<p><strong>ಮೈಸೂರು</strong>: ರಾಜ್ಯದಲ್ಲಿ ಸದ್ಯ ವಿಧಿಸಿರುವಲಾಕ್ಡೌನ್ನಿರ್ಬಂಧಗಳಿಂದಾಗಿ ಕೃಷಿ ಉತ್ಪನ್ನಗಳ ಸಾಗಣೆಹಾಗೂ ಮಾರಾಟಕ್ಕೆ ದೊಡ್ಡ ಹೊಡೆತ ಬಿದ್ದಿದೆ.</p>.<p>ಗಡಿ ದಾಟಲು ನಿರ್ಬಂಧ ಇರುವ ಕಾರಣ ಮೈಸೂರು ಭಾಗದಲ್ಲಿಬೆಳೆದ ತರಕಾರಿ, ಹಣ್ಣು, ಹೂವುಗಳು ಹೆಚ್ಚಾಗಿ ಬರುತ್ತಿದ್ದ ಕೇರಳ, ತಮಿಳುನಾಡಿನ ಖರೀದಿದಾರರು ಬರುತ್ತಿಲ್ಲ. ಮೈಸೂರು ಜಿಲ್ಲೆಯಲ್ಲಿ ಈಗ 10 ಸಾವಿರ ಹೆಕ್ಟೇರ್ನಲ್ಲಿ ತರಕಾರಿ ಬಂಪರ್ ಫಸಲು ಬಂದಿದೆ. ಕೊಯ್ಲು ಮಾಡುವ ಹೊತ್ತಿಗೆ ಈ ಸಂಕಟ ಶುರುವಾಗಿದೆ.</p>.<p>‘ಕೇರಳ, ತಮಿಳುನಾಡು ಕಡೆ ನಿತ್ಯ 100ಕ್ಕೂ ಹೆಚ್ಚು ಲಾರಿಗಳಲ್ಲಿ ತರಕಾರಿ, ಹಣ್ಣು ಹೋಗುತ್ತಿತ್ತು. ಈಗ 10–15 ಲಾರಿಗಳಷ್ಟೇ ಹೋಗುತ್ತಿದೆ’ ಎನ್ನುತ್ತಾರೆ ಮೈಸೂರು ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೆ.ರುದ್ರೇಶ್.</p>.<p>ಚಾಮರಾಜನಗರ ಜಿಲ್ಲೆಯಲ್ಲಿ ಬಾಳೆ ಫಸಲು ಸಾಗಿಸಲು ಕಷ್ಟವಾಗಿದೆ. ಪುಷ್ಪೋದ್ಯಮ ಕುಸಿದಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ ಕಡೆ ಬೆಳೆದ ಕಲ್ಲಂಗಡಿ ಹಣ್ಣು ಮಾರಲಾಗುತ್ತಿಲ್ಲ. ಕೊಳೆತು ತಿಪ್ಪೆಗೆ ಸುರಿಯವಂತಾಗಿದೆ.</p>.<p>ಹಾಸನದಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ತರಕಾರಿ ಸರಬರಾಜು ಮಾಡಲು ಲಾರಿ ಮಾಲೀಕರು ಮುಂದೆ ಬರುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಕಾಫಿ, ಶುಂಠಿ ಹಾಗೂ ಕಾಳು ಮೆಣಸು ಖರೀದಿದಾರರಿಂದ ಉತ್ಸಾಹ ಕಾಣುತ್ತಿಲ್ಲ. ಸಾಗಣೆಗೆ ಸಿಗದ ಸೌಲಭ್ಯ: ಕಲಬುರ್ಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ತರಕಾರಿ, ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸಲು ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ. ರೈತರೇ ಬಾಡಿಗೆ ವಾಹನಗಳಲ್ಲಿ ಎಪಿಎಂಸಿಗಳಿಗೆ ತರುತ್ತಿದ್ದಾರೆ. ಇಂತಹ ವಾಹನಗಳಿಗೆ ಚೆಕ್ಪೋಸ್ಟ್ಗಳಲ್ಲಿ ಮುಕ್ತ ಪ್ರವೇಶವಿದೆ.</p>.<p>ರೈತರು ಎಪಿಎಂಸಿಗಳಿಗೆ ತರುವ ತರಕಾರಿ ಮತ್ತು ಹಣ್ಣುಗಳನ್ನುಬೀದರ್, ರಾಯಚೂರು ಮತ್ತು ಕೊಪ್ಪಳ ನಗರಗಳಲ್ಲಿ ಬಡಾವಣೆಗಳಿಗೆ ತಲುಪಿಸಲು ಆಯಾ ಜಿಲ್ಲಾ ಆಡಳಿತಗಳು ವಾಹನ ವ್ಯವಸ್ಥೆ ಮಾಡಿವೆ.</p>.<p class="Subhead"><strong>ಮಾರುಕಟ್ಟೆಗೆ ಬಾರದ ರೈತರು</strong></p>.<p class="Subhead">ದಾವಣೆಗೆರೆ ಜಿಲ್ಲೆಯಲ್ಲಿ ತರಕಾರಿ, ಹಣ್ಣು, ಹೂವು ಸಾಗಣೆ ವಾಹನಗಳಿಗೆ ನಿರ್ಬಂಧ ಇಲ್ಲ. ಆದರೆ, ಯೋಗ್ಯ ಬೆಲೆ ಸಿಗದ ಕಾರಣ ರೈತರೇ ಮಾರುಕಟ್ಟೆಗೆ ಬೆಳೆ ತರಲು ಹಿಂದೇಟು ಹಾಕುತ್ತಿದ್ದಾರೆ.ದಾವಣಗೆರೆಯಲ್ಲಿ ಬೆಲೆ ಸಿಗದೇ ರೈತರೇ ಅಲ್ಲಲ್ಲಿ ಹೂವು ಬೆಳೆ ನಾಶ ಮಾಡುತ್ತಿದ್ದಾರೆ.</p>.<p>ಶಿವಮೊಗ್ಗ ಜಿಲ್ಲೆಯಲ್ಲಿ ಮಾರಾಟಕ್ಕೆ ಸಮಸ್ಯೆ ಇಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಚೆಕ್ಪೋಸ್ಟ್ಗಳಲ್ಲಿ ರೈತರಿಗೆ ತೊಂದರೆ ಇಲ್ಲ. ಆದರೆ ಉತ್ತಮ ಬೆಲೆ ಸಿಗುತ್ತಿಲ್ಲ.</p>.<p><strong>ಹೂವು, ಹಣ್ಣು ಸಾಗಣೆಗೂ ಸಮಸ್ಯೆ</strong></p>.<p><strong>ಹುಬ್ಬಳ್ಳಿ:</strong> ತರಕಾರಿಯ ಸಗಟು, ಚಿಲ್ಲರೆ ಮಾರಾಟ ಹಾಗೂ ಸಾಗಾಟ ಸುಗಮವಾಗಿದೆ. ಆದರೆ, ಹೂ, ಹಣ್ಣುಗಳ ಸಾಗಾಟ ಹಾಗೂ ಮಾರಾಟ ಸುಗಮವಾಗದ್ದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.</p>.<p>ಲಾಕ್ಡೌನ್ ಆರಂಭದಲ್ಲಿ ಸಾಗಾಟ ಸಮಸ್ಯೆಯಿಂದಾಗಿ ರೈತರು ಹೊಲಗಳಲ್ಲಿಯೇ ತರಕಾರಿ ನಾಶ ಮಾಡತೊಡಗಿದ್ದರು. ಬಳಿಕ ತರಕಾರಿ ತರಲು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.</p>.<p>ಗದಗ, ಬೆಳಗಾವಿ ಹಾಗೂ ಹಾವೇರಿ ಜಿಲ್ಲೆಯಲ್ಲಿ ಪುಷ್ಪ ಕೃಷಿಕರಿಗೆ ಸಂಕಷ್ಟವಾಗಿದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ದ್ರಾಕ್ಷಿ, ದಾಳಿಂಬೆ ಹಣ್ಣುಗಳ ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲ.</p>.<p class="Subhead"><strong>ಇಲಾಖೆಯಿಂದ ಸೀಮಿತ ಖರೀದಿ</strong></p>.<p class="Subhead">ತುಮಕೂರು ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆ ಎರಡು ದಿನಗಳಿಗೊಮ್ಮೆ 100 ಟನ್ ಟೊಮೆಟೊ ಖರೀದಿಸಿ ಅಗತ್ಯವಿರುವ ಕಡೆಗಳಿಗೆ ಸಾಗಣೆಗೆ ನೆರವಾಗುತ್ತಿದೆ. ಆಸಕ್ತರು ಇಲಾಖೆ ಜಿಲ್ಲಾ ಉಪನಿರ್ದೇಶಕ ರಘು ಅವರನ್ನು 9448999217 ಸಂಪರ್ಕಿಸಬಹುದು.</p>.<p>ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ವಹಿವಾಟಿಗೆ ಅಡೆತಡೆ ಎದುರಾಗಿಲ್ಲ. ಸಾಗಣೆ ವೆಚ್ಚದ ಹಿನ್ನೆಲೆಯಲ್ಲಿ ತರಕಾರಿ ಮಂಡಿ ಮಾಲೀಕರು ತರಕಾರಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೂವುಗಳು ಹೊಲಗಳಲ್ಲೇ ಕೊಳೆಯುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ರಾಜ್ಯದಲ್ಲಿ ಸದ್ಯ ವಿಧಿಸಿರುವಲಾಕ್ಡೌನ್ನಿರ್ಬಂಧಗಳಿಂದಾಗಿ ಕೃಷಿ ಉತ್ಪನ್ನಗಳ ಸಾಗಣೆಹಾಗೂ ಮಾರಾಟಕ್ಕೆ ದೊಡ್ಡ ಹೊಡೆತ ಬಿದ್ದಿದೆ.</p>.<p>ಗಡಿ ದಾಟಲು ನಿರ್ಬಂಧ ಇರುವ ಕಾರಣ ಮೈಸೂರು ಭಾಗದಲ್ಲಿಬೆಳೆದ ತರಕಾರಿ, ಹಣ್ಣು, ಹೂವುಗಳು ಹೆಚ್ಚಾಗಿ ಬರುತ್ತಿದ್ದ ಕೇರಳ, ತಮಿಳುನಾಡಿನ ಖರೀದಿದಾರರು ಬರುತ್ತಿಲ್ಲ. ಮೈಸೂರು ಜಿಲ್ಲೆಯಲ್ಲಿ ಈಗ 10 ಸಾವಿರ ಹೆಕ್ಟೇರ್ನಲ್ಲಿ ತರಕಾರಿ ಬಂಪರ್ ಫಸಲು ಬಂದಿದೆ. ಕೊಯ್ಲು ಮಾಡುವ ಹೊತ್ತಿಗೆ ಈ ಸಂಕಟ ಶುರುವಾಗಿದೆ.</p>.<p>‘ಕೇರಳ, ತಮಿಳುನಾಡು ಕಡೆ ನಿತ್ಯ 100ಕ್ಕೂ ಹೆಚ್ಚು ಲಾರಿಗಳಲ್ಲಿ ತರಕಾರಿ, ಹಣ್ಣು ಹೋಗುತ್ತಿತ್ತು. ಈಗ 10–15 ಲಾರಿಗಳಷ್ಟೇ ಹೋಗುತ್ತಿದೆ’ ಎನ್ನುತ್ತಾರೆ ಮೈಸೂರು ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೆ.ರುದ್ರೇಶ್.</p>.<p>ಚಾಮರಾಜನಗರ ಜಿಲ್ಲೆಯಲ್ಲಿ ಬಾಳೆ ಫಸಲು ಸಾಗಿಸಲು ಕಷ್ಟವಾಗಿದೆ. ಪುಷ್ಪೋದ್ಯಮ ಕುಸಿದಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ ಕಡೆ ಬೆಳೆದ ಕಲ್ಲಂಗಡಿ ಹಣ್ಣು ಮಾರಲಾಗುತ್ತಿಲ್ಲ. ಕೊಳೆತು ತಿಪ್ಪೆಗೆ ಸುರಿಯವಂತಾಗಿದೆ.</p>.<p>ಹಾಸನದಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ತರಕಾರಿ ಸರಬರಾಜು ಮಾಡಲು ಲಾರಿ ಮಾಲೀಕರು ಮುಂದೆ ಬರುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಕಾಫಿ, ಶುಂಠಿ ಹಾಗೂ ಕಾಳು ಮೆಣಸು ಖರೀದಿದಾರರಿಂದ ಉತ್ಸಾಹ ಕಾಣುತ್ತಿಲ್ಲ. ಸಾಗಣೆಗೆ ಸಿಗದ ಸೌಲಭ್ಯ: ಕಲಬುರ್ಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ತರಕಾರಿ, ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸಲು ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ. ರೈತರೇ ಬಾಡಿಗೆ ವಾಹನಗಳಲ್ಲಿ ಎಪಿಎಂಸಿಗಳಿಗೆ ತರುತ್ತಿದ್ದಾರೆ. ಇಂತಹ ವಾಹನಗಳಿಗೆ ಚೆಕ್ಪೋಸ್ಟ್ಗಳಲ್ಲಿ ಮುಕ್ತ ಪ್ರವೇಶವಿದೆ.</p>.<p>ರೈತರು ಎಪಿಎಂಸಿಗಳಿಗೆ ತರುವ ತರಕಾರಿ ಮತ್ತು ಹಣ್ಣುಗಳನ್ನುಬೀದರ್, ರಾಯಚೂರು ಮತ್ತು ಕೊಪ್ಪಳ ನಗರಗಳಲ್ಲಿ ಬಡಾವಣೆಗಳಿಗೆ ತಲುಪಿಸಲು ಆಯಾ ಜಿಲ್ಲಾ ಆಡಳಿತಗಳು ವಾಹನ ವ್ಯವಸ್ಥೆ ಮಾಡಿವೆ.</p>.<p class="Subhead"><strong>ಮಾರುಕಟ್ಟೆಗೆ ಬಾರದ ರೈತರು</strong></p>.<p class="Subhead">ದಾವಣೆಗೆರೆ ಜಿಲ್ಲೆಯಲ್ಲಿ ತರಕಾರಿ, ಹಣ್ಣು, ಹೂವು ಸಾಗಣೆ ವಾಹನಗಳಿಗೆ ನಿರ್ಬಂಧ ಇಲ್ಲ. ಆದರೆ, ಯೋಗ್ಯ ಬೆಲೆ ಸಿಗದ ಕಾರಣ ರೈತರೇ ಮಾರುಕಟ್ಟೆಗೆ ಬೆಳೆ ತರಲು ಹಿಂದೇಟು ಹಾಕುತ್ತಿದ್ದಾರೆ.ದಾವಣಗೆರೆಯಲ್ಲಿ ಬೆಲೆ ಸಿಗದೇ ರೈತರೇ ಅಲ್ಲಲ್ಲಿ ಹೂವು ಬೆಳೆ ನಾಶ ಮಾಡುತ್ತಿದ್ದಾರೆ.</p>.<p>ಶಿವಮೊಗ್ಗ ಜಿಲ್ಲೆಯಲ್ಲಿ ಮಾರಾಟಕ್ಕೆ ಸಮಸ್ಯೆ ಇಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಚೆಕ್ಪೋಸ್ಟ್ಗಳಲ್ಲಿ ರೈತರಿಗೆ ತೊಂದರೆ ಇಲ್ಲ. ಆದರೆ ಉತ್ತಮ ಬೆಲೆ ಸಿಗುತ್ತಿಲ್ಲ.</p>.<p><strong>ಹೂವು, ಹಣ್ಣು ಸಾಗಣೆಗೂ ಸಮಸ್ಯೆ</strong></p>.<p><strong>ಹುಬ್ಬಳ್ಳಿ:</strong> ತರಕಾರಿಯ ಸಗಟು, ಚಿಲ್ಲರೆ ಮಾರಾಟ ಹಾಗೂ ಸಾಗಾಟ ಸುಗಮವಾಗಿದೆ. ಆದರೆ, ಹೂ, ಹಣ್ಣುಗಳ ಸಾಗಾಟ ಹಾಗೂ ಮಾರಾಟ ಸುಗಮವಾಗದ್ದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.</p>.<p>ಲಾಕ್ಡೌನ್ ಆರಂಭದಲ್ಲಿ ಸಾಗಾಟ ಸಮಸ್ಯೆಯಿಂದಾಗಿ ರೈತರು ಹೊಲಗಳಲ್ಲಿಯೇ ತರಕಾರಿ ನಾಶ ಮಾಡತೊಡಗಿದ್ದರು. ಬಳಿಕ ತರಕಾರಿ ತರಲು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.</p>.<p>ಗದಗ, ಬೆಳಗಾವಿ ಹಾಗೂ ಹಾವೇರಿ ಜಿಲ್ಲೆಯಲ್ಲಿ ಪುಷ್ಪ ಕೃಷಿಕರಿಗೆ ಸಂಕಷ್ಟವಾಗಿದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ದ್ರಾಕ್ಷಿ, ದಾಳಿಂಬೆ ಹಣ್ಣುಗಳ ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲ.</p>.<p class="Subhead"><strong>ಇಲಾಖೆಯಿಂದ ಸೀಮಿತ ಖರೀದಿ</strong></p>.<p class="Subhead">ತುಮಕೂರು ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆ ಎರಡು ದಿನಗಳಿಗೊಮ್ಮೆ 100 ಟನ್ ಟೊಮೆಟೊ ಖರೀದಿಸಿ ಅಗತ್ಯವಿರುವ ಕಡೆಗಳಿಗೆ ಸಾಗಣೆಗೆ ನೆರವಾಗುತ್ತಿದೆ. ಆಸಕ್ತರು ಇಲಾಖೆ ಜಿಲ್ಲಾ ಉಪನಿರ್ದೇಶಕ ರಘು ಅವರನ್ನು 9448999217 ಸಂಪರ್ಕಿಸಬಹುದು.</p>.<p>ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ವಹಿವಾಟಿಗೆ ಅಡೆತಡೆ ಎದುರಾಗಿಲ್ಲ. ಸಾಗಣೆ ವೆಚ್ಚದ ಹಿನ್ನೆಲೆಯಲ್ಲಿ ತರಕಾರಿ ಮಂಡಿ ಮಾಲೀಕರು ತರಕಾರಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೂವುಗಳು ಹೊಲಗಳಲ್ಲೇ ಕೊಳೆಯುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>