ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಸೋಂಕಿತರ ಶವಗಳನ್ನು ಗುಂಡಿಗೆಸೆದ ಸಿಬ್ಬಂದಿ, ವಿಡಿಯೊ ವೈರಲ್

ಜಿಲ್ಲಾಧಿಕಾರಿ ಕ್ಷಮೆಯಾಚನೆ
Last Updated 30 ಜೂನ್ 2020, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಕೋವಿಡ್‌–19 ಸೋಂಕಿತರ ಶವಗಳನ್ನು ಗುಂಡಿಗೆ ಎಸೆಯುತ್ತಿದ್ದ ದೃಶ್ಯಗಳ ವಿಡಿಯೊ ಮಂಗಳವಾರ ರಾಜ್ಯದಲ್ಲಿ ವೈರಲ್‌ ಆಗಿತ್ತು. ಗುಗ್ಗರಹಟ್ಟಿ ಪ್ರದೇಶದ ಸ್ಮಶಾನದಲ್ಲಿ ಶವಗಳನ್ನು ಎತ್ತಿ ಒಂದೇ ಗುಂಡಿಗೆ ಎಸೆಯುತ್ತಿದ್ದ ವಿಡಿಯೊ ಬಳ್ಳಾರಿ ಜಿಲ್ಲೆಗೆ ಸೇರಿದೆಯೇ ಎಂದು ಪರಿಶೀಲಿಸುವುದಾಗಿ ಜಿಲ್ಲಾಡಳಿತ ಹೇಳಿತ್ತು.

1ನಿಮಿಷ 28 ಸೆಕೆಂಡುಗಳ ವಿಡಿಯೊದ ಮೂಲ ಪರಿಶೀಲಿಸಲು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರು.

‘ವಿಡಿಯೊದಲ್ಲಿರುವ ಘಟನೆ ನಗರದಲ್ಲಿಯೇ ನಡೆದಿದೆ. ಜಿಲ್ಲಾಡಳಿತವು ಮೃತರ ಸಂಬಂಧಿಕರಲ್ಲಿ ಹಾಗೂ ಜನರಲ್ಲಿ ಬೇಷರತ್‌ ಕ್ಷಮೆ ಯಾಚಿಸುತ್ತದೆ’ ಎಂದುಸಂಜೆ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

‘ಸ್ಮಶಾನದಲ್ಲಿ ಭಾನುವಾರ ಹಾಗೂ ಸೋಮವಾರ ಮೃತಪಟ್ಟ ಒಂಬತ್ತು ಮಂದಿಯ ಶವಸಂಸ್ಕಾರ ಮಾಡಲಾಗಿದೆ. ಶವಗಳನ್ನು ನಿಯಮದ ಪ್ರಕಾರ ಸೋಂಕು ಹರಡದಂತೆ ಸಂಪೂರ್ಣ ಮುಚ್ಚಲಾಗಿತ್ತು. ಆದರೆ ಅವುಗಳನ್ನು ಗುಂಡಿಗೆ ಎಸೆದಿರುವುದು ವಿಷಾದ
ನೀಯ. ‌ಇದನ್ನು ಜಿಲ್ಲಾಡಳಿತ ಖಂಡಿಸುತ್ತದೆ. ಅಗೌರವಯುತವಾಗಿ ಅಂತಿಮ ಸಂಸ್ಕಾರ ನಡೆಸಿದ ತಂಡವನ್ನು ಬದಲಿಸಲಾಗುವುದು. ವಿಮ್ಸ್ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರ ನೇತೃತ್ವದಲ್ಲಿ ತರಬೇತಿ ಪಡೆದವರನ್ನು ತಂಡಕ್ಕೆ ನಿಯೋಜಿಸಲಾಗುವುದು' ಎಂದಿದ್ದಾರೆ.ವಿಡಿಯೊದಲ್ಲೇನಿತ್ತು?: ನೀಲಿ ಬಣ್ಣದ ಪಿಪಿಇ ಕಿಟ್ ಧರಿಸಿದ ಇಬ್ಬರು ಹಾಗೂ ಬಿಳಿಯ ಪಿಪಿಇ ಕಿಟ್ ಧರಿಸಿದ ಇಬ್ಬರು ಸಿಬ್ಬಂದಿ ಗುಂಡಿಯ ಬಳಿ ನಿಂತು ವ್ಯಾನ್ ಕಡೆಗೆ ಹಿಂತಿರುಗುವ ಕ್ಷಣದಿಂದ ವಿಡಿಯೊ ಶುರುವಾಗುತ್ತದೆ. ಮೂರು ಶವಗಳನ್ನು ಅವರು ಒಂದೊಂದಾಗಿ ಎಳೆದು ತಂದು ಗುಂಡಿಗೆ ಎಸೆಯುತ್ತಾರೆ. ಸಮೀಪದಲ್ಲೇ ಇರುವ ವ್ಯಕ್ತಿಯೊಬ್ಬರು ‘ನಿಧಾನಕ್ಕೆ’ ಎನ್ನುತ್ತಾರೆ.

ಸಿಬ್ಬಂದಿಯೊಬ್ಬರು ತಮ್ಮ ಎರಡೂ ಕೈಗಳ ನಾಲ್ಕು ಬೆರಳುಗಳನ್ನು ಪ್ರದರ್ಶಿಸಿ, ‘ಎಂಟವೆ ನೋಡ್ರಪ್ಪ ಟೋಟಲ್ಲು’ ಎನ್ನುತ್ತಾರೆ. ವಿಡಿಯೊ ಚಿತ್ರೀಕರಿಸಿದ ವ್ಯಕ್ತಿ ‘ಹಾಕಂಗುದ್ರೆ ಒಂದ್ರಲ್ಲೇ ಹಾಕ್ಬುಡಿ ಅತ್ತ ಮುಚ್ ಬುಡೋಣ’ ಎನ್ನುತ್ತಾರೆ. ಶವವನ್ನು ಹಳ್ಳಕ್ಕೆ‌ ಬಿರುಸಿನಿಂದ ಸಿಬ್ಬಂದಿ ಬೀಳಿಸಿದಾಗ ‘ಏ ನಿಧಾನಕ್ ಹಾಕ್ರೋ’ ಎಂಬ ಮಾತೂ ಕೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT