ಈ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದಅಧ್ಯಕ್ಷ ಮಂಜುನಾಥ ನಾಲವಾರಕರ್, ‘ಸ್ಪರ್ಧೆಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಲು ನಮಗೆ ಹಿಂಜರಿಕೆ ಇಲ್ಲ. ಆದರೆ, ಒಂದು ಷರತ್ತು
ಹಾಕಿದ್ದೇವೆ. ಒಂದು ಕೊಠಡಿಯಲ್ಲಿ ಸ್ಪರ್ಧೆನಡೆಸುವುದು ಬೇಡ. ಸಮ್ಮೇಳನದ ಉದ್ಘಾಟನೆ ದಿನ ಫೆ 5ರಂದು ಮುಖ್ಯ ವೇದಿಕೆಯಲ್ಲೇ ಸ್ಪರ್ಧೆ ನಡೆಯಲಿ. ಅದರಲ್ಲಿ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು, ಅಧಿಕಾರಿಗಳೂ ಭಾಗವಹಿಸಲಿ. ಅಲ್ಲಿ ನಮ್ಮ ವಿದ್ವತ್ತು ತೋರಿಸುತ್ತೇವೆ’ ಎಂದರು.