ ಹಿನ್ನೆಲೆಯಲ್ಲಿ 2020ರ ಸೆಪ್ಟೆಂಬರ್ 30ರೊಳಗೆ ಕೊಳಚೆ ನೀರಿನ ಶುದ್ಧೀಕರಣ ಘಟಕ (ಎಸ್ಟಿಪಿ) ಸ್ಥಾಪಿಸದಿದ್ದರೆ ಅಧಿಕಾರಿಗಳಿಂದಲೇ ಪರಿಹಾರ ಮೊತ್ತ ಪಡೆಯಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಹೇಳಿದೆ.</p>.<p>ಕೆರೆಗಳ ಅವ್ಯವಸ್ಥೆ ಆಧರಿಸಿ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 11ರಂದು ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಪೀಠ ಈ ಆದೇಶ ನೀಡಿದೆ.</p>.<p>ಕೊನೆಯದಾಗಿ ನೀಡಲಾದ ಈ ಗಡುವಿನೊಳಗೆ ಎಸ್ಟಿಪಿ ಸ್ಥಾಪಿಸದಿದ್ದರೆ ಅಧಿಕಾರಿಗಳು ಪ್ರತಿ ಎಸ್ಟಿಪಿಗೆ ಮಾಸಿಕ ₹ 10 ಲಕ್ಷ ಪರಿಹಾರ ನೀಡಬೇಕಾಗುತ್ತದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.</p>.<p>ಅಲ್ಲದೆ, 2020ರ ಫೆಬ್ರುವರಿ 1ರ ನಂತರ ಕೆರೆಗಳಿಗೆ ಒಳಚರಂಡಿ ನೀರನ್ನು ಹರಿಬಿಡುವ ಖಾಸಗಿ ಬಿಲ್ಡರ್ಗಳಿಂದ ಮಾಸಿಕ ₹ 5 ಲಕ್ಷ ಪರಿಹಾರ ಸ್ವೀಕರಿಸಬೇಕು ಎಂದಿರುವ ಪೀಠ, ಒಳಚರಂಡಿಯ ನೀರು ಕೆರೆಗಳಿಗೆ ಸೇರುತ್ತಿಲ್ಲ ಎಂಬುದನ್ನು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾಲಮಿತಿಯೊಳಗೆ ದೃಢಪಡಿಸಬೇಕು ಎಂದು ಹೇಳಿದೆ.</p>.<p>ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ನೇತೃತ್ವದ ಮೇಲುಸ್ತುವಾರಿ ಸಮಿತಿಯ ಅವಧಿಯನ್ನು 2020ರ ಮಾರ್ಚ್ 24ರವರೆಗೆ ವಿಸ್ತರಿಸಿರುವ ಹಸಿರು ಪೀಠ, ಕೆರೆಗಳ ಸಂರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕಾಮಗಾರಿಗಳ ವರದಿಯನ್ನು ಸಮಿತಿಯು ಮಾರ್ಚ್ 6ರೊಳಗೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.</p>.<p>ರಾಜ್ಯ ಸರ್ಕಾರವು ಪರಿಹಾರದ ರೂಪದಲ್ಲಿ ₹ 50 ಕೋಟಿ ಹಾಗೂ ಕಾರ್ಯಕ್ಷಮತೆ ಖಾತರಿಯಾಗಿ ₹ 100 ಕೋಟಿ ನೀಡಬೇಕು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ₹ 25 ಕೋಟಿ ದಂಡ ನೀಡಬೇಕು ಎಂದು ಸೂಚಿಸಿರುವ ಪೀಠವು, ನಿತ್ಯವೂ ಅಂದಾಜು 256.7 ದಶಲಕ್ಷ ಲೀಟರ್ ಕೊಳಚೆ ನೀರು ಬೆಳ್ಳಂದೂರು ಕೆರೆಯನ್ನು ಸೇರುತ್ತಿದ್ದು, ಇದರ ತಡೆಗೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.</p>.<p><strong>ಎನ್ಜಿಟಿ ಆದೇಶದ ಮುಖ್ಯಾಂಶ</strong><br />* ಬೆಂಗಳೂರಿನ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು<br />* ಕೆರೆಯ ಮಾಲಿನ್ಯ ತಡೆಯದ ಅಧಿಕಾರಿಗಳ ವಿರುದ್ಧ ಕ್ರಮ<br />* ಎಸ್ಟಿಪಿ ಸ್ಥಾಪಿಸದ ಅಪಾರ್ಟ್ಮೆಂಟ್ಗಳಿಂದ ಪರಿಹಾರ<br />* ಕೆರೆಗಳಿಗೆ ಕೊಳಚೆ ನೀರು ಸೇರದಂತೆ ಅಗತ್ಯ ಕ್ರಮ<br />* ನೀರಿನ ಗುಣಮಟ್ಟ ಅಳೆಯುವ ವ್ಯವಸ್ಥೆ ಜಾರಿಗೊಳಿಸಿ<br />* ಕೆರೆಗಳ ಹೂಳು, ಕೆಸರು ಮತ್ತು ಕಳೆ ತೆರವುಗೊಳಿಸಬೇಕು<br />* ಕೆರೆಯ ಬಳಿ ಜೀವ ವೈವಿಧ್ಯ ಉದ್ಯಾನ ನಿರ್ಮಿಸಬೇಕು<br />* ನಿರ್ಮಾಣ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>