ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಬ್ ಚಾಲಕನ ಬೆದರಿಸಿ ದರೋಡೆ

Last Updated 1 ಡಿಸೆಂಬರ್ 2018, 7:17 IST
ಅಕ್ಷರ ಗಾತ್ರ

ರಾಮನಗರ: ಓಲಾ ಕ್ಯಾಬ್ ಚಾಲಕನನ್ನು ಬೆದರಿಸಿ ₹20 ಸಾವಿರದರೋಡೆ ಮಾಡಿದ ಆರೋಪಿಗಳು, ಚಾಲಕ ತಪ್ಪಿಸಿಕೊಳ್ಳುತ್ತಲೇ ತಾವೂ ಪರಾರಿಯಾಗಿದ್ದಾರೆ.

ಶುಕ್ರವಾರ ರಾತ್ರಿ ಬೆಂಗಳೂರಿನ ಆಡುಗೋಡಿಯಿಂದ ಬೊಮ್ಮಸಂದ್ರಕ್ಕೆ ಆರೋಪಿಗಳು ಓಲಾ‌ ಕ್ಯಾಬ್ ಬುಕ್ ಮಾಡಿದ್ದರು.‌ ನಾಲ್ವರು ಕಾರು ಏರಿದ್ದು, ರಾತ್ರಿಯಿಡೀ ಬೆಂಗಳೂರು ಸುತ್ತಾಡಿ, ಚಾಕುವಿನಿಂದ ಚಾಲಕನನ್ನು ಬೆದರಿಸಿ ಆತನ ಬಳಿ ಇದ್ದ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆದಿದ್ದಾರೆ. ಬಳಿಕ ರಾಮನಗರ ಮಾರ್ಗವಾಗಿ ಚನ್ನಪಟ್ಟಣದತ್ತ ಬಂದಿದ್ದಾರೆ.

ಆರೋಪಿಗಳು ಚಾಲಕನೊಂದಿಗೆ ಶನಿವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಚನ್ನಪಟ್ಟಣದ ‌ಆನಂದ ಭವನ ವಸತಿ ಗೃಹದಲ್ಲಿ ಕೊಠಡಿ ಬಾಡಿಗೆ ಪಡೆದಿದ್ದರು. ಈ ಸಂದರ್ಭ ಚಾಲಕ ಸೋಮಶೇಖರ್ ಕೊಠಡಿಯ ಕಿಟಕಿಯಿಂದ ಹೊರಗೆ ಜಿಗಿದು ತಪ್ಪಿಸಿಕೊಂಡರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು.

ಚಾಲಕ‌ ತಪ್ಪಿಸಿಕೊಳ್ಳುತ್ತಲೇ ಆರೋಪಿಗಳು ಹೋಟೆಲ್‌ನಿಂದ ಪರಾರಿಯಾದರು.ಚನ್ನಪಟ್ಟಣ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT