ಶುಕ್ರವಾರ ರಾತ್ರಿ ಬೆಂಗಳೂರಿನ ಆಡುಗೋಡಿಯಿಂದ ಬೊಮ್ಮಸಂದ್ರಕ್ಕೆ ಆರೋಪಿಗಳು ಓಲಾ ಕ್ಯಾಬ್ ಬುಕ್ ಮಾಡಿದ್ದರು. ನಾಲ್ವರು ಕಾರು ಏರಿದ್ದು, ರಾತ್ರಿಯಿಡೀ ಬೆಂಗಳೂರು ಸುತ್ತಾಡಿ, ಚಾಕುವಿನಿಂದ ಚಾಲಕನನ್ನು ಬೆದರಿಸಿ ಆತನ ಬಳಿ ಇದ್ದ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆದಿದ್ದಾರೆ. ಬಳಿಕ ರಾಮನಗರ ಮಾರ್ಗವಾಗಿ ಚನ್ನಪಟ್ಟಣದತ್ತ ಬಂದಿದ್ದಾರೆ.