<p><strong>ನಾಗಮಂಗಲ:</strong> ಲಾಕ್ಡೌನ್ನಿಂದಾಗಿ ಸಮಸ್ಯೆಗೆ ಸಿಲುಕಿದ್ದ ತಾಲ್ಲೂಕಿನ ಕಡುಬಡವರಿಗಾಗಿ ಪಟ್ಟಣದ ಮಕ್ಬುಲ್ ಅಹಮದ್ ಅವರು ತಮ್ಮ ನಿವೇಶನವನ್ನು ಮಾರಿ, ಬಂದ ಹಣದಿಂದ ದಿನಸಿ ಕಿಟ್ ವಿತರಿಸಿದ್ದಾರೆ.</p>.<p>ಪಟ್ಟಣದ ಮಂಡ್ಯ ರಸ್ತೆಯಲ್ಲಿ ನೆಲೆಸಿರುವ ಅವರು ಅಕ್ಷರ ಕಲಿತವರಲ್ಲ. ಕೂಲಿ ಕಾರ್ಮಿಕರಾಗಿ ಕಠಿಣ ಪರಿಶ್ರಮದಿಂದ ಮುಂದೆ ಬಂದವರು. ಪುರಸಭೆಯ ಮಾಜಿ ಅಧ್ಯಕ್ಷರೂ ಹೌದು.</p>.<p>ಕುಟುಂಬದ ಸದಸ್ಯರ ಆಶಯದಂತೆ ದೇವಲಾಪುರ ಹ್ಯಾಂಡ್ಪೋಸ್ಟ್ ಬಳಿ ಇದ್ದ 30X40 ಅಳತೆಯ ನಿವೇಶನವನ್ನು ₹ 3 ಲಕ್ಷಕ್ಕೆ ಹಾಗೂ ತೋಟದಲ್ಲಿ ಬೆಳೆದಿದ್ದ ತೆಂಗನ್ನು ₹ 1 ಲಕ್ಷಕ್ಕೆ ಮಾರಿ ಬಂದ ಹಣದಿಂದ ಕಡುಬಡವರಿಗೆ ನೆರವಾಗಿದ್ದಾರೆ. ದಿನ ನಿತ್ಯದ ಬಳಕೆಗೆ ಬೇಕಾದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಕಡಲೆಕಾಳು ಸೇರಿದಂತೆ 8 ಅಗತ್ಯ ವಸ್ತುಗಳನ್ನು ಒಳಗೊಂಡ 500 ದಿನಸಿ ಕಿಟ್ಗಳನ್ನು ತಾಲ್ಲೂಕಿನ ವಿವಿಧ ಗ್ರಾಮಗಳ ಮತ್ತು ಪಟ್ಟಣದ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿರುವ ಅತಿ ಬಡವರನ್ನು ಗುರುತಿಸಿ ಹಂಚಿದ್ದಾರೆ.</p>.<p>‘ಇದು ರಂಜಾನ್ ಮಾಸವಾಗಿದ್ದು, ಬಡವರಿಗೆ ಅದರಲ್ಲೂ ಅಗತ್ಯ ಇರುವವರಿಗೆ ಸಹಾಯ ಮಾಡುವ ಅವಕಾಶವನ್ನು ದೇವರು ಕರುಣಿಸಿದ್ದಾನೆ. ಆದ್ದರಿಂದನನ್ನ ಕೈಲಾದಷ್ಟು ಸಹಾಯವನ್ನು ನಾನುಮತ್ತು ನನ್ನ ಕುಟುಂಬದವರು ಮಾಡುತ್ತಿದ್ದೇವೆ. ಇದನ್ನು ಪುಣ್ಯದ ಕೆಲಸವೆಂದು ಭಾವಿಸುತ್ತೇನೆ’ ಎಂದು ಮಕ್ಬುಲ್ ಹೇಳಿದರು.</p>.<p>‘ಮಕ್ಬುಲ್ ಕಟ್ಟಡ ಕಾರ್ಮಿಕನಾಗಿ ಶ್ರಮಪಟ್ಟು ಬೆಳೆದಿದ್ದಾರೆ. ಹಜ್ ಯಾತ್ರೆಗೆ ಹೋಗುವುದಕ್ಕಾಗಿ ಇಟ್ಟಿದ್ದ ಹಣದಲ್ಲಿ ಬಡವರಿಗೆ ಸಹಾಯ ಮಾಡಿರುವುದು ಶ್ಲಾಘನೀಯ’ ಎಂದು ಸ್ಥಳೀಯರಾದ ಇತಿಹಾಸ ತಜ್ಞ ಕಲೀಂ ಉಲ್ಲಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಮಂಗಲ:</strong> ಲಾಕ್ಡೌನ್ನಿಂದಾಗಿ ಸಮಸ್ಯೆಗೆ ಸಿಲುಕಿದ್ದ ತಾಲ್ಲೂಕಿನ ಕಡುಬಡವರಿಗಾಗಿ ಪಟ್ಟಣದ ಮಕ್ಬುಲ್ ಅಹಮದ್ ಅವರು ತಮ್ಮ ನಿವೇಶನವನ್ನು ಮಾರಿ, ಬಂದ ಹಣದಿಂದ ದಿನಸಿ ಕಿಟ್ ವಿತರಿಸಿದ್ದಾರೆ.