ಹುಬ್ಬಳ್ಳಿ ತಾಲ್ಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವರು, ಅಲ್ಲಿ ಉಪ್ಪಿಟ್ಟು ಸೇವಿಸಿದ್ದರು. ಬಳಿಕ ಸಚಿವರು ಸೇರಿದಂತೆ ಅವರ ಆಪ್ತಸಹಾಯಕ, ಗನ್ ಮ್ಯಾನ್ ಅವರಿಗೂ ವಾಂತಿಯಾಗಿದೆ. ಇದರಿಂದ ಅಸ್ವಸ್ಥಗೊಂಡ ಸಚಿವರು, ತಡ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ.