<p>ಸುಷಿರ ವಾದ್ಯ ಸ್ಯಾಕ್ಸೊಫೋನ್ನಮೂಲ ಬೆಲ್ಜಿಯಂ ದೇಶ. ಆದರೆ ಇಂದುಕರ್ನಾಟಕ ಸಂಗೀತದ 72 ಮೇಳಕರ್ತ ರಾಗಗಳು, ಜನ್ಯರಾಗಗಳು ಅಷ್ಟೇ ಅಲ್ಲದೆದೇವರನಾಮ, ವರ್ಣ, ತಿಲ್ಲಾನಗಳೂಈ ವಾದ್ಯದ್ಲಲಿ ಮೊಳಗುತ್ತವೆ.</p>.<p>ವಿದೇಶಗಳಲ್ಲಿಇದನ್ನು ಮಿಲಿಟರಿ ಬ್ಯಾಂಡ್ಗೆ ಬಳಸುವುದು ರೂಢಿ. ಬೆಲ್ಜಿಯಂನ ಅಡಾಲ್ಫ್ ಸ್ಯಾಕ್ಸ್ ಎಂಬವವನು 1846ರಲ್ಲಿಈ ವಾದ್ಯವನ್ನು ಕಂಡುಹಿಡಿದ. ಕಂಚಿನಿಂದ ತಯಾರಿಸಿದ ಈ ವಾದ್ಯದಲ್ಲಿಅತ್ಯಂತ ಪರಿಣಾಮಕಾರಿಯಾಗಿ ಸಂಗೀತ ಕೇಳಲು ಸಾಧ್ಯ ಎಂಬುದು ಆತನ ಭಾವನೆಯಾಗಿತ್ತು.</p>.<p><strong>ಇದನ್ನೂ ಓದಿ:<a href="https://cms.prajavani.net/stories/stateregional/kadri-gopalnath-saxophone-672854.html" target="_blank"></a></strong><a href="https://cms.prajavani.net/stories/stateregional/kadri-gopalnath-saxophone-672854.html" target="_blank">ಸ್ಯಾಕ್ಸೋಫೋನ್ ಚಕ್ರವರ್ತಿಕದ್ರಿ ಗೋಪಾಲನಾಥ್ ನಿಧನ</a></p>.<p>ಅಲ್ಲಿನಮಿಲಿಟರಿ ಬ್ಯಾಂಡ್ಗಳಲ್ಲಿಬಳಸಲಾರಂಭಿಸಿದ ಸ್ಯಾಕ್ಸೊಫೋನ್, ನಂತರ ಆರ್ಕೆಸ್ಟ್ರಾಗಳಲ್ಲಿಬಳಕೆಗೆ ಬಂತು. ಅದಾಗಿ ಪಾಶ್ಚಾತ್ಯ ಜಾಸ್ ಸಂಗೀತದಲ್ಲಿಬಳಸಲಾರಂಭಿಸಿದರು. ಕರ್ನಾಟಕ ಸಂಗೀತದಲ್ಲಿ ಕ್ಲಾರಿಯೊನೆಟ್, ನಾಗಸ್ವರಗಳಿಗಿಂತಲೂ ಸ್ಯಾಕ್ಸೊಫೋನ್ ಇಂದು ಹೆಚ್ಚು ಜನಪ್ರಿಯವಾಗಿದೆ. ಮದುವೆ, ಮುಂಜಿಗಳಂಥ ಶುಭ ಕಾರ್ಯಗಳ್ಲಲಿ ಸ್ಯಾಕ್ಸೊಫೋನ್ಕಛೇರಿಗಳು ಶೋಭೆ ಹೆಚ್ಚಿಸುತ್ತವೆ.</p>.<p>ವಾದ್ಯ ಸಂಗೀತದಲ್ಲಿಮಹಿಳೆಯರು ಕಲಿಯಲು ಆಸಕ್ತಿ ವಹಿಸುವುದು ಸಾಮಾನ್ಯವಾಗಿ ಸುಲಭದಲ್ಲಿ ಒಲಿಯುವ ವಾದ್ಯಗಳನ್ನೇ. ಸುಷಿರ ವಾದ್ಯ, ಅದರಲ್ಲೂ ಸ್ಯಾಕ್ಸೊಫೋನ್ಕಲಿಕೆ ಆರಂಭದಲ್ಲಿ ಕೊಂಚ ಕಷ್ಟವೇ. ಆದರೂ ಮಹಿಳೆಯರಿಗೆ ಇದು ಸಾಧ್ಯವಿಲ್ಲ ಎನ್ನುವುದು ತಪ್ಪು ಕಲ್ಪನೆ.ಇದೀಗ ಬಹಳಷ್ಟು ಹುಡುಗಿಯರೂ ಸ್ಯಾಕ್ಸೊಫೋನ್ಕಲಿಯುತ್ತಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://cms.prajavani.net/artculture/music/music-soldgers-kadri-dreams-635274.html" target="_blank">ವಿಶೇಷ ಸಂದರ್ಶನ | ಸೈನಿಕರಿಗೆ ಸಂಗೀತ: ಕದ್ರಿ ಕನಸು</a></p>.<p>ವಾದ್ಯ ಸಂಗೀತ ಕಲಿತರೆ ವಿಭಿನ್ನವಾದದ್ದನ್ನು,ಯಾರೂ ಮಾಡದೇ ಇರುವುದರಲ್ಲೇ ಸಾಧನೆ ಮಾಡಿ ತೋರಿಸಬೇಕು ಎಂದು ಪಣ ತೊಟ್ಟು ಯಶಸ್ವಿಯಾದವರು ಮಂಗಳೂರು ಮೂಲದ ಸ್ಯಾಕ್ಸೊಫೋನ್ ವಿದುಷಿಯರಾದಲಾವಣ್ಯ ಮತ್ತು ಸುಬ್ಬುಲಕ್ಷ್ಮಿ. ಕದ್ರಿ ಗೋಪಾಲನಾಥ್ ಅವರ ಶಿಷ್ಯೆಯರಾದ ಇವರಿಬ್ಬರೂ ಇದೀಗ ದೇಶ ವಿದೇಶಗಳಲ್ಲಿನೂರಾರು ಕಛೇರಿ ನೀಡುತ್ತಿದ್ದಾರೆ. ಈ ವಾದ್ಯದಲ್ಲಿದಕ್ಷಿಣಾದಿ ಸಂಗೀತವನ್ನು ಜನಪ್ರಿಯಗೊಳಿಸುತ್ತಿದ್ದಾರೆ.</p>.<p>ಕದ್ರಿ ಗೋಪಾಲನಾಥ್ ಅವರೇ ಸುಮಾರು 500ಕ್ಕೂ ಹೆಚ್ಚು ಶಿಷ್ಯರನ್ನು ತಯಾರು ಮಾಡಿದ್ದಾರೆ. ಅದರಲ್ಲಿ ಮಹಿಳೆಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ.</p>.<p><strong>ಆತುರ ಬೇಡ: ‘</strong>ಈ ವಾದ್ಯವನ್ನು ಕುಳಿತುಕೊಂಡೇ ನುಡಿಸಬೇಕು. ಉಸಿರಿನ ನಿಯಂತ್ರಣ ಇರಬೇಕು. ಸಂಗೀತದ ಜ್ಞಾನ ಇರಬೇಕು. ಮೊದಲು ಬೇರೆ ಯಾವುದಾದರೂ ವಾದ್ಯವನ್ನು ಕಲಿಯಿರಿ. ಆಗ ಸ್ಯಾಕ್ಸೊಫೋನ್ ಬೇಗ ಒಲಿಯುತ್ತದೆ. ಕನಿಷ್ಠ 8ವರ್ಷವಾದರೂ ಅಭ್ಯಾಸ ಮಾಡಿ. ಅಲ್ಲಿಯವರೆಗೆ ಕಛೇರಿ ಕೊಡುವ ಆತುರ ಬೇಡ. ಕಛೇರಿ ಕೊಡುವ ಮುನ್ನ 50 ಸಲ ಅಭ್ಯಾಸ ಮಾಡಿ’ ಎನ್ನುವುದು ಕದ್ರಿ ಗೋಪಾಲನಾಥ್ ಅವರು ಹೊಸಬರಿಗೆ ಕೊಡುತ್ತಿದ್ದಸಲಹೆ. </p>.<p><strong>ಇದನ್ನೂ ಓದಿ:</strong><a href="https://cms.prajavani.net/artculture/music/kadri-gopalnath-saxophone-672858.html" target="_blank">ರಾಮನವಮಿ ಸಂಗೀತೋತ್ಸವದಲ್ಲಿ ಇನ್ನು ಕೇಳದು ‘ಕದ್ರಿ‘ ಸ್ಯಾಕ್ಸೋಫೋನ್ಇಂಪು</a></p>.