‘ಬೆಂಗಳೂರು ನಗರ ಹಾಗೂ ಯಾವ ಜಿಲ್ಲೆಗಳಲ್ಲಿ ಟೌನ್ಶಿಪ್ಗಳ ನಿರ್ಮಾಣವಾಗಬೇಕಿದೆ ಎಂಬ ಬಗ್ಗೆ ವರದಿಯನ್ನು ತಯಾರಿಸಲು ಹಾಗೂ ಅದರ ಭೌಗೋಳಿಕ ನಕ್ಷೆ ಹೊಂದಿರುವ ಸಮಗ್ರ ಪ್ರಸ್ತಾವನೆಯನ್ನು ಸಿದ್ದಪಡಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ. ನಗರಾಭಿವೃದ್ಧಿ ಇಲಾಖೆಯ ಒಪ್ಪಿಗೆಯನ್ನು ಪಡೆದುಕೊಂಡು ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ತರಲಾಗುವುದು’ ಎಂದು ಅವರು ಹೇಳಿದರು.