ಪ್ರಯಾಣಿಕರು ಗೊಣಗಿಕೊಂಡು ತಲೆ, ಬಟ್ಟೆ ಹಾಗೂ ತಮ್ಮ ಲಗೇಜ್ಗಳ ಮೇಲಿದ್ದ ದೂಳನ್ನು ಕೊಡವಿಕೊಂಡು ಪ್ರಯಾಣ ಮಾಡಿದರು. ಕೇಳಲು ಟಿ. ಟಿ ಗಳು ಇರಲಿಲ್ಲ.
ದಾವಣಗೆರೆಯಿಂದ ಹಾವೇರಿ ನಡುವಿನ ಪ್ರಯಾಣ ಅವಧಿಯಲ್ಲಿ ನಾಲ್ಕೈದು ಬಾರಿ ದೂಳಿನ ಸ್ನಾನವಾಯಿತು ಎಂದು ಪ್ರಯಾಣಿಕ ಪ್ರಶಾಂತ್ ' ಪ್ರಜಾವಾಣಿ'ಗೆ ತಿಳಿಸಿದರು.
ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಪ್ರಯಾಣಿಕರಿಗೆ ಅನುಕೂಲವಾಗಲು ರಾಜ್ಯ ಸರ್ಕಾರದ ಮನವಿ ಮೇರೆಗೆ ನೈರುತ್ಯ ರೈಲು ಇಲಾಖೆ ಬೆಂಗಳೂರು ಮತ್ತು ಬೆಳಗಾವಿ ನಡುವೆ ಸೂಪರ್ ಫಾಸ್ಟ್ ರೈಲನ್ನು ಓಡಿಸುತ್ತಿದೆ.