<p>ಬಳಸಲು ಯೋಗ್ಯವಿರುವಸ್ಯಾಕ್ಸೊಫೋನ್ ಖರೀದಿಗೆಸುಮಾರು ₹10 ಸಾವಿರ ಬೇಕು. ₹20 ಸಾವಿರಕ್ಕೆ ಉತ್ತಮ ಗುಣಮಟ್ಟದ ಸ್ಯಾಕ್ಸೊಫೋನ್ ಸಿಗುತ್ತದೆ.ಒಂದೂವರೆ ಲಕ್ಷ ರೂಪಾಯಿವರೆಗೂ ಬೆಲೆ ಬಾಳುವ ಸ್ಯಾಕ್ಸೊಫೋನ್ಗಳು ಸಿಗುತ್ತವೆ. ಎಲ್ಲ ಪ್ರಮುಖ ಸಂಗೀತವಾದ್ಯಗಳ ಮಳಿಗೆಗಳಲ್ಲಿಸ್ಯಾಕ್ಸೊಫೋನ್ ಲಭ್ಯ.</p>.<p><strong>ಕದ್ರಿ ಗೋಪಾಲನಾಥ್ಸ್ಯಾಕ್ಸಾಫೋನ್ ಒಲಿಸಿಕೊಂಡಿದ್ದು...</strong></p>.<p>ತಾವು ಸ್ಯಾಕ್ಸಾಫೋನ್ ಒಲಿಸಿಕೊಂಡ ವಿಧವನ್ನು ಕದ್ರಿ ಗೋಪಾಲನಾಥ್ 2013ರಲ್ಲಿ ಹೀಗೆ ನೆನಪಿಸಿಕೊಂಡಿದ್ದರು...</p>.<p>‘ಅದು ಮೈಸೂರು ಅರಮನೆಯಲ್ಲಿನಡೆದ ದಸರಾ ದರ್ಬಾರ್ ಉತ್ಸವ. ಬೆಳಿಗ್ಗೆ ಮಹಾರಾಜರ ನೇತೃತ್ವದಲ್ಲಿ ವಿವಿಧ ವಾದ್ಯಗಳಿಂದ ಸುಮಾರು ಒಂದು ಗಂಟೆ ಕಾಲ ವಾದ್ಯ ಮೇಳ. ಅಲ್ಲಿನಾಗಸ್ವರ, ವೀಣೆ, ಪಿಟೀಲು, ಕೊಳಲು ಎಲ್ಲವೂ ಇತ್ತು. ಅದೇ ಮೇಳದಕರ್ತದಲ್ಲಿಮಹಾರಾಜರದ್ದೇಸಂಗೀತ ಸಂಯೋಜನೆಯ ಒಂದು ರಾಗವನ್ನು ಸ್ಯಾಕ್ಸೊಫೋನ್ನಲ್ಲಿ ನುಡಿಸಿದೆ. ಅವರಿಗೆ ಬಹಳ ಖುಷಿಯಾಗಿ ಅಭಿನಂದಿಸಿದರು. ಈ ಕ್ಷಣವನ್ನು ಮರೆಯುವಂತೆಯೇ ಇಲ್ಲ.</p>.<p><strong>ಇದನ್ನೂ ಓದಿ:</strong><a href="https://www.prajavani.net/article/%E0%B2%B8%E0%B3%8D%E0%B2%AF%E0%B2%BE%E0%B2%95%E0%B3%8D%E0%B2%B8%E0%B3%8B%E0%B2%AB%E0%B3%8B%E0%B2%A8%E0%B3%8D-%E0%B2%9A%E0%B2%95%E0%B3%8D%E0%B2%B0%E0%B2%B5%E0%B2%B0%E0%B3%8D%E0%B2%A4%E0%B2%BF-%E2%80%98%E0%B2%95%E0%B2%A6%E0%B3%8D%E0%B2%B0%E0%B2%BF%E2%80%99" target="_blank">ವ್ಯಕ್ತಿತ್ವ |ಸ್ಯಾಕ್ಸೋಫೋನ್ ಚಕ್ರವರ್ತಿ ‘ಕದ್ರಿ’</a></p>.<p>‘ವಿದೇಶಿ ವಾದ್ಯವನ್ನು ಕರ್ನಾಟಕ ಸಂಗೀತದ ಗಮಕಗಳಿಗೆ ಪಳಗಿಸುವುದು ಒಂದು ದೊಡ್ಡ ಸವಾಲು. ಮೊದಲು ಶಾಸ್ತ್ರೀಯ ಹಾಡುಗಾರಿಕೆ ಕಲಿತೆ. ಸ್ವಲ್ಪ ಸಮಯ ನಾಗಸ್ವರ ಅಭ್ಯಾಸ ಮಾಡಿದೆ. ಅದರ ಸ್ಥಾಯಿ ಗೊತ್ತಾದ ಮೇಲೆ ಪಾಶ್ಚಿಮಾತ್ಯ ಸಂಗೀತವನ್ನೂ ಅಭ್ಯಾಸ ಮಾಡಿದೆ. ಕರ್ನಾಟಕ ಸಂಗೀತದ ಎಲ್ಲ ರಾಗಗಳು ಗೊತ್ತಾದ ಮೇಲೆ ಸ್ಯಾಕ್ಸೊಫೋನ್ನಲ್ಲಿ ಅದನ್ನು ಅಳವಡಿಸಿದೆ. ನಿತ್ಯವೂ ಐದಾರು ಗಂಟೆಗಳ ಕಾಲ ಅಭ್ಯಾಸ ನಡೆಸಿ ನಮ್ಮ ಸಂಗೀತಕ್ಕೆ ವಾದ್ಯವನ್ನು ಒಗ್ಗಿಕೊಳ್ಳುವಂತೆ ಮಾಡಲು ಬಹಳ ಶ್ರಮಪಟ್ಟೆ.</p>.<p>‘ಮೊದಮೊದಲು ಕಛೇರಿ ಕೊಡುವಾಗ ಸ್ಯಾಕ್ಸೊಫೋನ್ನ ಸುಮಧುರ ನಾದ ನನಗೇ ರೋಮಾಂಚನ ನೀಡುತ್ತಿತ್ತು. ನನಗಾಗ 15ವರ್ಷ. ಮಂಗಳೂರಿನ ಮಾಧ್ವರೊಬ್ಬರ ಮನೆಯಲ್ಲಿಸತ್ಯನಾರಾಯಣ ಪೂಜೆ. ಅಲ್ಲಿ ನನಗೆ ಕಛೇರಿ ಕೊಡಲು ಆಹ್ವಾನ ಬಂತು. ಅವರ ಮನಗೆ ಹೋಗಿ ಅರ್ಧ ಗಂಟೆ ಸ್ಯಾಕ್ಸೊಫೋನ್ನಲಲ್ಲಿ ದೇವರನಾಮ ನುಡಿಸಿದೆ. ಆ ಮನೆಯ ಯಜಮಾನರು ಅದೇ ಮೊದಲು ಸ್ಯಾಕ್ಸೊಫೋನ್ನೋಡಿದ್ದು, ಸಂಗೀತ ಕೇಳಿದ್ದು. ಅವರು ಬಂದು, ‘ಅದು ಎಂಥದು ವಾದ್ಯ ಮಾರಾಯರೆ, ಸೌಂಡು ಭಾರೀ ಚಂದ ಉಂಟಲ್ಲ’ಎಂದರು. ಆಗ ಸ್ಯಾಕ್ಸೊಫೋನ್ಅವರ ಕೈಗೆ ಕೊಟ್ಟು ವಿವರ ನೀಡಿದೆ. ಅಲ್ಲಿಂದ ಪ್ರತಿ ವರ್ಷ ಸತ್ಯನಾರಾಯಣ ಪೂಜೆಸಮಯಕ್ಕೆ ಆಹ್ವಾನ ಬರುತ್ತಿತ್ತು’.</p>.<p><strong>ಇನ್ನಷ್ಟು...</strong></p>.<p><a href="https://www.prajavani.net/stories/national/kadri-gopalnath-saxophonist-672856.html" target="_blank">ಕುವೈತ್ನಲ್ಲಿರುವ ಕದ್ರಿ ಗೋಪಾಲನಾಥ್ ಪುತ್ರನಿಗೆ ವೀಸಾ ವ್ಯವಸ್ಥೆ ಮಾಡಿಕೊಡಿ: ಮನವಿ</a><br /><a href="https://www.prajavani.net/district/bengaluru-city/no-caste-music-says-kadri-672857.html" target="_blank">ಕದ್ರಿ ಗೋಪಾಲನಾಥ್ ಮನದ ಮಾತು: ಸಂಗೀತಕ್ಕೆ ಜಾತಿ ಇಲ್ಲ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುಷಿರ ವಾದ್ಯ ಸ್ಯಾಕ್ಸೊಫೋನ್ನಮೂಲ ಬೆಲ್ಜಿಯಂ ದೇಶ. ಆದರೆ ಇಂದುಕರ್ನಾಟಕ ಸಂಗೀತದ 72 ಮೇಳಕರ್ತ ರಾಗಗಳು, ಜನ್ಯರಾಗಗಳು ಅಷ್ಟೇ ಅಲ್ಲದೆದೇವರನಾಮ, ವರ್ಣ, ತಿಲ್ಲಾನಗಳೂಈ ವಾದ್ಯದ್ಲಲಿ ಮೊಳಗುತ್ತವೆ.</p>.<p>ವಿದೇಶಗಳಲ್ಲಿಇದನ್ನು ಮಿಲಿಟರಿ ಬ್ಯಾಂಡ್ಗೆ ಬಳಸುವುದು ರೂಢಿ. ಬೆಲ್ಜಿಯಂನ ಅಡಾಲ್ಫ್ ಸ್ಯಾಕ್ಸ್ ಎಂಬವವನು 1846ರಲ್ಲಿಈ ವಾದ್ಯವನ್ನು ಕಂಡುಹಿಡಿದ. ಕಂಚಿನಿಂದ ತಯಾರಿಸಿದ ಈ ವಾದ್ಯದಲ್ಲಿಅತ್ಯಂತ ಪರಿಣಾಮಕಾರಿಯಾಗಿ ಸಂಗೀತ ಕೇಳಲು ಸಾಧ್ಯ ಎಂಬುದು ಆತನ ಭಾವನೆಯಾಗಿತ್ತು.</p>.<p><strong>ಇದನ್ನೂ ಓದಿ:<a href="https://cms.prajavani.net/stories/stateregional/kadri-gopalnath-saxophone-672854.html" target="_blank"></a></strong><a href="https://cms.prajavani.net/stories/stateregional/kadri-gopalnath-saxophone-672854.html" target="_blank">ಸ್ಯಾಕ್ಸೋಫೋನ್ ಚಕ್ರವರ್ತಿಕದ್ರಿ ಗೋಪಾಲನಾಥ್ ನಿಧನ</a></p>.<p>ಅಲ್ಲಿನಮಿಲಿಟರಿ ಬ್ಯಾಂಡ್ಗಳಲ್ಲಿಬಳಸಲಾರಂಭಿಸಿದ ಸ್ಯಾಕ್ಸೊಫೋನ್, ನಂತರ ಆರ್ಕೆಸ್ಟ್ರಾಗಳಲ್ಲಿಬಳಕೆಗೆ ಬಂತು. ಅದಾಗಿ ಪಾಶ್ಚಾತ್ಯ ಜಾಸ್ ಸಂಗೀತದಲ್ಲಿಬಳಸಲಾರಂಭಿಸಿದರು. ಕರ್ನಾಟಕ ಸಂಗೀತದಲ್ಲಿ ಕ್ಲಾರಿಯೊನೆಟ್, ನಾಗಸ್ವರಗಳಿಗಿಂತಲೂ ಸ್ಯಾಕ್ಸೊಫೋನ್ ಇಂದು ಹೆಚ್ಚು ಜನಪ್ರಿಯವಾಗಿದೆ. ಮದುವೆ, ಮುಂಜಿಗಳಂಥ ಶುಭ ಕಾರ್ಯಗಳ್ಲಲಿ ಸ್ಯಾಕ್ಸೊಫೋನ್ಕಛೇರಿಗಳು ಶೋಭೆ ಹೆಚ್ಚಿಸುತ್ತವೆ.</p>.<p>ವಾದ್ಯ ಸಂಗೀತದಲ್ಲಿಮಹಿಳೆಯರು ಕಲಿಯಲು ಆಸಕ್ತಿ ವಹಿಸುವುದು ಸಾಮಾನ್ಯವಾಗಿ ಸುಲಭದಲ್ಲಿ ಒಲಿಯುವ ವಾದ್ಯಗಳನ್ನೇ. ಸುಷಿರ ವಾದ್ಯ, ಅದರಲ್ಲೂ ಸ್ಯಾಕ್ಸೊಫೋನ್ಕಲಿಕೆ ಆರಂಭದಲ್ಲಿ ಕೊಂಚ ಕಷ್ಟವೇ. ಆದರೂ ಮಹಿಳೆಯರಿಗೆ ಇದು ಸಾಧ್ಯವಿಲ್ಲ ಎನ್ನುವುದು ತಪ್ಪು ಕಲ್ಪನೆ.ಇದೀಗ ಬಹಳಷ್ಟು ಹುಡುಗಿಯರೂ ಸ್ಯಾಕ್ಸೊಫೋನ್ಕಲಿಯುತ್ತಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://cms.prajavani.net/artculture/music/music-soldgers-kadri-dreams-635274.html" target="_blank">ವಿಶೇಷ ಸಂದರ್ಶನ | ಸೈನಿಕರಿಗೆ ಸಂಗೀತ: ಕದ್ರಿ ಕನಸು</a></p>.<p>ವಾದ್ಯ ಸಂಗೀತ ಕಲಿತರೆ ವಿಭಿನ್ನವಾದದ್ದನ್ನು,ಯಾರೂ ಮಾಡದೇ ಇರುವುದರಲ್ಲೇ ಸಾಧನೆ ಮಾಡಿ ತೋರಿಸಬೇಕು ಎಂದು ಪಣ ತೊಟ್ಟು ಯಶಸ್ವಿಯಾದವರು ಮಂಗಳೂರು ಮೂಲದ ಸ್ಯಾಕ್ಸೊಫೋನ್ ವಿದುಷಿಯರಾದಲಾವಣ್ಯ ಮತ್ತು ಸುಬ್ಬುಲಕ್ಷ್ಮಿ. ಕದ್ರಿ ಗೋಪಾಲನಾಥ್ ಅವರ ಶಿಷ್ಯೆಯರಾದ ಇವರಿಬ್ಬರೂ ಇದೀಗ ದೇಶ ವಿದೇಶಗಳಲ್ಲಿನೂರಾರು ಕಛೇರಿ ನೀಡುತ್ತಿದ್ದಾರೆ. ಈ ವಾದ್ಯದಲ್ಲಿದಕ್ಷಿಣಾದಿ ಸಂಗೀತವನ್ನು ಜನಪ್ರಿಯಗೊಳಿಸುತ್ತಿದ್ದಾರೆ.</p>.<p>ಕದ್ರಿ ಗೋಪಾಲನಾಥ್ ಅವರೇ ಸುಮಾರು 500ಕ್ಕೂ ಹೆಚ್ಚು ಶಿಷ್ಯರನ್ನು ತಯಾರು ಮಾಡಿದ್ದಾರೆ. ಅದರಲ್ಲಿ ಮಹಿಳೆಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ.</p>.<p><strong>ಆತುರ ಬೇಡ: ‘</strong>ಈ ವಾದ್ಯವನ್ನು ಕುಳಿತುಕೊಂಡೇ ನುಡಿಸಬೇಕು. ಉಸಿರಿನ ನಿಯಂತ್ರಣ ಇರಬೇಕು. ಸಂಗೀತದ ಜ್ಞಾನ ಇರಬೇಕು. ಮೊದಲು ಬೇರೆ ಯಾವುದಾದರೂ ವಾದ್ಯವನ್ನು ಕಲಿಯಿರಿ. ಆಗ ಸ್ಯಾಕ್ಸೊಫೋನ್ ಬೇಗ ಒಲಿಯುತ್ತದೆ. ಕನಿಷ್ಠ 8ವರ್ಷವಾದರೂ ಅಭ್ಯಾಸ ಮಾಡಿ. ಅಲ್ಲಿಯವರೆಗೆ ಕಛೇರಿ ಕೊಡುವ ಆತುರ ಬೇಡ. ಕಛೇರಿ ಕೊಡುವ ಮುನ್ನ 50 ಸಲ ಅಭ್ಯಾಸ ಮಾಡಿ’ ಎನ್ನುವುದು ಕದ್ರಿ ಗೋಪಾಲನಾಥ್ ಅವರು ಹೊಸಬರಿಗೆ ಕೊಡುತ್ತಿದ್ದಸಲಹೆ. </p>.<p><strong>ಇದನ್ನೂ ಓದಿ:</strong><a href="https://cms.prajavani.net/artculture/music/kadri-gopalnath-saxophone-672858.html" target="_blank">ರಾಮನವಮಿ ಸಂಗೀತೋತ್ಸವದಲ್ಲಿ ಇನ್ನು ಕೇಳದು ‘ಕದ್ರಿ‘ ಸ್ಯಾಕ್ಸೋಫೋನ್ಇಂಪು</a></p>.