ನಿಲ್ದಾಣದಲ್ಲೇ ಆತನನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ಸೋಂಕಿನ ಕೆಲ ಲಕ್ಷಣಗಳು ಅವರಲ್ಲಿ ಕಂಡುಬಂದಿದ್ದವು. ಹೀಗಾಗಿ, ಸಮೀಪದ ಆಕಾಶ್ ಆಸ್ಪತ್ರೆಗೂ ಕರೆದೊಯ್ದು ತಪಾಸಣೆ ಮಾಡಿಸಿದ್ದರು. ನಂತರ, ಬಿದರಹಳ್ಳಿಯ ಈಸ್ಟ್ ಪಾಯಿಂಟ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಅವರಿಗೆ ತಿಳಿಸಿ ಅಲ್ಲಿಯೇ ದಾಖಲಿಸಲಾಗಿತ್ತು.