ಸುರೇಶ್ ಅವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್, ಸರ್ಕಾರದ ಅನುದಾನವೆಂದರೆ ಜನರದ್ದೇ ಅನುದಾನ. ಅದನ್ನು ಬಳಕೆ ಮಾಡಲು ಎಲ್ಲ ರೀತಿಯ ಹಕ್ಕಿದೆ. ಆದರೆ, ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡುವಾಗ ಪರಿಸ್ಥಿತಿ ಸರಿ ಇರಲಿಲ್ಲ. ಹೀಗಾಗಿ, ಒಂದೆರಡು ತಿಂಗಳು ಸಮ್ಮೇಳನ ಮುಂದಕ್ಕೆ ಹಾಕಿ ಎಂದು ಜಿಲ್ಲಾ ಕಸಾಪ ಅಧ್ಯಕ್ಷರಿಗೆ ಸೂಚನೆ ನೀಡಿದ್ದೆ. ಆದರೆ ಆ ಸೂಚನೆ ಧಿಕ್ಕರಿಸಿ ಸಮ್ಮೇಳನ ನಡೆಸಿದರು. ಆದಾಗ್ಯೂ ಸಚಿವರಿಗೆ ಹಣ ಬಿಡುಗಡೆಗೆ ಸೂಚಿಸಿದ್ದೆ. ಆದರೆ ಹಟಕ್ಕೆ ಬಿದ್ದು ಸಮ್ಮೇಳನ ನಡೆಸಲು ಮುಂದಾದಾಗ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಒಪ್ಪಲಿಲ್ಲ ಎಂದು ಸಮಜಾಯಿಷಿ ನೀಡಿದರು.