</p>.<p>ಪಟ್ಟಣದ ಮಂಡ್ಯ ರಸ್ತೆಯಲ್ಲಿ ನೆಲೆಸಿರುವ ಅವರು ಅಕ್ಷರ ಕಲಿತವರಲ್ಲ. ಕೂಲಿ ಕಾರ್ಮಿಕರಾಗಿ ಕಠಿಣ ಪರಿಶ್ರಮದಿಂದ ಮುಂದೆ ಬಂದವರು. ಪುರಸಭೆಯ ಮಾಜಿ ಅಧ್ಯಕ್ಷರೂ ಹೌದು.</p>.<p>ಕುಟುಂಬದ ಸದಸ್ಯರ ಆಶಯದಂತೆ ದೇವಲಾಪುರ ಹ್ಯಾಂಡ್ಪೋಸ್ಟ್ ಬಳಿ ಇದ್ದ 30X40 ಅಳತೆಯ ನಿವೇಶನವನ್ನು ₹ 3 ಲಕ್ಷಕ್ಕೆ ಹಾಗೂ ತೋಟದಲ್ಲಿ ಬೆಳೆದಿದ್ದ ತೆಂಗನ್ನು ₹ 1 ಲಕ್ಷಕ್ಕೆ ಮಾರಿ ಬಂದ ಹಣದಿಂದ ಕಡುಬಡವರಿಗೆ ನೆರವಾಗಿದ್ದಾರೆ. ದಿನ ನಿತ್ಯದ ಬಳಕೆಗೆ ಬೇಕಾದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಕಡಲೆಕಾಳು ಸೇರಿದಂತೆ 8 ಅಗತ್ಯ ವಸ್ತುಗಳನ್ನು ಒಳಗೊಂಡ 500 ದಿನಸಿ ಕಿಟ್ಗಳನ್ನು ತಾಲ್ಲೂಕಿನ ವಿವಿಧ ಗ್ರಾಮಗಳ ಮತ್ತು ಪಟ್ಟಣದ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿರುವ ಅತಿ ಬಡವರನ್ನು ಗುರುತಿಸಿ ಹಂಚಿದ್ದಾರೆ.</p>.<p>‘ಇದು ರಂಜಾನ್ ಮಾಸವಾಗಿದ್ದು, ಬಡವರಿಗೆ ಅದರಲ್ಲೂ ಅಗತ್ಯ ಇರುವವರಿಗೆ ಸಹಾಯ ಮಾಡುವ ಅವಕಾಶವನ್ನು ದೇವರು ಕರುಣಿಸಿದ್ದಾನೆ. ಆದ್ದರಿಂದನನ್ನ ಕೈಲಾದಷ್ಟು ಸಹಾಯವನ್ನು ನಾನುಮತ್ತು ನನ್ನ ಕುಟುಂಬದವರು ಮಾಡುತ್ತಿದ್ದೇವೆ. ಇದನ್ನು ಪುಣ್ಯದ ಕೆಲಸವೆಂದು ಭಾವಿಸುತ್ತೇನೆ’ ಎಂದು ಮಕ್ಬುಲ್ ಹೇಳಿದರು.</p>.<p>‘ಮಕ್ಬುಲ್ ಕಟ್ಟಡ ಕಾರ್ಮಿಕನಾಗಿ ಶ್ರಮಪಟ್ಟು ಬೆಳೆದಿದ್ದಾರೆ. ಹಜ್ ಯಾತ್ರೆಗೆ ಹೋಗುವುದಕ್ಕಾಗಿ ಇಟ್ಟಿದ್ದ ಹಣದಲ್ಲಿ ಬಡವರಿಗೆ ಸಹಾಯ ಮಾಡಿರುವುದು ಶ್ಲಾಘನೀಯ’ ಎಂದು ಸ್ಥಳೀಯರಾದ ಇತಿಹಾಸ ತಜ್ಞ ಕಲೀಂ ಉಲ್ಲಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>