<p>ಬಳಸಲು ಯೋಗ್ಯವಿರುವಸ್ಯಾಕ್ಸೊಫೋನ್ ಖರೀದಿಗೆಸುಮಾರು ₹10 ಸಾವಿರ ಬೇಕು. ₹20 ಸಾವಿರಕ್ಕೆ ಉತ್ತಮ ಗುಣಮಟ್ಟದ ಸ್ಯಾಕ್ಸೊಫೋನ್ ಸಿಗುತ್ತದೆ.ಒಂದೂವರೆ ಲಕ್ಷ ರೂಪಾಯಿವರೆಗೂ ಬೆಲೆ ಬಾಳುವ ಸ್ಯಾಕ್ಸೊಫೋನ್ಗಳು ಸಿಗುತ್ತವೆ. ಎಲ್ಲ ಪ್ರಮುಖ ಸಂಗೀತವಾದ್ಯಗಳ ಮಳಿಗೆಗಳಲ್ಲಿಸ್ಯಾಕ್ಸೊಫೋನ್ ಲಭ್ಯ.</p>.<p><strong>ಕದ್ರಿ ಗೋಪಾಲನಾಥ್ಸ್ಯಾಕ್ಸಾಫೋನ್ ಒಲಿಸಿಕೊಂಡಿದ್ದು...</strong></p>.<p>ತಾವು ಸ್ಯಾಕ್ಸಾಫೋನ್ ಒಲಿಸಿಕೊಂಡ ವಿಧವನ್ನು ಕದ್ರಿ ಗೋಪಾಲನಾಥ್ 2013ರಲ್ಲಿ ಹೀಗೆ ನೆನಪಿಸಿಕೊಂಡಿದ್ದರು...</p>.<p>‘ಅದು ಮೈಸೂರು ಅರಮನೆಯಲ್ಲಿನಡೆದ ದಸರಾ ದರ್ಬಾರ್ ಉತ್ಸವ. ಬೆಳಿಗ್ಗೆ ಮಹಾರಾಜರ ನೇತೃತ್ವದಲ್ಲಿ ವಿವಿಧ ವಾದ್ಯಗಳಿಂದ ಸುಮಾರು ಒಂದು ಗಂಟೆ ಕಾಲ ವಾದ್ಯ ಮೇಳ. ಅಲ್ಲಿನಾಗಸ್ವರ, ವೀಣೆ, ಪಿಟೀಲು, ಕೊಳಲು ಎಲ್ಲವೂ ಇತ್ತು. ಅದೇ ಮೇಳದಕರ್ತದಲ್ಲಿಮಹಾರಾಜರದ್ದೇಸಂಗೀತ ಸಂಯೋಜನೆಯ ಒಂದು ರಾಗವನ್ನು ಸ್ಯಾಕ್ಸೊಫೋನ್ನಲ್ಲಿ ನುಡಿಸಿದೆ. ಅವರಿಗೆ ಬಹಳ ಖುಷಿಯಾಗಿ ಅಭಿನಂದಿಸಿದರು. ಈ ಕ್ಷಣವನ್ನು ಮರೆಯುವಂತೆಯೇ ಇಲ್ಲ.</p>.<p><strong>ಇದನ್ನೂ ಓದಿ:</strong><a href="https://www.prajavani.net/article/%E0%B2%B8%E0%B3%8D%E0%B2%AF%E0%B2%BE%E0%B2%95%E0%B3%8D%E0%B2%B8%E0%B3%8B%E0%B2%AB%E0%B3%8B%E0%B2%A8%E0%B3%8D-%E0%B2%9A%E0%B2%95%E0%B3%8D%E0%B2%B0%E0%B2%B5%E0%B2%B0%E0%B3%8D%E0%B2%A4%E0%B2%BF-%E2%80%98%E0%B2%95%E0%B2%A6%E0%B3%8D%E0%B2%B0%E0%B2%BF%E2%80%99" target="_blank">ವ್ಯಕ್ತಿತ್ವ |ಸ್ಯಾಕ್ಸೋಫೋನ್ ಚಕ್ರವರ್ತಿ ‘ಕದ್ರಿ’</a></p>.<p>‘ವಿದೇಶಿ ವಾದ್ಯವನ್ನು ಕರ್ನಾಟಕ ಸಂಗೀತದ ಗಮಕಗಳಿಗೆ ಪಳಗಿಸುವುದು ಒಂದು ದೊಡ್ಡ ಸವಾಲು. ಮೊದಲು ಶಾಸ್ತ್ರೀಯ ಹಾಡುಗಾರಿಕೆ ಕಲಿತೆ. ಸ್ವಲ್ಪ ಸಮಯ ನಾಗಸ್ವರ ಅಭ್ಯಾಸ ಮಾಡಿದೆ. ಅದರ ಸ್ಥಾಯಿ ಗೊತ್ತಾದ ಮೇಲೆ ಪಾಶ್ಚಿಮಾತ್ಯ ಸಂಗೀತವನ್ನೂ ಅಭ್ಯಾಸ ಮಾಡಿದೆ. ಕರ್ನಾಟಕ ಸಂಗೀತದ ಎಲ್ಲ ರಾಗಗಳು ಗೊತ್ತಾದ ಮೇಲೆ ಸ್ಯಾಕ್ಸೊಫೋನ್ನಲ್ಲಿ ಅದನ್ನು ಅಳವಡಿಸಿದೆ. ನಿತ್ಯವೂ ಐದಾರು ಗಂಟೆಗಳ ಕಾಲ ಅಭ್ಯಾಸ ನಡೆಸಿ ನಮ್ಮ ಸಂಗೀತಕ್ಕೆ ವಾದ್ಯವನ್ನು ಒಗ್ಗಿಕೊಳ್ಳುವಂತೆ ಮಾಡಲು ಬಹಳ ಶ್ರಮಪಟ್ಟೆ.</p>.<p>‘ಮೊದಮೊದಲು ಕಛೇರಿ ಕೊಡುವಾಗ ಸ್ಯಾಕ್ಸೊಫೋನ್ನ ಸುಮಧುರ ನಾದ ನನಗೇ ರೋಮಾಂಚನ ನೀಡುತ್ತಿತ್ತು. ನನಗಾಗ 15ವರ್ಷ. ಮಂಗಳೂರಿನ ಮಾಧ್ವರೊಬ್ಬರ ಮನೆಯಲ್ಲಿಸತ್ಯನಾರಾಯಣ ಪೂಜೆ. ಅಲ್ಲಿ ನನಗೆ ಕಛೇರಿ ಕೊಡಲು ಆಹ್ವಾನ ಬಂತು. ಅವರ ಮನಗೆ ಹೋಗಿ ಅರ್ಧ ಗಂಟೆ ಸ್ಯಾಕ್ಸೊಫೋನ್ನಲಲ್ಲಿ ದೇವರನಾಮ ನುಡಿಸಿದೆ. ಆ ಮನೆಯ ಯಜಮಾನರು ಅದೇ ಮೊದಲು ಸ್ಯಾಕ್ಸೊಫೋನ್ನೋಡಿದ್ದು, ಸಂಗೀತ ಕೇಳಿದ್ದು. ಅವರು ಬಂದು, ‘ಅದು ಎಂಥದು ವಾದ್ಯ ಮಾರಾಯರೆ, ಸೌಂಡು ಭಾರೀ ಚಂದ ಉಂಟಲ್ಲ’ಎಂದರು. ಆಗ ಸ್ಯಾಕ್ಸೊಫೋನ್ಅವರ ಕೈಗೆ ಕೊಟ್ಟು ವಿವರ ನೀಡಿದೆ. ಅಲ್ಲಿಂದ ಪ್ರತಿ ವರ್ಷ ಸತ್ಯನಾರಾಯಣ ಪೂಜೆಸಮಯಕ್ಕೆ ಆಹ್ವಾನ ಬರುತ್ತಿತ್ತು’.</p>.<p><strong>ಇನ್ನಷ್ಟು...</strong></p>.<p><a href="https://www.prajavani.net/stories/national/kadri-gopalnath-saxophonist-672856.html" target="_blank">ಕುವೈತ್ನಲ್ಲಿರುವ ಕದ್ರಿ ಗೋಪಾಲನಾಥ್ ಪುತ್ರನಿಗೆ ವೀಸಾ ವ್ಯವಸ್ಥೆ ಮಾಡಿಕೊಡಿ: ಮನವಿ</a><br /><a href="https://www.prajavani.net/district/bengaluru-city/no-caste-music-says-kadri-672857.html" target="_blank">ಕದ್ರಿ ಗೋಪಾಲನಾಥ್ ಮನದ ಮಾತು: ಸಂಗೀತಕ್ಕೆ ಜಾತಿ ಇಲ್ಲ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>