ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ 2018ರ ಮೇ 22ರಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಉಮೇಶ್ ನೇತೃತ್ವದಲ್ಲಿ ಸರ್ಕಾರ ನಾಲ್ಕು ಜನರ ಸಮಿತಿ ರಚಿಸಿತ್ತು. ಹಂಗಾಮಿ ಕುಲಪತಿ ಡಾ.ಕೆ.ಎಂ.ಇಂದಿರೇಶ, ಭಾರತೀಯ ಕೃಷಿ ಅನುಸಂಧಾನ ಮಂಡಳಿ (ಐಸಿಎಆರ್) ಸಹಾಯಕ ಮಹಾನಿರ್ದೇಶಕ ಡಾ.ಜಾನಕಿರಾಮ್ ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಡಾ.ಎಂ.ವೈ.ಕಮತರ ಹೆಸರನ್ನು ಸಮಿತಿ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಆದರೆ ಆ ಪಟ್ಟಿ ತಿರಸ್ಕೃತಗೊಂಡಿದೆ. ಈ ಮಧ್ಯೆ ಡಾ.ಕಮತರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೀಗಾಗಿ ಆಯ್ಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.