ಘಟನೆ ವಿವರ: ಹೆಬ್ಬಳ್ಳ ಬಲದಂಡೆ ನಾಲೆಯ ಕಾಲುವೆ ನಿರ್ಮಾಣಕ್ಕೆಂದು ವಿಜಯಪುರ ಮತ್ತು ಯಾದಗಿರಿಯಿಂದ ಕೂಲಿ ಕಾರ್ಮಿಕರು ಎಚ್.ಡಿ.ಕೋಟೆ ತಾಲ್ಲೂಕಿಗೆ ಬಂದಿದ್ದಾರೆ. ಕಾಲುವೆ ಪಕ್ಕದಲ್ಲಿ ಟೆಂಟ್ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಇಲ್ಲಿಯೇ ವಾಸಿಸುತ್ತಿದ್ದ ಹನುಮಂತರಾಯ, ಮುಂಜಾನೆ ಬಯಲು ಬಹಿರ್ದೆಸೆಗೆ ತೆರಳಿದ ವೇಳೆಯಲ್ಲಿ ಅವರ ಮೇಲೆ ಕಾಡಾನೆಗಳು ದಾಳಿ ನಡೆಸಿವೆ. ಆಸ್ಪತ್ರೆ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.