<p><strong>ಹೂವಿನಹಡಗಲಿ: </strong>‘ಗೋಮಾತೆ, ಹಿಂದುತ್ವದ ಬಗ್ಗೆ ಭಾಷಣ ಮಾಡುವವರು ಎಂದಾದ್ರೂ ಸಗಣಿ ಎತ್ತಿದ್ದಾರಾ?’ ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರಶ್ನಿಸಿದರು.</p>.<p>ತಾಲ್ಲೂಕಿನ ಪಶ್ಚಿಮ ಕಾಲ್ವಿ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ‘ಗೋಮಾತೆಯ ನಿಜವಾದ ಸೇವಕರು ನೀವು (ರೈತರು). ನೀವು ಬರೀ ಸಗಣಿ ಮಾತ್ರ ಎತ್ತುತ್ತಿದ್ದೀರಿ, ಆದ್ರೆ, ತುಪ್ಪ ತಿನ್ನುವವರು ಮಾತ್ರ ಗೋಮಾತೆ ಹೆಸರೇಳಿಕೊಂಡು ರಾಜಕಾರಣ ಮಾಡುವವರು’ ಎಂದು ಹೇಳಿದರು.</p>.<p>‘ಸ್ವಾರ್ಥಕ್ಕಾಗಿ ಕೆಲವರು ಗೋಮಾತೆಯ ಹೆಸರಲ್ಲಿ ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ಅವರಿಗೆ ಗೋವುಗಳ ಬಗ್ಗೆ ನೈಜ ಕಾಳಜಿ ಇಲ್ಲ. ಗೋವುಗಳನ್ನು ಸಾಕುವವರು ಯಾರ್ರೀ, ಸಗಣಿ ಎತ್ತುವವರು ಯಾರ್ರೀ, ಬೆರಣಿ ತಟ್ಟುವವರು ಯಾರ್ರೀ, ಹೊಲಕ್ಕೆ ಗೊಬ್ಬರ ಸುರಿಯುವವರು ಯಾರ್ರೀ’ ಎಂದು ಸಭಿಕರನ್ನು ಕೇಳಿದರು.</p>.<p>‘ನಮ್ಮ ಸರ್ಕಾರ ಬರೀ ಬಡವರ ಪರ, ಶೋಷಿತರ ಪರ ಯೋಜನೆಗಳನ್ನು ರೂಪಿಸಿತ್ತು. ನಾನು ಒಳ್ಳೆಯ ಕೆಲಸ ಮಾಡಿದ್ದಕ್ಕಾಗಿ ಎಲ್ಲರೂ ಸೇರಿ ಹೊಟ್ಟೆ ಕಿಚ್ಚಿನಿಂದ ನನ್ನನ್ನು ಮತ್ತೊಮ್ಮೆ ಮುಖ್ಯಮಂತ್ರಿ ಆಗದಂತೆ ತಡೆದರು’ ಎಂದು ಹೇಳಿದರು.</p>.<p>‘ಜಾತಿ ವ್ಯವಸ್ಥೆಯ ಬಗ್ಗೆ ಅಪಮಾನ ಅನುಭವಿಸಿದ್ದ ಬಸವಣ್ಣ, ಕನಕ, ಅಂಬೇಡ್ಕರರು ಹೊಸ ಸಮಾಜದ ಕನಸು ಕಂಡಿದ್ದರು. ಶರಣರು, ಮಹಾತ್ಮರು ಬೋಧಿಸಿದ ತತ್ವಗಳ ಅಡಿಯಲ್ಲೇ ನಮ್ಮ ಸಂವಿಧಾನ ರೂಪುಗೊಂಡಿದೆ ಎಂದರು.</p>.<p>ಕಾಗಿನೆಲೆ ಕನಕಪೀಠದ ನಿಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅರಣ್ಯ ಸಚಿವ ಆರ್.ಶಂಕರ್, ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ: </strong>‘ಗೋಮಾತೆ, ಹಿಂದುತ್ವದ ಬಗ್ಗೆ ಭಾಷಣ ಮಾಡುವವರು ಎಂದಾದ್ರೂ ಸಗಣಿ ಎತ್ತಿದ್ದಾರಾ?’ ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರಶ್ನಿಸಿದರು.</p>.<p>ತಾಲ್ಲೂಕಿನ ಪಶ್ಚಿಮ ಕಾಲ್ವಿ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ‘ಗೋಮಾತೆಯ ನಿಜವಾದ ಸೇವಕರು ನೀವು (ರೈತರು). ನೀವು ಬರೀ ಸಗಣಿ ಮಾತ್ರ ಎತ್ತುತ್ತಿದ್ದೀರಿ, ಆದ್ರೆ, ತುಪ್ಪ ತಿನ್ನುವವರು ಮಾತ್ರ ಗೋಮಾತೆ ಹೆಸರೇಳಿಕೊಂಡು ರಾಜಕಾರಣ ಮಾಡುವವರು’ ಎಂದು ಹೇಳಿದರು.</p>.<p>‘ಸ್ವಾರ್ಥಕ್ಕಾಗಿ ಕೆಲವರು ಗೋಮಾತೆಯ ಹೆಸರಲ್ಲಿ ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ಅವರಿಗೆ ಗೋವುಗಳ ಬಗ್ಗೆ ನೈಜ ಕಾಳಜಿ ಇಲ್ಲ. ಗೋವುಗಳನ್ನು ಸಾಕುವವರು ಯಾರ್ರೀ, ಸಗಣಿ ಎತ್ತುವವರು ಯಾರ್ರೀ, ಬೆರಣಿ ತಟ್ಟುವವರು ಯಾರ್ರೀ, ಹೊಲಕ್ಕೆ ಗೊಬ್ಬರ ಸುರಿಯುವವರು ಯಾರ್ರೀ’ ಎಂದು ಸಭಿಕರನ್ನು ಕೇಳಿದರು.</p>.<p>‘ನಮ್ಮ ಸರ್ಕಾರ ಬರೀ ಬಡವರ ಪರ, ಶೋಷಿತರ ಪರ ಯೋಜನೆಗಳನ್ನು ರೂಪಿಸಿತ್ತು. ನಾನು ಒಳ್ಳೆಯ ಕೆಲಸ ಮಾಡಿದ್ದಕ್ಕಾಗಿ ಎಲ್ಲರೂ ಸೇರಿ ಹೊಟ್ಟೆ ಕಿಚ್ಚಿನಿಂದ ನನ್ನನ್ನು ಮತ್ತೊಮ್ಮೆ ಮುಖ್ಯಮಂತ್ರಿ ಆಗದಂತೆ ತಡೆದರು’ ಎಂದು ಹೇಳಿದರು.</p>.<p>‘ಜಾತಿ ವ್ಯವಸ್ಥೆಯ ಬಗ್ಗೆ ಅಪಮಾನ ಅನುಭವಿಸಿದ್ದ ಬಸವಣ್ಣ, ಕನಕ, ಅಂಬೇಡ್ಕರರು ಹೊಸ ಸಮಾಜದ ಕನಸು ಕಂಡಿದ್ದರು. ಶರಣರು, ಮಹಾತ್ಮರು ಬೋಧಿಸಿದ ತತ್ವಗಳ ಅಡಿಯಲ್ಲೇ ನಮ್ಮ ಸಂವಿಧಾನ ರೂಪುಗೊಂಡಿದೆ ಎಂದರು.</p>.<p>ಕಾಗಿನೆಲೆ ಕನಕಪೀಠದ ನಿಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅರಣ್ಯ ಸಚಿವ ಆರ್.ಶಂಕರ್, ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>