‘ಅಪಘಾತಗಳಲ್ಲಿ ಗಾಯಗೊಂಡವರಿಗೆ ನೆರವು ನೀಡುವ ‘ಪರೋಪಕಾರಿ’ಗಳ ರಕ್ಷಣೆಗೆಂದು ಕಾನೂನು ರೂಪಿಸಿ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿ ಎರಡು ವರ್ಷಗಳೇ ಕಳೆದಿವೆ. ಈ ಸಂಬಂಧ ರೂಪಿಸಲಾದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸುತ್ತೋಲೆ ಹೊರಡಿಸಿದೆ.ಆದರೆ ದೇಶದ ಎಲ್ಲೆಡೆ ಸಾರ್ವಜನಿಕರಲ್ಲಿ ಈ ಬಗ್ಗೆ ಮಾಹಿತಿಯೇ ಇಲ್ಲ. ಈ ಸಂಬಂಧ ಕಾನೂನನ್ನು ರೂಪಿಸಿದ್ದು ಕರ್ನಾಟಕ ಮಾತ್ರ’ ಎನ್ನುತ್ತದೆ ಸೇವ್ ಲೈಫ್ ಪ್ರತಿಷ್ಠಾನದ ಅಧ್ಯಯನ ವರದಿ